ಅಂಗಡಿಗೆ ನುಗ್ಗಿ ವ್ಯಾಪಾರಿಗೆ ಹಲ್ಲೆ: ಮೂವರ ವಿರುದ್ಧ ಕೇಸು ದಾಖಲು

ಬದಿಯಡ್ಕ: ಅಂಗಡಿಗೆ ನುಗ್ಗಿ ವ್ಯಾಪಾರಿಗೆ ಹಲ್ಲೆ ನಡೆಸಿ 65,000 ರೂ. ನಷ್ಟಗೊಳಿಸಿದ ದೂರಿನಂತೆ ಮೂವರ ವಿರುದ್ದ ಬದಿಯಡ್ಕ ಪೊಲೀ ಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ದ.ಕ. ಜಿಲ್ಲೆಯ ಪುತ್ತೂರು ಬೆಟ್ಟಂ ಪಾಡಿ ಕುಟ್ಟತ್ತನ ಹೌಸ್‌ನ ಮೊಹ ಮ್ಮದ್ ಅಶ್ರಫ್ ಕೆ.ಎಂ  ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಗಣೇಶನ್, ಅವಿನಾಶ್ ಮತ್ತು ಇನ್ನೋರ್ವ ಸೇರಿದಂತೆ ಮೂರು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರುಗಾರ ವಹಮ್ಮದ್ ಅಶ್ರಫ್ ಪೆರ್ಲದಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಮೇ 19ರಂದು …

ಅನಧಿಕೃತ ಹೊಯ್ಗೆ ಸಾಗಾಟ: ಮಫ್ತಿ ವೇಷದಲ್ಲಿ ಪೊಲೀಸ್ ಕಾರ್ಯಾಚರಣೆ; ಲಾರಿ ಚಾಲಕ ಸೆರೆ: ಇಬ್ಬರ ವಿರುದ್ಧ ಕೇಸು

ಕುಂಬಳೆ: ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವುದರ ವಿರುದ್ಧ ಕುಂಬಳೆ ಪೊಲೀಸರು ಕಾರ್ಯಾಚರಣೆ ಇನ್ನಷ್ಟು ಬಿಗಿಗೊಳಿಸಿದ್ದಾರೆ. ಇದರಂತೆ ಅನಧಿಕೃತವಾಗಿ ಸಾಗಿಸುತ್ತಿದ್ದ ಹೊಯ್ಗೆ ಹಾಗೂ ಸಾಗಾಟಕ್ಕೆ ಬಳಸಿದ ಟಿಪ್ಪರ್ ಲಾರಿಯನ್ನು  ಕುಂಬಳೆ ಎಸ್‌ಐ ಅನಂತಕೃಷ್ಣನ್ ಆರ್ ಮೆನೋನ್ ವಶಪಡಿಸಿದ್ದಾರೆ. ಟಿಪ್ಪರ್ ಲಾರಿ ಚಾಲಕನನ್ನು ಸೆರೆಹಿಡಿದಿದ್ದು, ವಾಹನದ ಮಾಲಕನ ಸಹಿತ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ. ನಿನ್ನೆ ಮಧ್ಯರಾತ್ರಿ ಶಿರಿಯ ಹೊಳೆಯ ಪಾಚಾಣಿಯಿಂದ ಹೊಯ್ಗೆ ಸಂಗ್ರಹಿಸಿ ಸಾಗಿಸುತ್ತಿರುವ ಮಾಹಿತಿ ಲಭಿಸಿದ ಎಸ್‌ಐ ಅನಂತಕೃಷ್ಣನ್ ಮಫ್ತಿ ವೇಷದಲ್ಲಿ  ಕಾರಿನಲ್ಲಿ ತಲುಪಿ ಶಿರಿಯ …

ಬೆಂಗಳೂರಿನಲ್ಲಿ ಯುವತಿ ಮೇಲೆ ದೌರ್ಜನ್ಯ: ಬತ್ತೇರಿ ನಿವಾಸಿ ವಿರುದ್ಧ ಕೇಸು

ಬೆಂಗಳೂರು: ಬೆಂಗಳೂರಿನಲ್ಲಿ ವಾಸಿಸಿ ಕೆಲಸ ನಿರ್ವಹಿಸುತ್ತಿರುವ ಕೇರಳೀಯಳಾದ ಯುವತಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಗ್ಗೆ ದೂರಲಾಗಿದೆ. ಬೆಂಗಳೂರಿನ ಕೆಫೆಯಲ್ಲಿ ಪಾರ್ಟ್‌ಟೈಂ ಕೆಲಸ ನಿರ್ವಹಿಸುವ ಕೋಟ್ಟಯಂ ನಿವಾಸಿಯಾದ ೨೦ರ ಹರೆಯದ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ.  ಪಡಿವಾಳದಲ್ಲಿ ವಾಸಿಸುವ ಬತ್ತೇರಿ ನಿವಾಸಿ ಹೈನಸ್ ಎಂಬಾತ ದೌರ್ಜನ್ಯವೆಸಗಿರುವುದಾಗಿ ಯುವತಿ ಆರೋಪಿಸಿದ್ದಾಳೆ.  ಈ ತಿಂಗಳ 12ರಂದು ಯುವತಿ ವಾಸಿಸುವ ಸ್ಥಳಕ್ಕೆ ತಲುಪಿ ಹೈನಸ್ ದೌರ್ಜನ್ಯ ನಡೆಸಿದ್ದಾನೆನ್ನಲಾಗಿದೆ. ಅದರ ಮರುದಿನವೇ ಪೊಲೀಸ್ ಠಾಣೆಗೆ ತಲುಪಿ ಯುವತಿ ದೂರು ನೀಡಿದರೂ ಪೊಲೀಸರು ಅದನ್ನು ಸ್ವೀಕರಿಸಿಲ್ಲ. ಇದರಿಂದ …

ಯುವತಿಯರನ್ನು ದುಬಾಯಿಗೆ ತಲುಪಿಸಿ ಸೆಕ್ಸ್ ರ‍್ಯಾಕೆಟ್ :ಸಿನಿಮಾ, ಸೀರಿಯಲ್ ಕಲಾವಿದರು, ಗೂಂಡಾ ತಂಡಗಳನ್ನು ಕೇಂದ್ರೀಕರಿಸಿ ತನಿಖೆ

ಕೊಚ್ಚಿ: ಫ್ಯಾಶನ್ ಶೋಗೆಂದು ತಿಳಿಸಿ ಕೇರಳೀಯರಾದ ಕೆಲವು ಯುವತಿಯರನ್ನು ದುಬಾಯಿಗೆ ಕರೆದೊಯ್ದು ಅವರನ್ನು ವೇಶ್ಯಾವಾಟಿಕೆ  ಜಾಲಕ್ಕೆ ಹಸ್ತಾಂತರಿಸಿದ ಪ್ರಕರಣದಲ್ಲಿ ಸಿನಿಮಾ, ಸೀರಿಯಲ್‌ನ ಕೆಲವು ಕಲಾವಿದರು ಹಾಗೂ ಗೂಂಡಾ ತಂಡಗಳನ್ನು ಕೇಂದ್ರೀಕರಿಸಿ ತನಿಖೆ ಆರಂಭಿಸಲಾಗಿದೆ. ಯುವತಿಯರನ್ನು ದುಬಾಯಿಗೆ ತಲುಪಿಸಿ ಸೆಕ್ಸ್ ರ‍್ಯಾಕೆಟ್‌ಗೆ ಹಸ್ತಾಂತರಿಸಿದ ಪ್ರಕರಣದಲ್ಲಿ  ಸೆರೆಗೀಡಾದ ಮುಖ್ಯ ಆರೋಪಿ ಆಲುವ ತೈನೋತ್ ಕಡವಿನಲ್ಲಿ ವಾಸಿಸುವ ಗುರುವಾಯೂರು ನಿವಾಸಿ ಸಿಂಧು ಯಾನೆ  ಸ್ಟೋಯ್‌ಸಿ (56) ಎಂಬಾಕೆಯ ಮಗ ಹಾಗೂ ಮಗಳು ನಡೆಸುವ ಕಂಪೆನಿಯೊಂದಿಗೆ ಕೆಲವು ಸಿನಿಮಾ, ಸೀರಿಯಲ್ ಕಲಾವಿದರಿಗೆ  ನಂಟಿದೆಯೆಂದು  …

ಪಿಕ್ಕಾಸು ಲಭಿಸಿದರೆ ಅಣ್ಣಾಚಿ ರಾಜನ್ ತೆರೆಯದ ಬಾಗಿಲುಗಳಿಲ್ಲ: ಪೂಚಕ್ಕಾಡ್‌ನಲ್ಲಿ ನಡೆದ ಕಳವು ಪ್ರಕರಣದಲ್ಲಿ ಸೆರೆಯಾದ ಈತನ ಬದುಕು ಐಷಾರಾಮಿ

ಕಾಸರಗೋಡು: ಕೇರಳ- ಕರ್ನಾಟಕ ಪೊಲೀಸರಿಗೆ ಬೇಕಾಗಿದ್ದ ಮಾತ್ರವಲ್ಲ ತಮಿಳುನಾಡು ಕೊಯಂಬತ್ತೂರು ಮೇಟು ಪಾಳಯಂ ನಿವಾಸಿಯಾದ ರಾಜನ್ ಅಲಿಯಾಸ್ ಅಣ್ಣಾಚಿ ರಾಜನ್ ವಿವಿಧ ರಾಜ್ಯಗಳಲ್ಲಾಗಿ ೩೦ಕ್ಕೂ ಅಧಿಕ ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈತ ಜೈಲಿನಿಂದ ಹೊರಗೆ ಬಂದರೆ ಎಲ್ಲಾದರೂ ಖಂಡಿತವಾಗಿ ಕಳವು ನಡೆಸುವನು ಎಂಬ ವಿಷಯದಲ್ಲಿ ಪೊಲೀಸರಿಗೆ ಸಂಶಯವಿಲ್ಲ. ಯಾವುದೇ ಸಂದರ್ಭದಲ್ಲಿ ಮೊಬೈಲ್ ಫೋನ್ ಉಪಯೋಗಿಸದ ವ್ಯಕ್ತಿಯಾಗಿದ್ದಾನೆ ರಾಜನ್. ಆದುದರಿಂದ ಸೈಬರ್ ಸೆಲ್‌ನ ಸಹಾಯದೊಂದಿಗೆ ಈತನನ್ನು ಪತ್ತೆಹಚ್ಚಲು ಕಷ್ಟ. ಕಳವು ನಡೆಸಲು ಈತನಿಗೆ ಹೆಚ್ಚಿನ ಆಯುಧಗಳು ಅಗತ್ಯವಿಲ್ಲ.  ಕೇವಲ …

ಅಸೌಖ್ಯ: ಚಿಕಿತ್ಸೆಯಲ್ಲಿದ್ದ ಗೃಹಿಣಿ ನಿಧನ

ನೀರ್ಚಾಲು: ಹೃದಯ ಸಂಬಂಧ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಗೃಹಿಣಿ ಮೃತಪಟ್ಟರು. ನೀರ್ಚಾಲು ಸಮೀಪದ ಕಡಂಬಳ ಸರೋಜಿನಿ (69) ನಿಧನ ಹೊಂದಿದವರು. ಅನಾರೋಗ್ಯ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಮನೆಗೆ ಮರಳಿದ್ದರು. ಮೃತರು ಪತಿ ಪಾಲನ್, ಮಕ್ಕಳಾದ ಶ್ರೀದೇವಿ, ಶ್ರೀಕುಮಾರ್, ಸಂತೋಷ್, ಅಳಿಯ ಹರಿಪ್ರಸಾದ್ ಕುಂಟಂಗೇರಡ್ಕ, ಸೊಸೆಯಂದಿರಾದ ಗೀತಾ, ಸುನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಉಪ್ಪಳ ಗೇಟ್ ಪರಿಸರದ ಸರ್ವೀಸ್ ರಸ್ತೆಯಲ್ಲಿ ಕಟ್ಟಿ ನಿಲ್ಲುವ ಮಳೆನೀರು: ಹೊಸ ಚರಂಡಿ ನಿರ್ಮಾಣ ಆರಂಭ

ಉಪ್ಪಳ: ಉಪ್ಪಳ ಗೇಟ್ ಪರಿಸರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹಗೊಳ್ಳುತ್ತಿರುವುದರಿಂದ ಸ್ಥಳೀಯರು ಸಮಸ್ಯೆಗೀಡಾಗಿದ್ದು, ಈ ನಿಟ್ಟಿನಲ್ಲಿ ಪರಿಸರದ ಸರ್ವೀಸ್ ರಸ್ತೆಯಲ್ಲಿ ಸುಮಾರು 300 ಮೀಟರ್ ರಸ್ತೆಯನ್ನು ಅಗೆದು ಇನ್ನೊಂದು ಚರಂಡಿ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಈ ಹಿಂದೆಯೇ ರಸ್ತೆಯ ಕಾಮಗಾರಿ ಪೂರ್ತಿಗೊಂಡಿದ್ದರೂ ಈ ಪರಿಸರದಲ್ಲಿ ವಿವಿಧ ಭಾಗದಿಂದ ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿರುವ ಮಳೆ ನೀರು ಚರಂಡಿಯಲ್ಲಿ ಹರಿದು ಹೋಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಟ್ಟಿ ನಿಂತು ಪರಿಸರ ಮನೆಗಳಿಗೆ ಸಮಸ್ಯೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇನ್ನೊಂದು …

ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿ ಮತ್ತೆ ಗಮನಸೆಳೆದ ಎ.ಕೆ.ಎಂ ಅಶ್ರಫ್

ತಿರುವನಂತಪುರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿ ಬಹುಮತದಿಂದ ಗೆಲುವು ಸಾಧಿಸಿದ ಎ.ಕೆ.ಎಂ ಅಶ್ರಫ್ ವಿಧಾನಸಭೆಯಲ್ಲಿ ಇಂದು ಶಾಸಕರಾಗಿ  ಕನ್ನಡದಲ್ಲೇ  ಪ್ರಮಾಣವಚನ ಸ್ವೀಕರಿಸಿ ಎಲ್ಲರ ಗಮನ ಸೆಳೆದರು. ಕಳೆದ ಬಾರಿಯೂ ಅವರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ್ದರು. ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸು ಮೂಲಕ ಕಾಸರಗೋಡು ಸಪ್ತಭಾಷಾ ಸಂಗಮ ಭೂಮಿಯಾಗಿದೆಯೆಂದು ಅವರು  ಮತ್ತೆ ಸಾಬೀತುಪಡಿಸಿದರು. ಹೊಸದಾಗಿ ಅಧಿಕಾರಕ್ಕೇರಿದ ಯುಡಿಎಫ್ ಸರಕಾರದಲ್ಲಿ ಎ.ಕೆ.ಎಂ ಅಶ್ರಫ್‌ರಿಗೆ ಸಚಿವ ಸ್ಥಾನ ಲಭಿಸಬಹುದೆಂಬ ನಿರೀಕ್ಷೆ  ಇತ್ತು.  ಆದರೆ ಅದು ಹುಸಿಯಾಗಿದೆ.  ಈ ಚುನಾವಣೆಯಲ್ಲಿ ಕಾಸರಗೋಡು …

ಮಿಲ್ಮಾ ಹಾಲಿನ ಬೆಲೆ ಲೀಟರ್‌ಗೆ 4 ರೂ. ಏರಿಕೆ

ತಿರುವನಂತಪುರ: ಮಿಲ್ಮಾ ಹಾಲಿನ ಬೆಲೆ ಪ್ರತೀ ಲೀಟರ್‌ಗೆ ತಲಾ 4ರೂ.ನಂತೆ  ಹೆಚ್ಚಿಸಲು ಮಿಲ್ಮಾದ ನಿರ್ದೇಶಕ ಮಂಡಳಿ ಸಭೆ ತೀರ್ಮಾನಿಸಿದೆ. ಈ ಹೆಚ್ಚಳ ಜೂನ್ ೧ರಿಂದ ಜ್ಯಾರಿಗೆ ಬರಲಿದೆ. ಇದಕ್ಕೆ ಹೊಂದಿಕೊಂಡು ಮಿಲ್ಮಾ ಇತರ ಉತ್ಪನ್ನಗಳ ಬೆಲೆಯೂ ಹೆಚ್ಚಾಗಲಿದೆ. ಈ ತೀರ್ಮಾನದಂತೆ ಹೋಮೋ ಜೆನೈಸ್ಡ್  ಟೋನ್ಡ್ ಹಾಲಿನ ಅಧ ಲೀಟರ್‌ನ ಬೆಲೆ   28 ರೂ.ಗೇರಲಿದೆ. ಹೀಗೆ ಹೆಚ್ಚಿಸಲಾಗುವ 4 ರೂ.ನಲ್ಲಿ 3ರೂ 35 ಪೈಸೆ ಹೈನುಗಾರಿಕಾ ಕೃಷಿಕರಿಗೆ, 26 ಪೈಸೆ ಹೈನುಗಾರಿಕಾ ಸೊಸೈಟಿಗೆ ಹಾಗೂ ಬಾಕಿ ಹಣ ಮಿಲ್ಮಾ …

ಪರಂಬಳ ದುರ್ಗಾಶಕ್ತಿ ಕುಣಿತ ಭಜನಾ ತಂಡ ಸಭೆ ಮೇ 24ರಂದು

ಉಪ್ಪಳ : ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಅಭಿನಂದನಾ ಸಭೆ 24ರಂದು ಬೆಳಿಗ್ಗೆ 9.30ಕ್ಕೆ ಶ್ರೀ ಭಾರತ್ ಮಾತಾ ಸೇವಾ ಟ್ರಸ್ಟ್ ಪರಂಬಳ ಕಯ್ಯಾರು ಇದರ ಸಭಾಂಗಣದಲ್ಲಿ ನಡೆಯಲಿದೆ. ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಗೌರವ ಮಾರ್ಗದರ್ಶಕಿ ರಮ್ಯಾ ಎನ್. ಸೀತಾಂಗೋಳಿ ಅಧ್ಯಕ್ಷತೆ ವಹಿಸÀÄವರು. ಗೀತಾ ಸಾಹಿತ್ಯ ಸಂಭ್ರಮದ ವಿಠಲ ನಾಯಕ್ ಕಲ್ಲಡ್ಕ ದಿಕ್ಸೂಚಿ ಭಾಷಣ ಮಾಡÀÄವರು. ಮುಖ್ಯ ಅತಿಥಿಗಳಾಗಿ ಕುಂಬಳೆ ಅಬಕಾರಿ ಅಧಿಕಾರಿ …