ವಿಶ್ವ ಪರಿಸರ ದಿನಾಚರಣೆ: ಎಕೆಪಿಎ ಈಸ್ಟ್ ಘಟಕದಿಂದ ಗಿಡ ವಿತರಣೆ

ಕಾಸರಗೋಡು: ವಿಶ್ವ ಪರಿಸರ ದಿನಾಚರಣೆಯಂಗವಾಗಿ ಎಕೆಪಿಎ ಭವನದಲ್ಲಿ ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಈಸ್ಟ್ ಘಟಕದ ನೇತೃತ್ವದಲ್ಲಿ ಗಿಡ ವಿತರಣೆ ನಡೆಯಿತು. ವಲಯಾಧ್ಯಕ್ಷ ವಾಮನ್ ಕುಮಾರ್ ಸಂಜೀವ ರೈಯವರಿಗೆ ಗಿಡ ನೀಡಿ ಉದ್ಘಾಟಿಸಿದರು. ಬಳಿಕ ೫೦ ಗಿಡಗಳನ್ನು ಘಟಕದ ಸದಸ್ಯರಿಗೆ ವಿತರಿಸಲಾಯಿತು. ಕಾರ್ಯದರ್ಶಿ ಅಖಿಲ್ ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀಕಾಂತ್, ನೇಚರ್ ಕ್ಲಬ್ ಕೋ-ಆರ್ಡಿನೇಟರ್ ದಿನೇಶ್, ಮನೀಶ್, ಸತೀಶ್ ಭಾಗವಹಿಸಿದರು.

ಹೊನ್ನಮೂಲೆ ಕ್ಷೇತ್ರಕ್ಕೆ ಧರ್ಮಸ್ಥಳದಿಂದ ಸಹಾಯ ಮೊತ್ತ ಹಸ್ತಾಂತರ

ಕಾಸರಗೋಡು: ಹೊನ್ನಮೂಲೆ ಶ್ರೀ ಮಹಾಮಾಯಿ ದುರ್ಗಾಪರ ಮೇಶ್ವರಿ ದೇವಸ್ಥಾನ ನೂತನ ಶಿಲಾಮಯದಿಂದ ನಿರ್ಮಾಣವಾಗು ತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ೨ಲಕ್ಷ ರೂ. ನೀಡಿರುತ್ತಾರೆ. ಈ ಮೊತ್ತದ ಡಿ.ಡಿ.ಯನ್ನು ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಕಾಸರಗೋಡು ಯೋಜನಾಧಿಕಾರಿ ದಿನೇಶ್, ದರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ಇದರ ಗೌರವಾಧ್ಯಕ್ಷ ಜಯಾನಂದ ಕುಮಾರ್ ಹೊಸದುರ್ಗ, ಅಧ್ಯಕ್ಷ ಕೆ. ಎನ್. ವೆಂಕಟ್ರಮಣ ಹೊಳ್ಳ,  ವಲಯ ಮೆಲ್ವಿಚಾರಕ ಗೋಪಾಲಕೃಷ್ಣ, ಜನ ಜಾಗೃತಿ ವಲಯ ಅಧ್ಯಕ್ಷ ಕಿರಣ ಪ್ರಸಾದ್ ಕೂಡ್ಲು ಇವರು ಕ್ಷೇತ್ರ …

ಚೆರ್ಕಳದಲ್ಲಿ ಮಳೆನೀರಿನೊಂದಿಗೆ ಮಣ್ಣು ಹರಿಯುವುದನ್ನು ತಡೆಗಟ್ಟಲು ತುರ್ತು ಕ್ರಮ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿಗೆ ಸಂಬಂಧಿಸಿ ಚೆರ್ಕಳದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ರಾಶಿ ಹಾಕಿದ್ದ ಮಣ್ಣು ಮಳೆ ನೀರಿನೊಂದಿಗೆ ಕೆಳ ಭಾಗದಲ್ಲಿದ್ದ ಮನೆಗಳಿಗೆ ಹರಿದು ಬಂದು ಉಂಟಾದ ಸಮಸ್ಯೆಗೆ ತುರ್ತು ಪರಿಹಾರ ಕಾಣಬೇಕೆಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಪರಿಹಾರ ಕ್ರಮ ಉಂಟಾಗುತ್ತಿದೆ. ಚೆಂಗಳ ಪಂಚಾಯತ್‌ನ ಅಧ್ಯಕ್ಷ ವಸಂತ  ಅಜಕ್ಕೋಡ್, ವಾರ್ಡ್ ಪ್ರತಿನಿಧಿಗಳು, ಇತರ ಜನಪ್ರತಿನಿಧಿಗಳು ತೀವ್ರ ಬೇಡಿಕೆ ಒಡ್ಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಸಂದರ್ಶಿಸಿ ತುರ್ತು ಕ್ರಮ ಕೈಗೊಳ್ಳಲು ಯೋಜನೆ ಹಾಕಿದ್ದಾರೆ. ಕಾಸರಗೋಡು ಆರ್‌ಡಿಒ ಬಿನು ಜೋಸೆಫ್, ತಹಶೀಲ್ದಾರ್ …

ಇಂಧನ ಬೆಲೆ ಏರಿಕೆ: ಸಿಪಿಎಂನಿಂದ ಪ್ರತಿಭಟನೆ

ಉಪ್ಪಳ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆದುರಾಗಿ ಸಿಪಿಎಂ ನೇತೃತ್ವದಲ್ಲಿ ರಾಜ್ಯದೆ ಲ್ಲಡೆ ಪ್ರತಿಭಟನೆ ನಡೆಸುವುದರ ಅಂಗವಾಗಿ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿಯ ನೇತೃತ್ವದಲ್ಲಿ ಪೈವಳಿಕೆ ಅಂಚೆ ಕಚೇರಿಗೆ ಧರಣಿ ನಡೆಸಲಾಯಿತು. ಸಿಪಿಎಂ ರಾಜ್ಯ ಸಮಿತಿ ಸದಸ್ಯ ಕೆ.ಪಿ ಸತೀಶ್ಚಂದ್ರನ್ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್ ಜಯಾನಂದ ಮಾತನಾಡಿದರು. ಸಿಪಿಎಂ ಏರಿಯಾ ಸಮಿತಿ ಸದಸ್ಯ ಅಬ್ದುಲï ರಝಾಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಸಿಜಿ ಮ್ಯಾಥ್ಯು ಸ್ವಾಗತಿಸಿದರು. ಏರಿಯಾ ಸಮಿತಿ …