1.47 ಕೋಟಿರೂ. ಮೌಲ್ಯದ ಚಿನ್ನ ವಶ ಕಾಸರಗೋಡು ನಿವಾಸಿ ಸೇರಿ ಇಬ್ಬರ ಸೆರೆ

ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಮತ್ತು ಕಸ್ಟಮ್ಸ್ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕಳ್ಳಸಾಗಾಟ ಮೂಲಕ ಸಾಗಿಸಲಾದ ೧.೪೭ ಕೋಟಿ ರೂ. ಮೌಲ್ಯದ ಚಿನ್ನ ಪತ್ತೆಹಚ್ಚಿ ವಶಪಡಿಸಲಾಗಿದೆ. ಕಾಸರ ಗೋಡಿನ ಅಬ್ದುಲ್ ರಹ್ಮಾನ್ ಮತ್ತು ಕಲ್ಲಿಕೋಟೆಯ ರಫೀಕ್ ಎಂಬವ ರಿಂದಾಗಿ ಈ ಮಾಲು ಪತ್ತೆಹಚ್ಚಿ ವಶಪಡಿಸಲಾಗಿದೆ. ಇವರಿಬ್ಬರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ದುಬಾಯಿಯಿಂದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಅವರನ್ನು ಡಿಆರ್‌ಐ ಮತ್ತು ಕಸ್ಟಮ್ಸ್ ತಂಡ ತಪಾಸಣೆಗೊಳಪಡಿಸಿದಾಗ, ಅಬ್ದುಲ್ ರಹ್ಮಾನ್‌ನಿಂದ ೭೬ ಲಕ್ಷ ರೂ. ಮೌಲ್ಯದ ೧೧೭೬ ಗ್ರಾಂ ಚಿನ್ನ ಮತ್ತು ರಫೀಕ್‌ನಿಂದ ೭೧ ಲಕ್ಷ ರೂ. ಮೌಲ್ಯದ ೧೦೮೬ ಗ್ರಾಂ ಚಿನ್ನ ಪತ್ತೆಹಚ್ಚಲಾಗಿದೆ. ಬಳಿಕ ಅವರಿಬ್ಬರನ್ನು ಕಸ್ಟಮ್ಸ್ ತಂಡ ಬಂಧಿಸಿದೆ.

Leave a Reply

Your email address will not be published. Required fields are marked *

You cannot copy content of this page