ಹೃದಯಾಘಾತ: ಪೊಲೀಸ್ ಅಧಿಕಾರಿ ಸಾವು

ಕಾಸರಗೋಡು: ಹದಯಾಘಾತ ದಿಂದ ಪೊಲೀಸ್ ಅಧಿಕಾರಿ ಸಾವನ್ನ ಪ್ಪಿದ ಘಟನೆ ನಡೆದಿದೆ. ರಾಜಪುರಂ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಪೊಲೀಸ್ ಇನ್ಸ್‌ಪೆಕ್ಟರ್ ರಾಜಪುರಂ ಕಳ್ಳಾರು ನಿವಾಸಿ ಕೆ. ಚಂದ್ರನ್ (50) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ರಾತ್ರಿ 7 ಗಂಟೆಗೆ  ಕರ್ತವ್ಯ ಮುಗಿಸಿ  ಪೊಲೀಸ್ ಠಾಣೆಯಿಂದ ಮನೆಗೆ ತೆರಳಿದ್ದರು. 8.30ರ ವೇಳೆಗೆ ಅವರಿಗೆ ಶಾರೀರಿಕ ಅಸ್ವಸ್ಥತೆಯ ಅನುಭವ ಉಂಟಾಯಿತು. ತಕ್ಷಣ ಅವರನ್ನು ಪನತ್ತಡಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾ ದರೂ, ಅದು ಫಲಕಾರಿಯಾಗಿದೆ ಅವರು ನಿಧನ ಹೊಂದಿದರು.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಜಪುರಂ ಪೊಲೀಸ್ ಠಾಣೆಯ ಪರಿಸರದಲ್ಲಿ ನಡೆದ ಶುಚೀಕರಣ ಕೆಲಸದಲ್ಲೂ ಅವರು   ಭಾಗಿಯಾಗಿದ್ದರು. ಇವರು ಮಧುಮೇಹ ಕಾಯಿಲೆಗೆ ಸಂಬಂಧಿಸಿ ಚಿಕಿತ್ಸೆ ಪಡೆಯುತ್ತಿದ್ದರು.

ಮೃತರು ಪತ್ನಿ ಸುಜಾತ, ಮಕ್ಕಳಾದ ಶರತ್, ಜಿಷ್ಣು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಚಂದ್ರನ್‌ರ ಮಗ ಶರತ್ ವಿದೇಶದಲ್ಲಿದ್ದು, ಅವರು ಹಿಂತಿರುಗಿದ ಬಳಿಕ ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ಚಂದ್ರನ್‌ರ ನಿಧನಕ್ಕೆ ಪೊಲೀಸ್ ಇಲಾಖೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *

You cannot copy content of this page