ದೈವ ನೋಡಲು ಹೋದ 15ರ ಬಾಲಕನ ಕಾಲಿಗೆ ಪಟಾಕಿ ಸಿಡಿದು ಗಾಯ: ಪ್ರಶ್ನಿಸಿದ ಹೆತ್ತವರಿಗೆ ಆಕ್ರಮಣ

ಕಾಸರಗೋಡು: ಕಾರಗುಳಿಗನ್ ದೈವವನ್ನು ಕಾಣಲೆಂದು ತೆರಳಿದ 15ರ ಹರೆಯದ ಬಾಲಕನ ಕಾಲಿಗೆ ಪಟಾಕಿ ಸಿಡಿದು ಗಾಯವುಂಟಾಗಿದೆ. ಈ ಬಗ್ಗೆ ಪ್ರಶ್ನಿಸಿದ ಬಾಲಕ ಹಾಗೂ ಹೆತ್ತವರನ್ನು ಹೊಡೆದು ಹಲ್ಲೆಗೈದ ಮೂರು ಮಂದಿ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ಉಪ್ಪಿಲಕೈ ಅಡುಕ್ಕತ್‌ಪರಂಬಿಲ್‌ನ 15ರ ಹರೆಯದ ಬಾಲಕನ ದೂರಿನಂತೆ ಪುದುಕೈ ನಿವಾಸಿಗಳಾದ ಅಭಿಲಾಷ್, ಶಿಬು, ಶಿಬಿನ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಇಂದು ಮುಂಜಾನೆ 1 ಗಂಟೆ ವೇಳೆಗೆ ಚತುರಕಿಣರ್ ಕಾರಗುಳಿಗನ್ ದೈವಸ್ಥಾನದ ಸಮೀಪ ಘಟನೆ ನಡೆದಿದೆ. ದೈವ ಕಾಣಲೆಂದು …

ದೇರಂಬಳ ಸೇತುವೆ ಕುಸಿದು ಬಿದ್ದು ವರ್ಷಗಳು ಕಳೆದರೂ ನಿರ್ಮಾಣಕ್ಕೆ ಕ್ರಮವಿಲ್ಲ: ಸ್ಥಳೀಯರಿಗೆ ಸಂಕಷ್ಟ

ಉಪ್ಪಳ: ದೇರಂಬಳದಲ್ಲಿ ಕಾಲು ಸೇತುವೆ ಕುಸಿದು ಬಿದ್ದು ಹಲವು ವರ್ಷಗಳು ಕಳೆದರೂ ನಿರ್ಮಾಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದು ಊರವರಿಗೆ ಸಮಸ್ಯೆಯಾಗಿದೆ. ಮಂಗಲ್ಪಾಡಿ, ಮೀಂಜ ಪಂಚಾಯತ್ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಈಗ ಸಂಚಾರ ದುಸ್ತರವಾಗಿದೆ. ದೇರಂಬಳ, ಚಿಗುರುಪಾದೆ, ಬುಡ್ರಿಯ, ಕಲ್ಲಗದ್ದೆ, ತೊಟ್ಟೆತ್ತೋಡಿ, ಬೇಕೂರು, ಪೈವಳಿಕೆ, ಜೋಡುಕಲ್ಲು, ಮಡಂದೂರು ಮೊದಲಾದ ಪ್ರದೇಶಗಳ ಜನರಿಗೆ ಅತ್ತಿತ್ತ ಸಂಚರಿಸಲು ಸಂಪರ್ಕ ಸೇತುವೆ ಇದಾಗಿತ್ತು. ಆದರೆ ಈಗ ಈ ಪ್ರದೇಶಗಳಿಗೆ ಹಲವಾರು ಕಿಲೋ ಮೀಟರ್ ಸುತ್ತು ವರಿದು ಬಾಯಿಕಟ್ಟೆ, ಕಳಾಯಿ …

ತಮಿಳುನಾಡು, ಪ. ಬಂಗಾಳ ವಿಧಾನಸಭಾ ಚುನಾವಣೆ: 5,501 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರ ಇಂದು

ಚೆನ್ನೈ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮತದಾನ ಇಂದು ಬೆಳಿಗ್ಗೆ ಆರಂಭಗೊಂಡಿದೆ. ತಮಿಳುನಾಡಿನ ಒಟ್ಟು ೨೩೪  ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿದ್ದರೆ  ಪಶ್ಚಿಮಬಂಗಾಳ  ವಿಧಾನಸಭೆಗೆ ಎರಡು ಹಂತಗಳಲ್ಲಾಗಿ ನಡೆಯುವ ಚುನಾವಣೆಯಲ್ಲಿ ಒಂದನೇ ಹಂತದಲ್ಲಿ 152 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಹೀಗೆ ತಮಿಳುನಾಡಿನ 234 ಮತ್ತು ಪಶ್ಚಿಮಬಂಗಾಳದ 152 ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಒಟ್ಟು 5501 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು ಇವರ ರಾಜಕೀಯ ಭವಿಷ್ಯ ವನ್ನು 9.33 ಕೋಟಿ ಮತದಾರರು ಇಂದು …

ಮಹಿಳೆಯನ್ನು ಲಾಡ್ಜ್‌ಗೆ ಕರೆದೊಯ್ದು ಕಿರುಕುಳ ನೀಡಿದ ವ್ಯಕ್ತಿ ಸೆರೆ

ಕಾಸರಗೋಡು: ಮ್ಯಾಟ್ರಿಮೋನಿ ಮೂಲಕ ಮಹಿಳೆಯನ್ನು ಪರಿಚಯಗೊಂಡು ಬಳಿಕ ಅವರನ್ನು ಮದುವೆಯಾಗುವುದಾಗಿ ಭರವಸೆಯೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋ ಪದಂತೆ  ಕಾಸರ ಗೋಡು ನಿವಾಸಿ ಯೋರ್ವನನ್ನು ಕೊಚ್ಚಿಯಲ್ಲಿ  ಸೆರೆಹಿಡಿಯಲಾಗಿದೆ. ಕಾಸರಗೋಡು ನೆಡುಂಕನಾಲ್ ಮಲಾಂಕಾವು ನಿವಾಸಿ ಸಂತೋಷ್ ಜೋಸ್ (58) ಎಂ ಬಾತನನ್ನು ಎರ್ನಾಕುಳಂ ನೋರ್ತ್‌ನ ಪೊಲೀ ಸರು ಬಂಧಿಸಿದ್ದಾರೆ.  ಆಲಪ್ಪುಳ ನಿವಾಸಿಯಾದ ೫೯ರ ಹರೆಯದ ಮಹಿಳೆ ನೀಡಿದ ದೂರಿನಂತೆ ಸಂತೋಷ್ ಜೋಸ್‌ನನ್ನು ಸೆರೆಹಿಡಿಯಲಾಗಿದೆ. ಮಹಿಳೆಯನ್ನು ಮ್ಯಾಟ್ರಿಮೋನಿ ಮೂಲಕ ಈತ ಪರಿಚಯಗೊಂಡಿದ್ದನೆನ್ನಲಾಗಿದೆ.  ಬಳಿಕ ಆಕೆಯನ್ನು ಕೊಚ್ಚಿ ನಗರದ ಲಾಡ್ಜ್‌ವೊಂದಕ್ಕೆ ಕರೆದೊಯ್ದು …

ಮನೆಯೊಳಗೆ ನಿದ್ರಿಸಿದ್ದ ಬಾಲಕ ನಾಗರ ಹಾವು ಕಡಿತದಿಂದ ಮೃತ್ಯು

ತಿರುವನಂತಪುರ: ರಾಜ್ಯದಲ್ಲಿ ಹಾವಿನ ಕಡಿತದಿಂದ ಇನ್ನೋರ್ವ ಬಾಲಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ತಿರುವನಂತಪುರ ಬಳಿಯ ಚಿರಯಿನ್‌ಕೀಳ್ ನಿವಾಸಿಯಾದ ದಿಲ್ಶನ್ (8) ಎಂಬ ಬಾಲಕ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಇಂದು ಮುಂಜಾನೆ 4 ಗಂಟೆ ವೇಳೆ ಮನೆಯೊಳಗೆ ನಿದ್ರಿಸಿದ್ದ ಬಾಲಕನಿಗೆ ನಾಗರಹಾವು ಕಡಿದಿದೆ. ಬಾಲಕನ ಕೂಗುಕೇಳಿ ತಂದೆ ದಿಲೀಪ್, ತಾಯಿ ಅನುಪಮ ಎಚ್ಚೆತ್ತು ನೋಡಿದಾಗ ಬಾಲಕನ ದೇಹದಲ್ಲಿ ಹಾವಿನ ಕಡಿತದ ಗುರುತು ಕಂಡುಬಂದಿದೆ.ಕೂಡಲೇ ಚಿರಯಿನ್‌ಕೀಳ್‌ನ ತಾಲೂಕು ಆಸ್ಪತ್ರೆಗೆ ತಲುಪಿಸಲಾ ಯಿತು. ಅಲ್ಲಿ ಚುಚ್ಚುಮದ್ದು ನೀಡಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ …

ಕಾಸರಗೋಡು : ಭಾಸ್ಕರ ಕುಂಬಳೆ ಬಲಿದಾನ ದಿನಾಚರಣೆ

ಕುಂಬಳೆ: ಡಿವೈಎಫ್‌ಐ ನೇತಾರನಾಗಿದ್ದ ಭಾಸ್ಕರ ಕುಂಬಳೆ ಅವರ 29ನೇ ಬಲಿದಾನ ದಿನಾಚರಣೆಯಂಗವಾಗಿ ನಿನ್ನೆ ಕುಂಬಳೆ ಪೇಟೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು. ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ. ಸ್ವರಾಜ್ ಉದ್ಘಾಟಿಸಿ ಮಾತನಾಡಿ ದರು.  ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಶಾಲು ಮ್ಯಾಥ್ಯು ಅಧ್ಯಕ್ಷತೆ ವಹಿಸಿದರು.  ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಳ್ಳಾಟ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಶಾಸಕ ಎಂ. ರಾಜಗೋಪಾಲನ್, ರಾಜ್ಯ ಸಮಿತಿ ಸದಸ್ಯ ಶಾಸಕ ಸಿ.ಎಚ್. ಕುಂಞಂಬು, ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ, ಜಿಲ್ಲಾ ಸಮಿತಿ ಸದಸ್ಯ …

ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮಕಲಶಾಭಿಷೇಕ ಸಂಪನ್ನ

ಕಾಸರಗೋಡು: ಭಾರತೀಯ ಸಂಸ್ಕೃತಿ ಜಗತ್ತಿಗೆ ನೀಡಿದ ದೊಡ್ಡ ಸಂದೇಶ ಧರ್ಮವಾಗಿದೆ. ಸಮಸ್ತ ವೇದ ಸಾರ ಸಂಗ್ರಹವಾದ ಭಗವದ್ಗೀತೆ ಧರ್ಮದಿಂದ ಆರಂಭಗೊAಡು ‘ಮಮ’ ಎಂಬ ತನ್ನ ಧರ್ಮದ ಬಗ್ಗೆ ಸಾರಿದೆ. ಇದರಿಂದಲೇ ಧರ್ಮವೇ ಪ್ರಧಾನವಾದುದು, ಶ್ರೇಯಸ್ಸೂ, ಪ್ರೇಯಸ್ಸೂ ನೀಡುವುದೇ ಆ ಧರ್ಮವಾಗಿದೆ ಎಂದು ಕಾಸರಗೋಡು ಮಾತಾ ಅಮೃತಾನಂದಮಯೀ ಮಠದ ಬ್ರಹ್ಮಚಾರಿ ಶ್ರೀ ವೇದ ವೇದಾಮೃತ ಚೈತನ್ಯ ಆಶೀರ್ವಚನದಲ್ಲಿ ತಿಳಿಸಿದರು.ನುಳ್ಳಿಪ್ಪಾಡಿಯ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋ ತ್ಸವದ ಅಂಗವಾಗಿ ನಿನ್ನೆ ನಡೆದ ಧಾರ್ಮಿಕ …

ಪೆರಡಾಲದಲ್ಲಿ ಶ್ರೀ ಉದನೇಶ್ವರ, ಸಪರಿವಾರ ದೇವತಾ ಪ್ರತಿಷ್ಠೆ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಪೂರ್ವಾಹ್ನ 10೮ ತೆಂಗಿನಕಾಯಿಯ ಗಣಪತಿಹೋಮ ಬಳಿಕ ಶ್ರೀ ಉದನೇಶ್ವರ ದೇವರು, ಕುಟ್ಟಿಚ್ಚಾತ ಸಹಿತ ಪರಿವಾರ ದೇವತಾ ಪ್ರತಿಷ್ಠೆ ನಡೆಯಿತು.  ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಶ್ರೀ ದೇವರ ಪ್ರತಿಷ್ಠೆ, ಜೀವ ಕಲಶಾಭಿಷೇಕ ನಡೆಯಿತು. ಎಪ್ರಿಲ್ ೨೬ರಂದು ಸಹಸ್ರ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಇಂದು ಸಂಜೆ …

ಮಂಗಲ್ಪಾಡಿ ಪಂ.ನಲ್ಲಿ ಪ್ರಥಮ ಹಂತದ ಕುಡಿಯುವ ನೀರು ವಿತರಣೆ ಆರಂಭ

ಉಪ್ಪಳ: ಕುಡಿಯುವ ನೀರಿನ ಕ್ಷಾಮ ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಮಂಗಲ್ಪಾಡಿ ಪಂಚಾಯತ್‌ನಿಂದ ಎಲ್ಲಾ ವಾರ್ಡ್‌ಗಳಿಗೆ ಕುಡಿಯುವ ನೀರು ವಿತರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಪ್ರಥಮ ಹಂತದ ಕುಡಿಯುವ ನೀರು ವಿತರಣೆಯನ್ನು ನಿನ್ನೆ ಆರಂಭಿಸಲಾಯಿತು. ಪಂಚಾಯತ್ ಕಚೇರಿ ಆವರಣದಲ್ಲಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ಉದ್ಘಾಟಿಸಿ ಮಾತನಾಡಿದರು. ಕುಡಿಯುವ ನೀರಿನ ಕ್ಷಾಮವಿರುವ ಪ್ರದೇಶದಲ್ಲಿ ವಾರ್ಡ್‌ನ ಜನಪ್ರತಿನಿಧಿಯವರನ್ನು ಸಂಪರ್ಕಿಸಬೇಕಾಗಿದೆ. ದಿನದಲ್ಲಿ ಎಂಟು ವಾರ್ಡ್‌ಗಳಿಗೆ ನೀರು ವಿತರಿಸಲಾಗುವುದು. ಇದೇ ರೀತಿ ಮೂರು ದಿನಗಳಲ್ಲಿ ಒಟ್ಟು 24 ವಾರ್ಡ್‌ಗಳಿಗೆ ಪ್ರಥಮ ಹಂತದ ನೀರನ್ನು ವಿತರಿಸಲಾಗುವುದು. …

ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕ್ರಮವಿಲ್ಲ: ಮುಸ್ಲಿಂ ಲೀಗ್‌ನಿಂದ ಧರಣಿ

ಉಪ್ಪಳ: ಪತ್ವಾಡಿ ಕುಡಿಯುವ ನೀರು ಯೋಜನೆಯ ಪೈಪ್‌ಲೈನ್ ದುರಸ್ತಿ ನಡೆಸಲು  ಜಲಪ್ರಾಧಿಕಾರಕ್ಕೆ ಅನುಮತಿ ನೀಡದಿರುವುದನ್ನು ಪ್ರತಿಭಟಿಸಿ ಮಂಜೇಶ್ವರ ಪಿಡಬ್ಲ್ಯುಡಿ ರೋಡ್ಸ್ ಅಸಿಸ್ಟೆಂಟ್ ಇಂಜಿನಿಯರ್‌ರ ಕಚೇರಿಯ ಮುಂಭಾಗ ಮಂಗಲ್ಪಾಡಿ ಪಂಚಾಯತ್ ಮುಸ್ಲಿಂ ಲೀಗ್ ವಾರ್ಡ್ ಸಮಿತಿ ಪದಾಧಿಕಾರಿಗಳು ಧರಣಿ ನಡೆಸಿದರು. 3,4ನೇ ವಾರ್ಡ್ ಸಮಿತಿ ಪದಾಧಿಕಾರಿಗಳು ಎಂ.ಕೆ. ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆಸಿದ ಧರಣಿಯನ್ನು ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ರಹಿಮಾನ್ ಉದ್ಘಾಟಿಸಿದರು. ಕುಂಬಳೆ ಜಲ ಪ್ರಾಧಿಕಾರದ ಅಸಿಸ್ಟೆಂಟ್ ಇಂಜಿನಿಯರ್‌ರ ಆದೇಶ ಪತ್ರಕ್ಕೆ ಅನುಮತಿ  ನೀಡದೆ ಮಂಜೇಶ್ವರ ಪಿಡಬ್ಲ್ಯುಡಿ …