ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದು ಕಂದಕಕ್ಕೆ ಮಗುಚಿಬಿದ್ದ ವ್ಯಾನ್: ಚಾಲಕನನ್ನು ಅಪಾಯದಿಂದ ರಕ್ಷಿಸಿದ ನಾಗರಿಕರು 

ಬದಿಯಡ್ಕ: ನಿಯಂತ್ರಣ ತಪ್ಪಿದ ಓಮ್ನಿ ವ್ಯಾನ್ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಬಳಿಕ 12 ಅಡಿ ಆಳದ ಕಂದಕಕ್ಕೆ ಮಗುಚಿಬಿದ್ದಿದೆ.  ದೀರ್ಘ ಹೊತ್ತು ವ್ಯಾನ್‌ನಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ನಾಗರಿಕರು ಅತೀ ಸಾಹಸಿಕವಾಗಿ  ರಕ್ಷಿಸಿದ್ದಾರೆ. ಬದಿಯಡ್ಕ ವಿದ್ಯಾಗಿರಿ ಬಜದ ಸತ್ಯನಾರಾಯಣ ಭಟ್ (70)  ಎಂಬವರನ್ನು ನಾಗರಿಕರು ರಕ್ಷಿಸಿದ್ದಾರೆ. ಬಳಿಕ  ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ 7 ಗಂಟೆ ವೇಳೆ  ವಿದ್ಯಾಗಿರಿ ನವಕಾನ ಎಂಬಲ್ಲಿ ಅಪಘಾತವುಂಟಾ ಗಿದೆ.   ಶುಗರ್ ತಪಾಸಣೆಗಾಗಿ ಸತ್ಯನಾರಾ ಯಣ ಭಟ್   …

ಹೊಳೆಯಿಂದ ಅನಧಿಕೃತ ಹೊಯ್ಗೆ ಸಾಗಾಟ ವಿರುದ್ಧ ಕಠಿಣ ಕ್ರಮ: ಪಾಚಾಣಿಯಿಂದ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿ ವಶ; ಇಬ್ಬರ ಬಂಧನ; ಕಳವು ಪ್ರಕರಣ ದಾಖಲು

ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಲಾರಿಯ ಚಾಲಕ ಚೇಪಿನಡ್ಕ ಮದೀನ ಮಂಜಿಲ್‌ನ ಮೊಯ್ದೀನ್ ಕುಂಞಿ (32) ಹಾಗೂ ಮಾಲಕ ವಳಯಂನ ಕಬೀರ್ (44) ಎಂಬಿವರನ್ನು ಬಂಧಿಸಲಾಗಿದೆ. ಈ ಪೈಕಿ ಮೊಯ್ದೀನ್ ಕುಂಞಯನ್ನು ನ್ಯಾಯಾಲಯಕ್ಕೆ ಹಾಜರುಪಡಿ ಸಿದ್ದು, ಈ ವೇಳೆ ಈತನಿಗೆ ರಿಮಾಂಡ್ ವಿಧಿಸಲಾಗಿದೆ. ಕಬೀರ್‌ನನ್ನು ಇಂದು  ನ್ಯಾಯಾ ಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ಮುಗುರೋಡ್ ಪಾಚಾಣಿಯ ಹೊಳೆ ಯಿಂದ ಅನಧಿಕೃತವಾಗಿ ಸಂಗ್ರಹಿಸಿದ …

ಮದ್ಯದಮಲಿನಲ್ಲಿ ಚಲಾಯಿಸಿದ ಕಾರು ನಿಲ್ಲಿಸಿದ್ದ ಸ್ಕೂಟರ್‌ಗೆ ಢಿಕ್ಕಿ: ಸವಾರ ಸಹಿತ ಮೂವರಿಗೆ ಗಾಯ

ಉಪ್ಪಳ: ಮದ್ಯದಮಲಿನಲ್ಲಿ ಚಲಾಯಿಸಿದ ಕಾರು ನಿಯಂತ್ರಣ ತಪ್ಪಿ ನಿಲ್ಲಿಸಿದ್ದ  ಸ್ಕೂಟರ್‌ಗೆ ಢಿಕ್ಕಿ ಹೊಡೆದಿದ್ದು, ಇದರಿಂದ ಸವಾರ ಸಹಿತ ಮೂರು ಮಂದಿ ಗಾಯಗೊಂಡ ಘಟನೆ ನಿನ್ನೆ ರಾತ್ರಿ ಮಜಿಬೈಲು ಜಂಕ್ಷನ್‌ನಲ್ಲಿ ನಡೆದಿದೆ.  ಮಜಿಬೈಲು ನಿವಾಸಿಗಳಾದ ದಯಾನಂದ (37), ಕೃಷ್ಣ ಕುಮಾರ್ (29), ಸುಧಾಕರ (51) ಎಂಬವರು ಗಾಯಗೊಂಡಿದ್ದಾರೆ. ಈ ಪೈಕಿ ದಯಾನಂದರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮತ್ತಿಬ್ಬರು ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಕಾರು ಚಾಲಕನಾದ ಶಿರಂತಡ್ಕ ಚಿಪ್ಪಾರು ಅಮ್ಮೇರಿಯ ಶಹಾದ್ ಬಿ (40) ಎಂಬಾತನನ್ನು ಮಂಜೇಶ್ವರ …

ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವ ಜನಪ್ರಿಯ ನಾಯಕ

ದೆಹಲಿ: ಜಾಗತಿಕ ಜನಪ್ರಿಯ ಪ್ರಜಾಪ್ರಭುತ್ವ ಮುಖಂಡನಾಗಿ  ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಯುಎಸ್ ಡಾಟಾ ಅನಲಿಸ್ಟ್ ಸಂಸ್ಥೆಯಾದ ಮೋನಿಟಿಂಗ್ ಕನ್ಸಲ್ಟ್ ನಡೆಸಿದ ವಿಶ್ವಸಮೀಕ್ಷೆಯಲ್ಲಿ ಆಯ್ಕೆ ಮಾಡಲಾಗಿದೆ. ಸಮೀಕ್ಷೆಯಲ್ಲಿ ಮೋದಿಗೆ 68 ಶೇಕಡಾ ರೇಟಿಂಗ್ ಲಭಿಸಿದೆ. ಭಾಗವಹಿಸಿದ 26 ಶೇಕಡಾ ಮಂದಿ  ಮೋದಿಗೆ ವಿರೋಧವಾಗಿ ಪ್ರತಿಕ್ರಿಯಿಸಿದ್ದಾರೆ. 6 ಶೇಕಡಾ ಮಂದಿ ಅಭಿಪ್ರಾಯ ಪ್ರಕಟಿಸಿಲ್ಲ. ಈ ತಿಂಗಳ 2ರಿಂದ 8ರ ಮಧ್ಯೆಗಿನ ಸಮಯದಲ್ಲಿ ಸಮೀಕ್ಷೆ ನಡೆಸಲಾಗಿದೆ. ಸ್ವಿಝರ್‌ಲ್ಯಾಂಡ್ ಅಧ್ಯಕ್ಷ ಗೈಪಾರ್ಮಲ್, ದಕ್ಷಿಣ ಕೊರಿಯ ಅಧ್ಯಕ್ಷ ಲಿಜಯ್ ಮ್ಯೂಂಗ್ ಎಂಬಿವರು ೨ನೇ ಸ್ಥಾನದಲ್ಲಿದ್ದಾರೆ. …

ಎದೆನೋವು: ಶಸ್ತ್ರಚಿಕಿತ್ಸೆಗೊಳಗಾದ ಹೋಟೆಲ್ ನೌಕರ ನಿಧನ

ಕುಂಬಳೆ: ಹಲವು ವರ್ಷಗಳಿಂದ ಕುಂಬಳೆಯಲ್ಲಿ ಹೋಟೆಲ್ ನೌಕರನಾಗಿದ್ದು, ಕುಂಬಳೆ ಪೆಟ್ರೋಲ್ ಬಂಕ್ ಬಳಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಚಂದ್ರನ್ (70) ನಿಧನ ಹೊಂದಿದರು.  ನಾಲ್ಕು ದಿನಗಳ ಹಿಂದೆ ಇವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿತ್ತು. ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸಬೇಕೆಂದು ಆಸ್ಪತ್ರೆ ಅಧಿಕಾರಿಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಆದರೆ ಅನಂತರ ಅವರು ಅರೆಪ್ರಜ್ಞಾವಸ್ಥೆ ಯಲ್ಲಿದ್ದರು. ಇದರಿಂದ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಅವರಿಗೆಚಿಕಿತ್ಸೆ ಮುಂದುವರಿಸ ಲಾಯಿತು. ಆದರೆ ಗುಣಮುಖ ರಾಗದ …

ಪುಳಿಕುತ್ತಿ ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದಲ್ಲಿ ನೇಮೋತ್ಸವ ಇಂದಿನಿಂದ

ಮಂಗಲ್ಪಾಡಿ: ಪುಳಿಕುತ್ತಿ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಇಂದಿನಿAದ ಈ ತಿಂಗಳ 28ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಭಂಡಾರ ಮನೆಯಲ್ಲಿ ಶ್ರಿ ಗುಳಿಗ ದೈವದ ಕೋಲ ನಡೆಯಿತು. 2ರಿಂದ ಶ್ರೀ ಕೊರತಿ ದೈವದ ಕೋಲ, ಸಂಜೆ 6.30ಕ್ಕೆ ಶ್ರೀ ದೈವಗಳ ಭಂಡಾರ ಆಗಮನ, ರಾತ್ರಿ 7ಕ್ಕೆ ಸ್ಥಳೀಯ ಮಕ್ಕಳಿಂದ ನೃತ್ಯ, 7.30ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಂದಾಳು ಎಂ.ಕೆ ಅಶೋಕ್ ಕುಮಾರ್ ಹೊಳ್ಳ ಅಧ್ಯಕ್ಷತೆ ವಹಿಸುವರು. …

ಪರೀಕ್ಷೆ ಮುಗಿಸಿ ಗೆಳೆಯರ ಜೊತೆ ಸ್ನಾನಕ್ಕಿಳಿದ ವಿದ್ಯಾರ್ಥಿ ಮುಳುಗಿ ಮೃತ್ಯು

ಕೊಚ್ಚಿ: ಪರೀಕ್ಷೆ ಮುಗಿಸಿ ಗೆಳೆಯರ ಜೊತೆ ಕಾಲುವೆಯಲ್ಲಿ ಸ್ನಾನಕ್ಕೆಂದು ಇಳಿದ 10ನೇ ತರಗತಿ ವಿದ್ಯಾರ್ಥಿ ಮುಳುಗಿ ಮೃತಪಟ್ಟನು. ಕಂಡಂದರ ನಿವಾಸಿ ರಿನಾಸ್ (15) ಮೃತಪಟ್ಟ ವಿದ್ಯಾರ್ಥಿ. ವಳಯನ್‌ಚಿರಂಙರ ಪೆರಿಯಾರ್ ವಾಲಿ ಕಾಲುವೆಯಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ. ಈತ ಪೆರುಂಬಾವೂರ್ ಬಾಯ್ಸ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಕಾಲುವೆಯಲ್ಲಿ ಭಾರೀ ಪ್ರವಾಹವಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿ ಸ್ನಾನ ಮಾಡಲು ಅವಕಾಶವಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ರಿನಾಸ್‌ಗೆ ಈಜಲು ತಿಳಿದಿರಲಿಲ್ಲವೆನ್ನಲಾಗಿದೆ. ಆದರೂ ಕಾಲುವೆಯಲ್ಲಿ ಸ್ನಾನಕ್ಕಾಗಿ ಇಳಿದ ಈತ ಪ್ರವಾಹಕ್ಕೆ ಸಿಲುಕಿದಾಗ …

ಹೊಸಕಟ್ಟೆ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಹೊಸಂಗಡಿ: ಹೊಸಕಟ್ಟೆ ಶ್ರೀ ರಕ್ತೇಶ್ವರಿ ದೈವ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಎಪ್ರಿಲ್ ೨೩ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಶ್ರೀ ರಾಜೇಶ್ ತಾಳಿತ್ತಾಯ ಬಿಡುಗಡೆಗೊಳಿಸಿದರು. ಈ ವೇಳೆ ಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ, ಸಮಿತಿ ಗೌರವಾಧ್ಯಕ್ಷ ರಾಮ ಪ್ರಕಾಶ್ ಆಳ್ವ, ಅಧ್ಯಕ್ಷ ಚಂದ್ರಹಾಸ ವರ್ಕಾಡಿ, ಕಾರ್ಯಾಧ್ಯಕ್ಷ ಚೆನ್ನಪ್ಪ ವರ್ಕಾಡಿ, ಸೇವಾ ಟ್ರಸ್ಟ್ ಅಧ್ಯಕ್ಷ ದಾಮೋದರ ಸಿ, ಆಡಳಿತ ಮೊಕ್ತೇಸರ ಮನೋಜ್ ಹೊಸಕಟ್ಟೆ ಭಾಗವಹಿಸಿದರು. ಇದೇ ವೇಳೆ ಕ್ಷೇತ್ರದ ನಾಗ ದೇವರ ಕಟ್ಟೆಗೆ ಶಿಲಾನ್ಯಾಸ ನಡೆಸಲಾಯಿತು.

ತಿರುವನಂತಪುರ ಮೇಯರ್ ವಿ.ವಿ. ರಾಜೇಶ್ ನಾಳೆ ಮಂಜೇಶ್ವರಕ್ಕೆ

ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆಯಂಗವಾಗಿ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ರವರ ಪ್ರಚಾರದ ನಿಮಿತ್ತ ನಾಳೆ ತಿರುವನಂತಪುರ ಮೇಯರ್ ವಿ.ವಿ ರಾಜೇಶ್ ಮಂಜೇಶ್ವರಕ್ಕೆ ಆಗಮಿಸುವರು. ಬೆಳಿಗ್ಗೆ 11ಗಂಟೆಗೆ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ಗಳ ಸಮಾವೇಶ ಸೋಂಕಾಲು ಎನ್.ಡಿ.ಎ ಚುನಾವಣಾ ಕಚೇರಿಯಲ್ಲಿ ನಡೆಯಲಿದೆ. ಸಂಜೆ 5ಕ್ಕೆ ಕುಂಬಳೆ ಪೇಟೆಯಲ್ಲಿ ಅಭ್ಯರ್ಥಿ ಕೆ.ಸುರೇಂದ್ರನ್‌ರ ರೋಡ್ ಶೋ ಕಾರ್ಯಕ್ರಮ ನಡೆಯಲಿದೆ.

ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾರರು ಮಂಜೇಶ್ವರದಲ್ಲಿ

ಕಾಸರಗೋಡು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಎಂಬಂತೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 230113 ಮತದಾರರಿದ್ದಾರೆ. ಇದರಲ್ಲಿ 115801 ಪುರುಷರು ಮತ್ತು 114312 ಮಹಿಳೆಯರು ಒಳಗೊಂಡಿದ್ದಾರೆ. ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ 105824 ಪುರುಷರು, 105399 ಮಹಿಳೆಯರು ಸೇರಿ ಒಟ್ಟು 210923 ಮತದಾರರಿದ್ದಾರೆ. ಉದುಮ ಕ್ಷೇತ್ರದಲ್ಲಿ 112166 ಪುರುಷರು, 116342 ಮಹಿಳೆಯರು, ನಾಲ್ವರು ಮಂಗಳಮುಖಿ ಯರು ಸೇರಿ ಒಟ್ಟು 258512 ಮತದಾರರಿದ್ದಾರೆ. ಹೊಸದುರ್ಗ ಕ್ಷೇತ್ರದಲ್ಲಿ ಒಟ್ಟು 223980 ಮತದಾರರಿದ್ದು, ಇದರಲ್ಲಿ 109008 ಪುರುಷರು, 114966 …