ಇಬ್ಬರು ಪುಟ್ಟ ಮಕ್ಕಳ ಸಹಿತ ಒಂದೇ ಕುಟುಂಬದ ನಾಲ್ಕು ಮಂದಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ:  ಪಯ್ಯನ್ನೂರು ಬಳಿಯ ರಾಮಂತಳಿ ಎಂಬಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಡಕ್ಕುಂಬಾಡ್ ಕೆ.ಟಿ. ಕಲಾಧರನ್ (38), ತಾಯಿ ಉಷಾ (60), ಕಲಾಧರನ್‌ರ ಮಕ್ಕಳಾದ ಹಿಮ(5), ಕಣ್ಣನ್ (2) ಎಂಬಿವರು ಮೃತಪಟ್ಟವರಾಗಿದ್ದಾರೆ.  ಉಷಾ ಹಾಗೂ ಕಲಾಧರನ್ ನೇಣು ಬಿಗಿದ ಸ್ಥಿತಿಯಲ್ಲೂ, ಮಕ್ಕಳು ಕೆಳಗೆ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳಿಗೆ ವಿಷ ನೀಡಿದ ಬಳಿಕ ಉಷಾ ಹಾಗೂ ಕಲಾಧರನ್ ನೇಣು ಬಿಗಿದು ಸಾವಿಗೀಡಾಗಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ನಿನ್ನೆ ರಾತ್ರಿ 8 ಗಂಟೆ ವೇಳೆ …

ಪತ್ನಿ, ಮಗುವಿನ ಮೇಲೆ ಹಲ್ಲೆ: ವ್ಯಕ್ತಿವಿರುದ್ಧ ನರಹತ್ಯಾ ಪ್ರಕರಣ ದಾಖಲು

ಕುಂಬಳೆ: ಪತ್ನಿ ಮತ್ತು ಪುತ್ರಿಯ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ದೂರಿನಂತೆ  ಪತಿ ವಿರುದ್ಧ  ಕುಂಬಳೆ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಂಬಳೆ ಸಮೀಪದ ಎಡನಾಡು ಪೆರ್ಣೆ ಸೌಪರ್ಣಿಕಾ ನಿಲಯದ ಆಶಾ ಕುಮಾರಿ ಕೆ.ಎಸ್ (39), ಮಗಳು ನಕ್ಷಿತಾ (8) ಎಂಬಿವರ ಮೇಲೆ ಹಲ್ಲೆ  ನಡೆಸಿ ಗಾಯಗೊಳಿಸಿದ ದೂರಿನಂತೆ  ಆಶಾ ಕುಮಾರಿಯ ಪತಿ ಕಣ್ಣೂರು ಚೆರುತ್ತಾಳಂ ಕಡನ್ನಪ್ಪಳ್ಳಿ ವಲಿಯಾಂಕೋಡ್ ಕುಲಾಪುರಂ ಕೂಲಿಯಾಡನ್ ವೀಟಿಲ್ ಸುರೇಶ್ (44) ಎಂಬಾತನ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಈ ತಿಂಗಳ …

ಬಿಜೆಪಿ ಕಾರ್ಯಕರ್ತ ನಿಧನ

ಉಪ್ಪಳ: ಮೀಂಜ ಮದಂಗಲ್ಲು ನಿವಾಸಿ ದಿ| ಕೃಷ್ಣಪ್ಪರ ಪುತ್ರ, ಬಿಜೆಪಿ ಸಕ್ರಿಯ ಕಾರ್ಯಕರ್ತ ನವೀನ (43) ನಿನ್ನೆ ಬೆಳಿಗ್ಗೆ ನಿಧನ ಹೊಂದಿ ದರು. ಮನೆಯಲ್ಲಿ ಹೃದಯÁಘಾತ ಉಂಟಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಹೊಂದಿದ್ದಾರೆ. ಸಾರಣೆ ಮೇಸ್ತಿç ಕೆಲಸವನ್ನು ನಿರ್ವಹಿಸುತ್ತಿದ್ದರು. ಇತ್ತೀಚೆಗೆ ನಡೆದ ತ್ರಿಸ್ತರ ಪಂಚಾ ಯತ್ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿ ಕೊಂಡಿ ದ್ದರು. ಮದಂಗಲ್ಲು ಶ್ರೀ ಮಹಾ ಗಣಪತಿ ಭಜನಾ ಮಂದಿರದ ಸಕ್ರಿಯ ಸದಸ್ಯರಾಗಿದ್ದರು. ಮೃತರು ತಾಯಿ ದೇವಕಿ, ಪತ್ನಿ ಶಿಲ್ಪ, ಮಕ್ಕಳಾದ …

ಸಾರ್ವಕಾಲಿಕ ಗರಿಷ್ಠ ದಾಖಲೆ: ಪವನ್‌ಗೆ 1 ಲಕ್ಷ ರೂ. ಗಡಿ ದಾಟಿ ನಾಗಾಲೋಟ ಮುಂದುವರಿಸಿದ ಚಿನ್ನದ ಬೆಲೆ

ತಿರುವನಂತಪುರ:  ಚಿನ್ನದ ಬೆಲೆಯ ನಾಗಾಲೋಟ ಇನ್ನೂ ಮುಂದುವರಿದಿದೆ. ನಿನ್ನೆ ಪವನ್‌ಗೆ 99,840 ರೂ. ಆಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಬೆಳಿಗ್ಗೆ 1,760 ರೂ.ಗಳ ಏರಿಕೆ ಉಂಟಾಗಿ   ಈಗ 1,01,600 ರೂ.ಗೇರಿ ಸಾರ್ವಕಾಲಿಕ ಗರಿಷ್ಠ ದಾಖಲೆ ನಿರ್ಮಿಸಿದೆ. ಈ ವರ್ಷ ಜನವರಿಯಲ್ಲಿ 1 ಪವನ್ ಚಿನ್ನದ ಬೆಲೆ ೫೭ ಸಾವಿರ ರೂ. ಆಗಿತ್ತು. ವರ್ಷದ ಕೊನೆಯ ತಿಂಗಳಾದ ಇಂದು ಅದು 1,01,600 ರೂ.ಗೇರಿದೆ. ಇದು ಚಿನ್ನದ ಬೆಲೆಯ ನಾಗಾಲೋಟ ಇನ್ನೂ ಮುಂದುವರಿ ಯಲಿದೆಯೆಂಬುವುದರ  ಒಂದು ಸೂಚನೆಯಾಗಿದೆ. ಜಾಗತಿಕ ಬಿಕ್ಕಟ್ಟಿನ …

ನಿಲ್ಲಿಸಿದ್ದ ಆಂಬುಲೆನ್ಸ್ ಕಳವುಗೈದ ಯುವಕ ಸೆರೆ

ಮಂಗಳೂರು: ನಿಲ್ಲಿಸಿದ್ದ ಆಂಬುಲೆನ್ಸ್‌ನ್ನು ಕಳವುಗೈದು ಕೊಂಡೊಯ್ದ ಯುವಕನೋರ್ವ ಸೆರೆಗೀಡಾಗಿದ್ದಾನೆ. ಕಾರ್ಕಳ ನಿವಾಸಿಯಾದ ಶೋಡನ್ (22) ಎಂಬಾತ ಸೆರೆಗೀಡಾದ ವ್ಯಕ್ತಿ. ಕಡಬದ    ಶಿರಾಡಿ ನಿವಾಸಿ ಸುರೇಶ್ (46) ನೀಡಿದ ದೂರಿನಂತೆ ಶೋಡನ್‌ನನ್ನು ಬಂಧಿಸಲಾಗಿದೆ. ಈ ತಿಂಗಳ ೧೯ರಂದು  ಆಂಬುಲೆನ್ಸ್ ಕಳವಿಗೀ ಡಾಗಿದೆ.  ಅಪಘಾತವೊಂದಕ್ಕೆ ಸಂಬಂಧಿಸಿ ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ಗುಂಡ್ಯ ಚೆಕ್ ಪೋಸ್ಟ್ ಸಮೀಪ ಆಂಬುಲೆನ್ಸ್ ನಿಲ್ಲಿಸಲಾಗಿತ್ತು.  ಬೇರೊಬ್ಬ ಚಾಲಕ ಶೀಘ್ರ ಅಲ್ಲಿಗೆ ತಲುಪುವನೆಂದು ತಿಳಿಸಿದ ಹಿನ್ನೆಲೆಯಲ್ಲಿ ಸುರೇಶ್ ಕೀಲಿಕೈಯನ್ನು ಆಂಬುಲೆನ್ಸ್‌ನೊಳಗೆ ಇರಿಸಿ ಮನೆಗೆ ಹೋಗಿದ್ದರು.    20ರಂದು …

ನಟಿಗೆ ದೌರ್ಜನ್ಯ ಪ್ರಕರಣದಲ್ಲಿ ದಿಲೀಪ್‌ರನ್ನು ಆರೋಪಮುಕ್ತಗೊಳಿಸಿದ ತೀರ್ಪಿನ ವಿರುದ್ಧ  ಅಪೀಲು ಸಲ್ಲಿಸಲು ಸರಕಾರ ಅನುಮತಿ

ಕೊಚ್ಚಿ: ನಟಿಗೆ ದೌರ್ಜನ್ಯಗೈದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲ ಯದ  ತೀರ್ಪಿನ ವಿರುದ್ಧ ಹೈಕೋ ರ್ಟ್‌ನಲ್ಲಿ ಅಪೀಲು ಸಲ್ಲಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.  ಡಿಜಿಪಿ ಹಾಗೂ ಸ್ಪೆಷಲ್ ಪ್ರಾಸಿಕ್ಯೂಟರ್‌ರ ಶಿಫಾರಸ್ಸನ್ನು ಅಂಗೀಕರಿಸಿ ಸರಕಾರ ಇದಕ್ಕೆ ಅಂಗೀಕಾರ ನೀಡಿದೆ. ೮ನೇ ಆರೋಪಿ ನಟ ದಿಲೀಪ್ ಸಹಿತ  4 ಮಂದಿಯನ್ನು ಆರೋಪಮುಕ್ತಗೊಳಿಸಿದ  ಎರ್ನಾಕುಳಂ ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸರಕಾರ ಅಪೀಲು ಸಲ್ಲಿಸಲಿದೆ.  ಸಂತ್ರಸ್ತೆ ಮುಖ್ಯಮಂತ್ರಿಯೊಂದಿಗೆ ನಡೆಸಿದ ಸಮಾಲೋಚನೆಯ ಬೆನ್ನಲ್ಲೇ ಅಪೀಲು  ಸಲ್ಲಿಸಲಿರುವ ಕ್ರಮಗಳನ್ನು ತ್ವರಿತಗೊಳಿ ಸಲು ಸರಕಾರ ತೀರ್ಮಾನಿಸಿದೆ.  …

ಎಂಡಿಎಂಎ ಮಾರಾಟಕ್ಕೆ ತಲುಪಿದ ಉಪ್ಪಳ ನಿವಾಸಿ ಉಳ್ಳಾಲದಲ್ಲಿ ಸೆರೆ

ಮಂಜೇಶ್ವರ: ಎಂಡಿಎಂಎ ಮಾರಾ ಟಕ್ಕೆ ತಲುಪಿದ ಉಪ್ಪಳ ನಿವಾಸಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮಾದಕ ವಸ್ತು ಪಡೆಯಲು ತಲುಪಿದ ವ್ಯಕ್ತಿಗಳು ಈ ವೇಳೆ ಪರಾರಿಯಾಗಿದ್ದಾರೆ. 22ರ ಹರೆಯದ ಶೇಖ್ ಮುಹಮ್ಮದ್ ಕೈಫ್ ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ತಲಪಾಡಿ ಕೆ.ಸಿ ರೋಡ್‌ನ ಫಲಾಹ್ ಶಾಲೆ ಬಸ್ ನಿಲಾಣ ಸಮೀಪದಿಂದ ಯುವಕನನ್ನು ಸೆರೆ ಹಿಡಿಯಲಾಗಿದೆ. ಪೊಲೀಸರನ್ನು ಕಂಡು ಶಮೀರ್ ಕಾಂಬ್ಳೆ, ಜಾವಿದ್ ಎಂಬಿವರು ಬೈಕ್‌ನಲ್ಲಿ ಪರಾರಿಯಾಗಿ ದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಶೇಖ್ ಮುಹಮ್ಮದ್ …

ಮಸೀದಿಗೆ ಹೋದ ಉಸ್ತಾದ್ ನಾಪತ್ತೆ: ಸ್ಕೂಟರ್ ರೈಲು ನಿಲ್ದಾಣ ಪರಿಸರದಲ್ಲಿ ಪತ್ತೆ

ಕುಂಬಳೆ: ಉಸ್ತಾದ್ ನಾಪತ್ತೆಯಾದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬಳೆಗೆ ಸಮೀಪದ ಬಂಬ್ರಾಣ ತುಂಬಿಯೋಡು ಹೌಸ್‌ನ ಅಬ್ದುಲ್ ರಶೀದ್ ಎಂಬವರ ಪುತ್ರ ಉಸ್ತಾದ್ ಮುಹಮ್ಮದ್ ಶಫೀಕ್ (32) ನಾಪತ್ತೆಯಾಗಿರುವುದಾಗಿ ಅವರ ಪತ್ನಿ ನಜ್ಮುನ್ನೀಸಾ ದೂರು ನೀಡಿದ್ದು, ಅದರಂತೆ ಕುಂಬಳೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಡಿಸೆಂಬರ್ 21ರಂದು ರಾತ್ರಿ 8 ಗಂಟೆಗೆ ಬಂಬ್ರಾಣದ ಮಸೀದಿಗೆಂದು ಹೋದ ಪತಿ ಬಳಿಕ ಮನೆಗೆ ಹಿಂತಿರುಗಿರಲಿಲ್ಲವೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ನಜ್ಮುನ್ನೀಸಾ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ನಾಪತ್ತೆ …

ಪೈಂಟಿಂಗ್ ವೇಳೆ ಬಿದ್ದು ಗಾಯಗೊಂಡ ಕಾರ್ಮಿಕ ಸಾವು

ಕಾಸರಗೋಡು: ಪೈಂಟಿಂಗ್ ಕೆಲಸದ ವೇಳೆ ಕುರ್ಚಿಯಿಂದ ಬಿದ್ದು ಗಾಯಗೊಂಡ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಕಲ್ಲಿಕೋಟೆ ಕೊಟ್ಟೋಳಿ ನೆಲ್ಲಿಕೋಟ್ ವೆಳಿಪೋಕ್ ಪುದಿಯೋಟ್ಟತ್ತಿಲ್ ಹೌಸ್‌ನ  ಸುರೇಶ್‌ಬಾಬು (63) ಸಾವನ್ನಪ್ಪಿದ ವ್ಯಕ್ತಿ. ಡಿಸೆಂಬರ್ ೬ರಂದು ಬೆಳಿಗ್ಗೆ ಮೇಲ್ಪರಂಬದ ಸಂಸ್ಥೆಯೊಂದರಲ್ಲಿ ಸುರೇಶ್‌ಬಾಬು ಕುರ್ಚಿಯ ಮೇಲೆ ಹತ್ತಿ ಕಾರಿನ ಮೇಲಿನ  ಭಾಗಕ್ಕೆ ಸ್ಪ್ರೇ ಪೈಂಟಿಂಗ್ ನಡೆಸುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ತಲೆ ಮತ್ತು ಕೈಗಳಿಗೆ ಗಾಯ ಉಂಟಾಗಿತ್ತು. ತಕ್ಷಣ ಇತರ ಕಾರ್ಮಿಕರು    ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ  …

ಸುವರ್ಣಗಿರಿ ಹೊಳೆಯ ಸೇತುವೆಯ ಆವರಣ ಕುಸಿತ: ಮುಟ್ಟಂ-ಬೇರಿಕೆ ರಸ್ತೆಯಲ್ಲಿ ಅಪಾಯಭೀತಿ

ಕುಂಬಳೆ: ಮಂಗಲ್ಪಾಡಿ ಪಂಚಾಯತ್‌ನ ಸುವರ್ಣಗಿರಿ ಹೊಳೆಗೆ ನಿರ್ಮಿಸಿದ ಸೇತುವೆಯ ಆವರಣದ ಒಂದು ಭಾಗ ಕುಸಿದು ಬಿದ್ದಿದ್ದು, ಇದರಿಂದ ಪ್ರಯಾಣಿಕರು ಆತಂಕಪಡುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆ ಇದಾಗಿದ್ದು, ಇದುವೇ ಆವರಣ ಕುಸಿಯಲು ಕಾರಣವೆಂದು ನಾಗರಿಕರು ತಿಳಿಸುತ್ತಿದ್ದಾರೆ. ಇದರಿಂದ ಮುಟ್ಟಂ-ಬೇರಿಕೆ ರಸ್ತೆಯಲ್ಲಿ ಸಂಚಾರಕ್ಕೆ ಅಪಾಯಭೀತಿಯೊ ಡ್ಡುತ್ತಿದೆ. ಬೇರಿಕೆ ಬೀಚ್‌ಗೆ ತೆರಳುವ ಪ್ರಧಾನ ರಸ್ತೆ ಇದಾಗಿದೆ. ಈ ಭಾಗ ದಿಂದ ೫೦೦ರಷ್ಟು ಕುಟುಂಬಗಳು ರಾಷ್ಟ್ರೀಯ ಹೆದ್ದಾರಿಗೆ ತಲುಪಬೇಕಾ ದರೆ ಇದೇ ರಸ್ತೆಯಲ್ಲಿ ತೆರಳಬೇಕಾಗು ತ್ತದೆ. ದಿನಂಪ್ರತಿ ಶಾಲಾ ಬಸ್‌ಗಳ …