ಕಾಸರಗೋಡು ನಿವಾಸಿ ಬೆಂಗಳೂರಿನಲ್ಲಿ ನಿಧನ
ಕಾಸರಗೋಡು: ಕಾಸರಗೋಡು ಅಮೈ ರಸ್ತೆಯ ದಿ| ಎನ್.ಪಿ. ಕಾಮತ್ರ ಪುತ್ರ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ರಾಜೇಶ್ ಕಾಮತ್ (52) ನಿಧನಹೊಂದಿದರು. ಬೆಂಗಳೂರು ಕನಕಪುರ ರೋಡ್ ಆಕ್ಸಿಸ್ ತತ್ವಂ ವೇದಾನಂದ ನಾಲ್ಕು ಎಂಬಲ್ಲಿ ವಾಸಿಸುತ್ತಿದ್ದರು. ಮೃತರು ತಾಯಿ ಪುಷ್ಪಲತಾ ಕಾಮತ್, ಪತ್ನಿ ಅನಿತಾ ಕಾಮತ್(ಬೆಂಗಳೂರಿನಲ್ಲಿ ಉದ್ಯೋಗಿ), ಪುತ್ರ ರಜತ್ ಕಾಮತ್ (ವಿದ್ಯಾರ್ಥಿ), ಸಹೋದರ -ಸಹೋದರಿಯರಾದ ನಿತ್ಯಾನಂದ ಕಾಮತ್ (ಕಾಸರ ಗೋಡು), ಸುರೇಶ್ ಕಾಮತ್ (ಬೆಂಗಳೂರು), ರಾಧಾ ಕಿಣಿ (ಪೂಕೋಡ್ ತಲಶ್ಶೇರಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.