ಖ್ಯಾತ ವೈದ್ಯ ಶಂಕರ್‌ರಾಜ್ ಆಲಂಪಾಡಿ ನಿಧನ

ಕಾಸರಗೋಡು:  ಕಾಸರಗೋಡು ನಗರದ ಎಸ್‌ವಿಟಿ ರಸ್ತೆ ಬಳಿಯ ವೆಂಕಟೇಶ ಮನೆಯ ಖ್ಯಾತ ಆಯುರ್ವೇದ ವೈದ್ಯರಾಗಿರುವ  ಶಂಕರ್‌ರಾಜ್  ಆಲಂಪಾಡಿ (66) ನಿಧನಹೊಂದಿದರು. ಖ್ಯಾತ ಆಲಂಪಾಡಿ ಮನೆತನಕ್ಕೆ ಸೇರಿದ ದಿ| ವೆಂಕಟೇಶ್ ಶ್ಯಾನುಭೋಗ್-ಜಲಜಮ್ಮ ದಂಪತಿ ಪುತ್ರನಾಗಿರುವ ಡಾ| ಶಂಕರ್‌ರಾಜ್ ಆಲಂಪಾಡಿಯವರು ಖ್ಯಾತ ಮೃದಂಗ ವಿದ್ವಾನ್ ಕೂಡಾ ಅಗಿದ್ದರು. ಹಲವು ಸಂಗೀತ ಕಛೇರಿಗಳಲ್ಲೂ  ಅವರು ಮೃದಂಗ ವಾದಕರಾಗಿ ಸಹಕರಿಸಿದ್ದಾರೆ. ಇವರು ಅನೇಕ ಮೃದಂಗ ಶಿಷ್ಯವೃಂದದ ವರನ್ನು ಹೊಂದಿದ್ದು ಓರ್ವ ಅಪ್ರತಿಮ ಕಲಾಸಕ್ತರೂ ಆಗಿದ್ದರು. 1983ರಿಂದ ನಾಯಮ್ಮಾರ ಮೂಲೆಯಲ್ಲಿ ಸುಪ್ರಭಾತ ಕ್ಲಿನಿಕ್ ಆರಂಭಿಸಿ …

ಮಾರಾಟಕ್ಕಾಗಿ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 19.340 ಗ್ರಾಂ ಎಂಡಿಎಂಎ ಪತ್ತೆ: ಓರ್ವ ಸೆರೆ

ಕುಂಬಳೆ: ಮಾರಾಟಕ್ಕಾಗಿ ಸ್ಕೂಟಿಯಲ್ಲಿ ಸಾಗಿಸುತ್ತಿದ್ದ ಮಾರಕ ಮಾದಕ ದ್ರವ್ಯವಾದ 19.340 ಗ್ರಾಂ ಎಂಡಿಎಂಎಯನ್ನು ಕುಂಬಳೆ ಪೊಲೀಸರು ಪತ್ತೆಹಚ್ಚಿ ವಶಪಡಿಸಿ ಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪೆರುಮಣ್ಣೂರು ಪಳ್ಳಕಳ್ಳಾಪ್ ಎಸ್.ಎಂ. ಮಂಜಿಲ್‌ನ  ಸೈಯ್ಯದ್ ಅಫ್ರೀದಿ (28) ಎಂಬಾತ ನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾದಕದ್ರವ್ಯ ಸಾಗಿಸುತ್ತಿದ್ದ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್‌ರಿಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರಂತೆ ಎಸ್‌ಐ ಸನಿತ್ ಸಿ, ಎಎಸ್‌ಐ ಗಳಾದ ಸುಧೀಶ್, ಅತುಲ್ ರಾಮ್, …

ಇಡೀ ನಾಡನ್ನು ಶೋಕಸಾಗರದಲ್ಲಿ ಮುಳುಗಿಸಿದ ವಾಹನ ಅಪಘಾತ: ಅಧ್ಯಾಪಿಕೆಯರ ಸಹಿತ 9 ಮಂದಿ ದಾರುಣ ಮೃತ್ಯು

ಮಲಪ್ಪುರಂ: ತಮಿಳುನಾಡಿನ ಪೊಳ್ಳಾಚಿ ರಸ್ತೆಯಲ್ಲಿ ನಿನ್ನೆ ಸಂಜೆ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ  ಮಲಪ್ಪುರಂ ಪಾಂಙ್‌ಪಳ್ಳಿಪರಂಬ್  ಸರಕಾರಿ ಎಲ್‌ಪಿ ಶಾಲೆಯ ಅಧ್ಯಾಪಿಕೆಂiiರ ಸಹಿತ ೯ ಮಂದಿ ಮೃತಪಟ್ಟ ದಾರುಣ ಘಟನೆ ಇಡೀ ನಾಡನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಅಪಘಾತದಲ್ಲಿ ೪ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವೆಂದು ಹೇಳಲಾಗುತ್ತಿದೆ. ಮಲಪ್ಪುರಂ ಪಾಂಙ್ ಪಳ್ಳಿಪರಂಬ್ ಸರಕಾರಿ ಎಲ್‌ಪಿ ಶಾಲೆಯ ಮುಖ್ಯೋಪಾಧ್ಯಾ ಯಿನಿ ಅಜಿತ (54), ಅಧ್ಯಾಪಕ, ಅಧ್ಯಾಪಿ ಕೆಯರಾದ ರಮ್ಲ (52), ಸುಹರಾ (43), ಆಶಾ (41), …

ಸಮಸ್ತ ಕಾರ್ಯಕರ್ತ ಹೃದಯಾಘಾತದಿಂದ  ನಿಧನ

ನೀರ್ಚಾಲು: ಮುಂಡ್ಯತ್ತಡ್ಕ ಬಳಿಯ ಬಾಪಲಿಪೊನ ತೊಟ್ಟಿ ನಿವಾಸಿ ಟಿ.ಎಂ. ಅಬ್ದುಲ್ ಅಸೀಸ್ (59) ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ಸಂಜೆ ಮನೆಯಲ್ಲಿ ಹೃದಯಾಘಾತವುಂಟಾದ ಇವರನ್ನು ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿದರೂ ಜೀವ ರಕ್ಷಿಸಲಾಗಲಿಲ್ಲ. ಇವರು ಸಮಸ್ತ ಹಾಗೂ ಪೋಷಕ ಸಂಘಟನೆಗಳ ಸಕ್ರಿಯ ಕಾರ್ಯಕರ್ತನಾಗಿದ್ದರು. ಮೃತರು ಪತ್ನಿ ಮೈಮೂನ, ಮಕ್ಕಳಾದ ನಸ್ರೀನ, ನೌಫಲ್, ನೌರಿನ, ನಿಹಾಲ್, ನುಹ್‌ಮಾನ್, ಅಳಿಯಂದಿ ರಾದ ಅಯ್ಯೂಬ್ ಉರ್ಮಿ, ನೌಫಲ್ ಚಳ್ಳಂಗಯ, ಸೊಸೆ ನಾಫಿಯ, ಸಹೋದರರಾದ ಟಿ.ಎಂ. ಸತ್ತಾರ್, ಟಿ.ಎಂ. ಹನೀಫ್ ಹಾಗೂ …

ತ್ಯಾಜ್ಯ ತುಂಬಿ ತುಳುಕುತ್ತಿರುವ ಮಂಜೇಶ್ವರ ಸಮುದ್ರ ತೀರ: ತೆರವಿಗೆ ಕ್ರಮವಿಲ್ಲ

ಮಂಜೇಶ್ವರ: ಮಂಜೇಶ್ವರ ಸಮುದ್ರ ತೀರದಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದ್ದರೂ ತೆರವುಗೊಳಿಸಲು ಅಧಿಕಾರಿಗಳು ಕ್ರಮಕೈಗೊಳ್ಳದಿರುವುದು ಸಾರ್ವಜನಿ ಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲಿ ತಂಪು ಪಾನೀಯ ಸಹಿತ ವಿವಿಧ ಬಾಟಲಿಗಳನ್ನು ಹಾಕಲು ಪೆಟ್ಟಿಗೆಯನ್ನು ಇರಿಸಲಾಗಿದ್ದು, ಆದರೆ ಅದರಲ್ಲಿ ಇತರ ತ್ಯಾಜ್ಯಗಳನ್ನು ಹಾಕಿ ಪರಿಸರ ಶೋಚನೀಯಾವಸ್ಥೆಗೊಂಡಿರುವುದಾಗಿ ದೂರಲಾಗಿದೆ. ಇದರಿಂದ ಸಮುದ್ರ ತೀರಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಊರವರು ಈ ತ್ಯಾಜ್ಯದಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಭಾರೀ ಪ್ರಮಾಣದ ತ್ಯಾಜ್ಯ ರಾಶಿಗೆ ಬೀದಿ ನಾಯಿಗಳು ಮುತ್ತಿಗೆ ಹಾಕುತ್ತಿರುವುದು ಮಕ್ಕಳು ಸಹಿತ ಸಾರ್ವಜನಿಕರಿಗೆ ಆತಂಕÀ …

ಸೌಹಾರ್ದತೆಗೆ ಸಾಕ್ಷಿ : ಉದ್ಯಾವರ ಜಮಾಯತ್‌ಗೆ ಭೇಟಿ ನೀಡಿದ ಶ್ರೀ ಅರಸು ದೈವ ಪಾತ್ರಿಗಳು

ಮಂಜೇಶ್ವರ: ತುಳುನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ಹಿಂದೂ-ಮುಸ್ಲಿA ಭಾವೈಕ್ಯತೆಗೆ ಸಾಕ್ಷಿಯಾಗಿರುವ ಇತಿಹಾಸ ಪ್ರಸಿದ್ಧ ಉದ್ಯಾವರ ಅರಸು ಮಂಜೀಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿ ವಿಧಿವಿಧಾನಗಳು ಭಕ್ತಿ ಮತ್ತು ಸೌಹಾರ್ದತೆಯೊಂದಿಗೆ ನೆರವೇರಿದವು. ಪ್ರಾಚೀನ ಕಾಲದಿಂ ದಲೂ ನಡೆದುಕೊಂಡು ಬರುತ್ತಿರುವ ಪದ್ಧತಿಯಂತೆ ಕ್ಷೇತ್ರದ ಅರಸು ದೈವಗಳ ಪಾತ್ರಿಗಳು ಶುಕ್ರವಾರ ಮಧ್ಯಾಹ್ನ ಉದ್ಯಾವರ ಸಾವಿರ ಜಮಾಯತ್ ಮಸೀದಿಗೆ ಭೇಟಿ ನೀಡಿ ಮುಸ್ಲಿಂ ಬಾಂಧವರನ್ನು ಜಾತ್ರೆಗೆ ಆಹ್ವಾನಿಸಿದರು. ಮೇಷ ಸಂಕ್ರಮಣ ಮುಗಿದು ಬರುವ ಮೊದಲ ಶುಕ್ರವಾರದಂದು ದೈವಗಳು ಮಸೀದಿಗೆ ಭೇಟಿ ನೀಡುವುದು ಶತಮಾನಗಳ ಹಳೆಯ …

­­ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ :ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದಿಂದ ಶ್ರದ್ಧಾಭಕ್ತಿಯ ಹಸಿರುವಾಣಿ ಮೆರವಣಿಗೆ

ಬದಿಯಡ್ಕ: ಸಹಸ್ರಾರು ಮಂದಿ ಭಗವದ್ಬಕ್ತರ ಶ್ರದ್ಧಾ ಭಕ್ತಿಯ ಪಾಲ್ಗೊಳ್ಳುವಿಕೆಯೊಂದಿಗೆ ಅದ್ದೂರಿಯ  ಹಸಿರುವಾಣಿ ಮೆರವಣಿಗೆ  ಆಗಮಿಸುವು ದರೊಂದಿಗೆ  ಪೆರಡಾಲ ಶ್ರೀ ಉದನೇ ಶ್ವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಾಯಿತು. ನಿನ್ನೆ ಮುಂ ಜಾನೆ ಶ್ರೀ ಕ್ಷೇತ್ರದಲ್ಲಿ ಗಣಪತಿ ಹೋಮ,  ಉಗ್ರಾಣ ಮುಹೂರ್ತ ನಡೆಯಿತು.  ಬಳಿಕ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಆನೆಮಜಲು ದೀಪ ಬೆಳಗಿಸಿದರು. ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನ ದಲ್ಲಿ  ಭಗವದ್ಭಕ್ತರು ಒಟ್ಟುಗೂಡಿ ಪ್ರಾರ್ಥನೆ ಸಲ್ಲಿಸಿ ಹಸಿರುವಾಣಿ …

ಶ್ರೀಕೃಷ್ಣ ಚಿಕನ್ ಕುಳಿಮಂದಿ ಸೇವಿಸುವ ರೀತಿಯ ಚಿತ್ರದೊಂದಿಗೆ ವಿಷುಶುಭಾಶಯ: ಹೋಟೆಲ್ ಮಾಲಕ ಸೆರೆ

ಆಲಪ್ಪುಳ: ಭಗವಾನ್ ಶ್ರೀಕೃಷ್ಣ ‘ಚಿಕನ್ ಕುಳಿಮಂದಿ’ ಸೇವಿಸುವ ರೀತಿಯ ಚಿತ್ರದೊಂದಿಗೆ ವಿಷು ಶುಭಾಶಯ ತಿಳಿಸಿದ ಹೋಟೆಲ್ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಚೇರ್ತಲದ ಮೆಹರ್‌ಮಂದಿ ರೆಸ್ಟೋರೆಂಟ್‌ನ ಮಾಲಕನಾದ ಅರ್ಷಾದ್ ಎಂಬಾತನನ್ನು  ಬಂಧಿಸಲಾ ಗಿದೆ. ಗಲಭೆ ಸೃಷ್ಟಿಸುವ ಉದ್ದೇಶ ದೊಂದಿಗೆ  ಮನಃಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂದು ತಿಳಿಸಿ ಭಾರತೀಯ ನ್ಯಾಯ ಸಂಹಿತೆಯ ಕಾಯ್ದೆ ಪ್ರಕಾರ ಕೇಸು ದಾಖಲಿಸಿ ಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಂದು ವರ್ಷ ವರೆಗೆ ಶಿಕ್ಷೆ ಲಭಿಸಬಹುದಾದ ಕಾಯ್ದೆಯಂತೆ ಕೇಸು ದಾಖಲಿಸಲಾಗಿದೆ. ತಣ್ಣೀರ್ ಮುಕ್ಕಂ ನಿವಾಸಿಯಾದ ನ್ಯಾಯವಾದಿ …

ಅಖಿಲ ಕೇರಳ ಮೆಲಕುಡಿ- ಕುಡಿಯ ಸೇವಾ ಸಂಘದ ವಾರ್ಷಿಕ ಸಮ್ಮೇಳನ, ಅಂಬೇಡ್ಕರ್ ಜಯಂತಿ ಆಚರಣೆ

ಬಾಯಾರು: ಅಖಿಲ ಕೇರಳ ಮೆಲಕುಡಿ- ಕುಡಿಯ ಸೇವಾ ಸಂಘ ಧರ್ಮತಡ್ಕ ಇದರ 23ನೇ ವಾರ್ಷಿಕ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭ ಇತ್ತೀಚೆಗೆ ಬೆರಿಪದವು ವಿದ್ಯಾರಣ್ಯ ಎ.ಎಲ್.ಪಿ ಶಾಲೆಯಲ್ಲಿ ನಡೆಯಿತು. ನಿವೃತ ಬ್ಯಾಂಕ್ ಮೆನೇಜರ್ ಕರಿಯ ಕುಡಿಯ ದೀಪ ಬೆಳಗಿಸಿ, ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಶಂಕರ ಕುಡಿಯ ಅಧ್ಯಕ್ಷತೆ ವಹಿಸಿದರು. ಸಮಾರಂಭದಲ್ಲಿ 80 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಐದು ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹ ಧನ ವಿತರಣೆ, …