ಇಬ್ಬರು ಬಾಲಕರಿಗೆ ಸಲಿಂಗರತಿ ಕಿರುಕುಳ: ಸಂಬಂಧಿಕನಾದ ಮಧ್ಯವಯಸ್ಕನ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಹತ್ತು ಹಾಗೂ 15 ವರ್ಷ ಪ್ರಾಯದ ಇಬ್ಬರು ಬಾಲಕರಿಗೆ ಸಲಿಂಗರತಿ ಕಿರುಕುಳ ನೀಡಿದ ಆರೋಪದಂತೆ 55ರ ಹರೆಯದ ವ್ಯಕ್ತಿ ವಿರುದ್ಧ ಮೇಲ್ಪರಂಬ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.  ಕಿರುಕುಳ ಕ್ಕೊಳಗಾದ ಬಾಲಕರು ಕಾಸರಗೋಡು ನಗರ ಪೊಲೀಸ್ ಠಾಣೆ  ವ್ಯಾಪ್ತಿಯ ನಿವಾಸಿಗಳಾ ಗಿದ್ದಾರೆ.  ಈ ಇಬ್ಬರು ಹತ್ತಿರದ ಸಂಬಂಧಿಕನಾದ 55ರ ಹರೆಯದ ವ್ಯಕ್ತಿಯ ಮನೆಗೆ ಹೋದ ಸಂದರ್ಭದಲ್ಲಿ ಹಲವು ಬಾರಿ ಕಿರುಕುಳ ನೀಡಿರುವು ದಾಗಿ ದೂರಲಾಗಿದೆ. ಆದರೆ ಭಯದಿಂದ ಕಿರುಕುಳ ಘಟನೆ ಬಗ್ಗೆ ಮಕ್ಕಳು ಯಾರಲ್ಲೂ …

ಪರಿಯಾರಂ  ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಶೌಚಾಲ ಯದಲ್ಲಿ ನೇಣುಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರ. ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಬಂದಡ್ಕ  ಲೋಕೋಪಯೋಗಿ ಬಂಗಲೆ ಸಮೀಪದ ತುಡಿಯಿಲ್ ವಿನೋದ್ (46) ಮೃತಪಟ್ಟ ವ್ಯಕ್ತಿ. ಇಂದು ಮುಂಜಾನೆ ಮೆಡಿಕಲ್ ಕಾಲೇಜು ಆಸ್ಪತ್ರೆಯ 803ನೇ ವಾರ್ಡ್‌ನ ಶೌಚಾಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದರು. ಕೂಡಲೇ ಇವರನ್ನು ತುರ್ತು ನಿಗಾ ವಿಭಾಗಕ್ಕೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಕಿಡ್ನಿ ಸಂಬಂಧ ಅಸೌಖ್ಯದ ಚಿಕಿತ್ಸೆಗಾಗಿ ಎರಡು ದಿನಗಳ ಹಿಂದೆ ವಿನೋದ್‌ರನ್ನು …

ಪೆರ್ಲ ಪೇಟೆಯಲ್ಲಿ ಉತ್ಸಾಹ ಸೃಷ್ಟಿಸಿ ಬಿಜೆಪಿ ರೋಡ್‌ಶೋ

ಪೆರ್ಲ: ಚುನಾವಣೆಯ ಬಹಿರಂಗ ಪ್ರಚಾರ ಅಂತಿಮಗೊಂಡ ನಿನ್ನೆ ಪೆರ್ಲ ಪೇಟೆಯಲ್ಲಿ ನಡೆದ ಕೆ. ಸುರೇಂದ್ರನ್, ಕೆ. ಅಣ್ಣಾಮಲೈ ಅವರ ರೋಡ್‌ಶೋ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ವಾದ್ಯ ಘೋಷಗಳೊಂದಿಗೆ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು. ಪೆರ್ಲ ಚೆಕ್‌ಪೋ ಸ್ಟ್‌ನಿಂದ ಆರಂಭವಾದ ರೋಡ್ ಶೋ ಪೆರ್ಲದಲ್ಲಿ ಸಮಾಪ್ತಿಗೊಂಡಿತು. ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಮಾಮಲೈ ಮಾತನಾಡಿ, ಅಭಿವೃದ್ಧಿಮಂತ್ರ ಬಿಜೆಪಿಯ ಏಕೈಕ ದ್ಯೇಯವಾಗಿದೆ ಎಂದರು. ಕೆ. ಸುರೇಂದ್ರನ್ ಮಾತನಾಡಿ, ಈ ಬಾರಿ ಸ್ಪರ್ಧಿಸಿರುವುದು ಮಂಜೇಶ್ವರದಲ್ಲಿ ಗೆಲುವು ಸಾಧಿಸಲೆಂದಾಗಿದೆ. ಗೆದ್ದರೆ ಸರ್ವತೋಮುಖ …

ವಿಧಾನಸಭಾ ಚುನಾವಣೆ: ಜಿಲ್ಲೆಯಲ್ಲಿ ನಿಷೇಧಾಜ್ಞೆ ಜ್ಯಾರಿ

ಕಾಸರಗೋಡು: ಕೇರಳ ವಿಧಾನಸಭೆಗೆ ನಡೆಯುವ ಚುನಾವಣೆಯನ್ನು ಶಾಂತಿ ಹಾಗೂ ನ್ಯಾಯಯುತವಾಗಿ ನಡೆಸಲು ಕಾಸರಗೋಡು ಜಿಲ್ಲಾ ಮೆಜಿಸ್ಟ್ರೇಟ್ ಆಗಿರುವ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನಿಷೇಧಾಜ್ಞೆ ಜ್ಯಾರಿಗೊಳಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ 163ನೇ ಪರಿಚ್ಚೇದ ಪ್ರಕಾರ ಈ ನಿಷೇಧಾಜ್ಞೆ ಆದೇಶ ಜ್ಯಾರಿಗೊಳಿಸಲಾಗಿದೆ. ಇದು ನಿನ್ನೆ ಸಂಜೆಯಿಂದ ಜ್ಯಾರಿಗೊಂಡಿದ್ದು ಎ. 10ರಂದು ಬೆಳಿಗ್ಗೆ ೬ಗಂಟೆತನಕ ಮುಂದುವರಿಯಲಿದೆ. ಸ್ವತಂತ್ರ ಹಾಗೂ ನ್ಯಾಯಯುತವಾದ ರೀತಿಯಲ್ಲಿ ಚುನಾವಣೆಯನ್ನು ಖಾತರಿಪಡಿಸುವ ಹಾಗೂ ಮತದಾನ ವೇಳೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಇಂತಹ ಕಠಿಣ ಕ್ರಮ …

ಆವೇಶದ ಚುನಾವಣಾ ಪ್ರಚಾರಕ್ಕೆ ತೆರೆ

ಕಾಸರಗೋಡು: ಕೇರಳ ವಿಧಾನಸಭೆಗೆ ನಾಳೆ ನಡೆಯಲಿರುವ ಚುನಾವಣೆಯ ಆವೇಶಭರಿತ ಅಬ್ಬರದ ಪ್ರಚಾರಕ್ಕೆ ನಿನ್ನೆ ಸಂಜೆ  6 ಗಂಟೆಗೆ ತೆರೆಬಿದ್ದಿದೆ. ಕೊನೆಯ ದಿನವಾದ ನಿನ್ನೆ ಸಂಜೆ ಯುಡಿಎಫ್, ಎಲ್‌ಡಿಎಫ್ ಮತ್ತು ಎನ್‌ಡಿಎ ಅಭ್ಯರ್ಥಿಗಳ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಆವೇಶಭರಿತ ಹಾಗೂ ಆಕರ್ಷಕ ರೀತಿಯ ರೋಡ್‌ಶೋಗಳು ನಡೆದವು. ಕಾರ್ಯಕರ್ತರು ಭಾರೀ ಆವೇಶಭರಿತವಾಗಿ ತಮ್ಮ  ಅಭ್ಯರ್ಥಿಗಳ ಪರ ಮುಗಿಲು ಮುಟ್ಟುವ ಘೋಷಣೆ ಗಳೊಂದಿಗೆ ಪ್ರಚಾರದ ಕೊನೆಯ ಘಳಿಗೆ ತನಕ ಮತಯಾಚನೆ ನಡೆಸಿದರು. ಎಲ್ಲವೂ ಶಾಂತಿಯುತವಾದ ರೀತಿಯಲ್ಲೇ ನಡೆಯಿತು. ಪೊಲೀಸರು ಹಾಗೂ ಕೇಂದ್ರ …

ವಿವಿಧ ಪಕ್ಷಗಳ ಬಹಿರಂಗ ಪ್ರಚಾರ ಸಮಾಪ್ತಿ

ಉಪ್ಪಳ: ವಿಧಾನಸಭಾ ಚುನಾವಣೆ ಬಹಿರಂಗ ಪ್ರಚಾರ ನಿನ್ನೆ ಸಂಜೆ ಮುಕ್ತಾಯಗೊಂಡಿದ್ದು, ವಿವಿಧ ಪಕ್ಷಗಳ ಅಂತಿಮ ಪ್ರಚಾರ ಭರಾಟೆ ನಡೆದಿದೆ. ಉಪ್ಪಳದಲ್ಲಿ ಐಕ್ಯರಂಗದ ಅಭ್ಯರ್ಥಿ ಎಕೆಎಂ ಅಶ್ರಫ್‌ರ ಪ್ರಚಾರ ಮೆರವಣಿಗೆ ನಯಾಬಜಾರ್‌ನಿಂದ ಆರಂಭಗೊಂಡಿತು. ತೆರೆದ ವಾಹನದಲ್ಲಿ ಅಭ್ಯರ್ಥಿಯ ಮೆರವಣಿಗೆ ವೇಳೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದರು. ಮೆರವಣಿಗೆ ಉಪ್ಪಳದಲ್ಲಿ ಸಮಾಪ್ತಿಗೊಂಡಿತು. ಎಡರಂಗದ ಅಭ್ಯರ್ಥಿ ಕೆ.ಆರ್. ಜಯಾನಂದರ ಬಹಿರಂಗ ಪ್ರಚಾರ ಸಮಾಪ್ತಿ ಅಂಗವಾಗಿ ಅಂಗಡಿಪದವಿನಿಂದ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಯಿತು. ಹೊಸಂಗಡಿಯಲ್ಲಿ ಸಮಾಪ್ತಿಗೊಂಡ ಮೆರವಣಿಗೆಯಲ್ಲಿ ಮುಖಂಡರಾದ ಸಿಜಿ ಮ್ಯಾಥ್ಯು ಮಾತನಾಡಿದರು. ಕುಂಬಳೆ, …

ಕುಂಬ್ಡಾಜೆ ಪಂಚಾಯತ್‌ನಲ್ಲಿ ಕಾಂಗ್ರೆಸ್, ಸಿಪಿಎಂ ತ್ಯಜಿಸಿ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

ಬದಿಯಡ್ಕ: ಕುಂಬ್ಡಾಜೆ ಪಂಚಾಯತ್‌ನ ವಿವಿಧ ಭಾಗ ಗಳಿಂದ ಸಿಪಿಎಂ ಹಾಗೂ ಕಾಂ ಗ್ರೆಸ್ ಪಕ್ಷಗಳಿಗೆ ರಾಜೀನಾಮೆ ನೀಡಿ ಹಲವರು ಕಾರ್ಯ ಕರ್ತರು ಬಿಜೆಪಿಗೆ ಸೇರ್ಪಡೆ ಗೊಂಡಿರುವು ದಾಗಿ ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ. ಇವರನ್ನು ಏತಡ್ಕದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಪನ್ವೇಲ್ ಶಾಸಕ ಪ್ರಶಾಂತ್ ಠಾಕೂರ್ ಎಂಬಿವರ ಉಪಸ್ಥಿತಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷೆಯೂ, ಎನ್‌ಡಿಎ ಅಭ್ಯರ್ಥಿಯಾದ ಅಶ್ವಿನಿ ಎಂ.ಎಲ್. ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಿದರು.  ಕೇರಳದಲ್ಲಿ ಭವಿಷ್ಯದಲ್ಲಿ ಉಂಟಾಗಬಹುದಾದ ರಾಜಕೀಯ ಬದಲಾವಣೆಗೆ ಇದು …

ಅಬಕಾರಿ ಗುಪ್ತಚರ ವಿಭಾಗದಿಂದ ವ್ಯಾಪಕ ಕಾರ್ಯಾಚರಣೆ: ಬೃಹತ್ ಪ್ರಮಾಣದ ಮದ್ಯ, ಮಾದಕದ್ರವ್ಯ ವಶ

ಕಾಸರಗೋಡು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಗುಪ್ತಚರ ವಿಭಾಗ ಕಾಸರಗೋಡು ಸೇರಿದಂತೆ ರಾಜ್ಯಾದ್ಯಂತವಾಗಿ ಎಲ್ಲಾ ಜಿಲ್ಲೆಗಳಲ್ಲಿ ಆಪರೇಷನ್ ಹಾಟ್‌ಸ್ಪೋಟ್, ಆಪರೇಷನ್ ಸಿ-ಹಂಟ್‌ನಂತೆ ವ್ಯಾಪಕ ಕಾರ್ಯಾಚರಣೆ ಆರಂಭಿಸಿದೆ. ಇದರಂತೆ ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಸೇರಿದಂತೆ ಹಲವು ಕೇಂದ್ರಗಳಿಗೆ ಅಬಕಾರಿ ಗುಪ್ತಚರ ವಿಭಾಗ ದಾಳಿ ನಡೆಸಿದೆ. ಇದರಂತೆ ಮಾರ್ಚ್ 16ರಿಂದ ಆರಂಭಗೊಂಡು ಎಪ್ರಿಲ್ 2ರ ತನಕದ ಅವಧಿಯಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ 61 ಅಬಕಾರಿ ಪ್ರಕರಣಗಳು, 52 ಮಾದಕದ್ರವ್ಯ ಪ್ರಕರಣಗಳು ಮತ್ತು ನಿಷೇಧಿತ ತಂಬಾಕು ಉತ್ಪನ್ನಕ್ಕೆ ಸೇರಿದ 47 …

ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಉಪ್ಪಳ: ವಿಷ ಸೇವಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಜೋಡುಕಲ್ಲು ನವೋದಯನಗರದ  ಕೃಷ್ಣ ಎಂಬವರ ಪುತ್ರ ಮೋಹನ ಎನ್ (28) ಮೃತಪಟ್ಟ ವ್ಯಕ್ತಿ.  ಇವರು ಕೂಲಿ ಕಾರ್ಮಿಕನಾಗಿದ್ದರು. ಮಾರ್ಚ್ 30ರಂದು ಮುಂಜಾನೆ ಇವರಿಗೆ ಮನೆಯಲ್ಲಿ ಅಸ್ವಸ್ಥತೆ ಉಂಟಾಗಿತ್ತು. ಇದರಿಂದ  ಕೂಡಲೇ ಉಪ್ಪಳದ ಆಸ್ಪತ್ರೆಗೂ, ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ವೈದ್ಯ ಕೀಯ ತಪಾಸಣೆಯಲ್ಲಿ  ಮೋಹನ ಇಲಿ ವಿಷ ಸೇವಿಸಿರುವುದಾಗಿ ತಿಳಿದುಬಂದಿದೆ. ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಮೋಹನ ಚಿಕಿತ್ಸೆ ಮಧ್ಯೆ ನಿನ್ನೆ ಸಂಜೆ ಸಾವಿಗೀಡಾಗಿದ್ದಾರೆ. …

ಕೇರಳದಲ್ಲಿನ್ನು ಯಾರ ಆಡಳಿತ? ಜನರ ತೀರ್ಪು ನಾಳೆ

ಕಾಸರಗೋಡು: ಕೇರಳದಲ್ಲಿ  ಇನ್ನು ಯಾರು ಆಡಳಿತ ನಡೆಸಬೇಕು ಎಂಬು ದನ್ನು ನಾಳೆ ತಮ್ಮ ಅಮೂಲ್ಯವಾದ ಮತಗಳನ್ನು ಚಲಾಯಿಸುವ ಮೂಲಕ ಜನರು ತೀರ್ಪು ನೀಡಲಿದ್ದಾರೆ. ಮತದಾನ ನಾಳೆ ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡು ಸಂಜೆ 6 ಗಂಟೆ ತನಕ ಮುಂದುವರಿಯಲಿದೆ. ರಾಜ್ಯದಲ್ಲಿ ಒಟ್ಟು 883 ಅಭ್ಯರ್ಥಿಗಳು  ಚುನಾವಣಾ ಕಣದಲ್ಲಿದ್ದಾರೆ. ಇವರ ಸೋಲು ಗೆಲುವನ್ನು ಮತದಾರರು ನಾಳೆ ನಿರ್ಣಯಿಸಲಿದ್ದಾರೆ. ಕೇರಳದ ಒಟ್ಟು 140 ವಿಧಾನ ಸಭಾ ಕ್ಷೇತ್ರಗಳಲ್ಲಾಗಿ 30,495 ಮತಗಟ್ಟೆಗಳನ್ನು ಏರ್ಪಡಿಸಲಾಗಿದೆ. ರಾಜ್ಯದಲ್ಲಿ 18ರಿಂದ 19ರ ಮಧ್ಯೆ ಪ್ರಾಯದ 4,66,408 …