ವೈಭವದಿಂದ ಸಮಾಪ್ತಿಗೊಂಡ ಕಾಳ್ಯಂಗಾಡು ಬ್ರಹ್ಮಕಲಶೋತ್ಸವ

ಕೂಡ್ಲು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಮಾಪ್ತಿಗೊಂಡಿತು. ಗಣಪತಿಹೋಮ, ಕವಾಟೋದ್ಘಾಟನೆ, ಮಹಾಪೂಜೆ ನಡೆಯಿತು. ತಂತ್ರಿ ಶ್ರೀಕೃಷ್ಣ ಗುರೂಜಿ ಕುಕ್ಕಾಜೆ ನೇತೃತ್ವ ವಹಿಸಿದರು. ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ಧರ್ಮದರ್ಶಿ ನಾರಾಯಣ ಕಾಳ್ಯಂಗಾಡು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಸಲಹಾ ಸಮಿತಿಯ ರಘು ಮೀಪುಗುರಿ, ಭಾಸ್ಕರ ಕಾಳ್ಯಂಗಾಡು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲು, ಕಾರ್ಯದರ್ಶಿಗಳಾದ ರಂಜಿತ್ ಮನ್ನಿಪ್ಪಾಡಿ, ಗೋವಿಂದ ನಾಯ್ಕ್ ಕಾಳ್ಯಂಗಾಡು, ಕೋಶಾಧಿಕಾರಿ ಶಾಂತ ಕುಮಾರ್ ಮುಂಡ್ಯತ್ತಡ್ಕ, ಜೊತೆ ಕೋಶಾಧಿಕಾರಿ ಪುನಿತ್ ಕೆಮ್ಮಣ್ಣು, …

ಬನಕ್ಕೆ ಉಚಿತವಾಗಿ ಸ್ಥಳ ನೀಡಿ ಪ್ರಾಮಾಣಿಕತೆ ಮೆರೆದ ಕೊಡ್ಯಮ್ಮೆಯ ಜಲೀಲ್: ಅಭಿನಂದನೆ

ಕುಂಬಳೆ: ಕುಂಬಳೆ ಪಂಚಾಯತ್‌ನ ಕೊಡ್ಯಮ್ಮೆ ಜಮಾಅತ್  ಕಮಿಟಿ ಸದಸ್ಯನೂ, ಯು.ಎಚ್. ಕ್ಲಬ್‌ನ ಅಧ್ಯಕ್ಷನಾದ ಕೊಡ್ಯಮ್ಮೆಯ ಪಳ್ಳತ್ತಿಮಾರ್ ಮೂಸ ಅವರ ಪುತ್ರ ಜಲೀಲ್ ಕೊಡ್ಯಮ್ಮೆ ತನ್ನ ಹೆಸರಲ್ಲಿರುವ ೭ಸೆಂಟ್ಸ್ ಸ್ಥಳವನ್ನು ಹಿತ್ತಿಲಿಗೆ ಸೇರಿಕೊಂಡಿರುವ ಬನಕ್ಕಾಗಿ  ಉಚಿತವಾಗಿ ನೀಡಿದ್ದಾರೆ. ಜಲೀಲ್ ರ ಪ್ರಾಮಾಣಿಕತೆಯನ್ನು ಬನ ಸಮಿತಿ ಹಾಗೂ ನಾಗರಿಕರು ಅಭಿನಂದಿಸಿದ್ದಾರೆ. ಬನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಾಧಿಕಾರಿಗಳಾದ ದಾಸ್ ಹಾಗೂ ಕುಟುಂಬ  ಗೌರವಿಸಿದರೂ ಬನ ಸಮಿತಿ ಸದಸ್ಯರು ಜಲೀಲ್‌ರಿಗೆ ಪಾರಿತೋಷಕ ನೀಡಿದರು. ನಾಡಿನಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಜೀವ ಕಾರುಣ್ಯ ಚಟುವಟಿಕೆಗಳಲ್ಲಿ ಜಲೀಲ್ …

ಎಡನೀರು ಮಠದಲ್ಲಿ ಮಹಾ ಶ್ರೀಚಕ್ರ ನವಾವರಣ ಪೂಜೆ

ಎಡನೀರು: ಎಡನೀರು ಮಠದಲ್ಲಿ ನಿನ್ನೆ ಅಪರಾಹ್ನ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಇವರ ಉಪಸ್ಥಿತಿ ಯಲ್ಲಿ ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿಯವರಿಂದ ಮಹಾ ಶ್ರೀಚಕ್ರ ನವಾವರಣ ಪೂಜೆ ಜರಗಿತು. ಈ ವೇಳೆ ವಿದುಷಿ ಎನ್.ಜೆ. ನಂದಿನಿ ಮತ್ತು ಬಳಗದವರಿಂದ ನವಾವರಣ ಕೃತಿ ಆಲಾಪನೆ ಜರಗಿತು. ವಯಲಿನ್‌ನಲ್ಲಿ ವಿದ್ವಾನ್ ವಿಠಲರಾಮಮೂರ್ತಿ ಚೆನ್ನೈ, ಮೃದಂಗದಲ್ಲಿ ಆನೂರು ಅನಂತಕೃಷ್ಣ ಶರ್ಮ ಬೆಂಗಳೂರು, ಮೋರ್ಸಿಂಗ್‌ನಲ್ಲಿ ಪಯ್ಯನ್ನೂರು ಗೋವಿಂದ ಪ್ರಸಾದ್ ಸಹಕರಿಸಿದರು.