ಇಂದು ತಡರಾತ್ರಿಯಿಂದ ಟ್ರೋಲಿಂಗ್ ನಿಷೇಧ

ಕಾಸರಗೋಡು: ಮಳೆಗಾಲ  ಮೀನುಗಳ ಸಂತಾನೋತ್ಪತ್ತಿಯ ಋತುವಾಗಿದೆ. ಇದರಿಂದಾಗಿ ಮೀನುಗಳ ಸಂತಾನೋತ್ಪತ್ತಿಯನ್ನು ಹೆಚ್ಚಿಸಿ ಆ ಮೂಲಕ ಮತ್ಸ್ಯ ಸಂಪತ್ತನ್ನು ವೃದ್ಧಿಗೊಳಿಸಿ ಸಂರಕ್ಷಿಸುವ ಸಲುವಾಗಿ  ಪ್ರತೀವರ್ಷ ಏರ್ಪಡಿಸುವ ರೀತಿಯಲ್ಲಿ  ಆಳ ಸಮುದ್ರದಲ್ಲಿ ಮೀನುಗಾ ರಿಕೆಯನ್ನು ತಡೆಗಟ್ಟುವ ಟ್ರೋಲಿಂಗ್ ನಿಷೇಧ ರಾಜ್ಯದಲ್ಲಿ ಇಂದು ತಡರಾತ್ರಿ 12 ಗಂಟೆಗೆ ಜ್ಯಾರಿಗೊಳ್ಳಲಿದೆ. ಇದು ಜುಲೈ 31ರ ತನಕ ಅಂದರೆ 52 ದಿನಗಳ ಕಾಲ ಮುಂದುವರಿಯಲಿದೆ. ಇದರಂತೆ ಮೀನುಗಾರಿಕಾ ಬೋಟ್‌ಗಳು ಇಂದು ರಾತ್ರಿ ದಡ ಸೇರಿ ಸುರಕ್ಷಿತ ತಾಣಗಳಿಗೆ ಸೇರಲಿದೆ. ಟ್ರೋಲಿಂಗ್ ನಿಷೇಧ ಜ್ಯಾರಿಯ ಲ್ಲಿರುವ …

ಕೂದಲು ತೆಗೆಸಲು ತಲುಪಿದ ಬಾಲಕನಿಗೆ ದೌರ್ಜನ್ಯ: ಬಾರ್ಬರ್ ಶಾಪ್‌ಗೆ ಆಕ್ರಮಣ

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿಯಾಟ್ ಮಸೀದಿ ಸಮೀಪದ ಬಾರ್ಬರ್ ಶಾಪ್ ವಿರುದ್ಧ ಆಕ್ರಮಣವುಂಟಾಗಿದೆ. ಅಂಗಡಿ ಮಾಲಕಿಯಾದ ಯುವತಿ ನೀಡಿದ ದೂರಿನಂತೆ ಮೂರು ಮಂದಿ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿಖಿಲ್, ಅನೂಪ್, ಗುರುತುಪತ್ತೆಹಚ್ಚ ಬಹುದಾದ ಇನ್ನೋರ್ವನ ವಿರುದ್ಧ ಕೇಸು ದಾಖಲಿಸಲಾಗಿದೆ. ಆದಿತ್ಯವಾರ ರಾತ್ರಿ 10 ಗಂಟೆ ವೇಳೆ ಬಾರ್ಬರ್ ಶಾಪ್‌ನ ಬೀಗ ಹಾಗೂ ಬೋ ರ್ಡ್ ನಾಶಪಡಿಸಿ ಇನ್ನೊಂದು ಬೋರ್ಡನ್ನು ತೆಗೆದುಕೊಂಡು ಹೋಗಿ 15,೦೦೦ ರೂ. ನಷ್ಟ ಉಂಟುಮಾಡಲಾಗಿದೆ ಎಂದು ಚಂದೇರ ಪೊಲೀಸರು …

ಜುಗಾರಿ ಕೇಂದ್ರದಿಂದ 6 ಮಂದಿ ಸೆರೆ: 49,740 ರೂ. ವಶ

ಕಾಸರಗೋಡು: ಜುಗಾರಿ ಕೇಂದ್ರಕ್ಕೆ ದಾಳಿ ನಡೆಸಿದ ಪೊಲೀಸರು ಆರು ಮಂದಿಯನ್ನು ಬಂಧಿಸಿ ೪೯,೭೪೦ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಬಂದಡ್ಕ  ಮಾರಿಪಡ್ಪು ಎಂಬಲ್ಲಿನ ರಬ್ಬರ್ ತೋಟದಲ್ಲಿ ಟೆಂಟ್ ಹಾಕಿ ಜೂಜಾಟ ದಂಧೆ ನಡೆಸಲಾಗುತ್ತಿತ್ತು. ಬಂದಡ್ಕ ಚಿಕ್ಕಂಡಮೂಲೆ ಕೋಟಪದವು ನಿವಾಸಿ ಕೆ.ಜಿ. ಅನಿಲ್ ಕುಮಾರ್ (50) , ಪನತ್ತಡಿ ಚೆರುಪನತ್ತಡಿ ಮಲಾಂಕುಡ್ ಅರಿಮಣಲ್ ನಿವಾಸಿ ಎಬಿ. ರೋಯಿ (50). ಚೆರುಪನತ್ತಡಿ ಸೈಂಟ್ ಮೇರಿಸ್  ಕಾಲೇಜು ಬಳಿಯ ಪೂಕಾಂಬೆ ಹೌಸ್‌ನ ಪಿ.ಎಂ. ಶಿಬು (54), ಕರಿವೇಡಗಂ ಮಾರಿಪಡ್ಪು …

2990 ಪ್ಯಾಕೆಟ್ ತಂಬಾಕು ಉತ್ಪನ್ನ ಸಹಿತ ಓರ್ವ ಸೆರೆ

ಉಪ್ಪಳ: ಗೋಣಿಚೀಲದಲ್ಲಿ ತುಂಬಿಸಿ ಮಾರಾಟಕ್ಕೆ ಕೊಂಡೊಯ್ಯುತ್ತಿದ್ದ ಭಾರೀ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ವಶಪಡಿಸಿ ಓರ್ವನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ ನಿವಾಸಿಯೂ, ಪ್ರಸ್ತುತ  ಕುಂಜತ್ತೂರು ಮಾಸ್ಕೋಹಾಲ್ ಬಳಿ ವಾಸಿಸುವ ಭರತ್ ಸೋಂಕಾರ್ (30) ಎಂಬಾತನನ್ನು ಮಂಜೇಶ್ವರ ಎಸ್‌ಐ ಶಬರಿಕೃಷ್ಣ ಹಾಗೂ ತಂಡ ಬಂಧಿಸಿದೆ. ಬಂಧಿತನ ಕೈಯಿಂದ ವಿವಿಧ ರೀತಿಯ 2990  ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ. ನಿನ್ನೆ ಮಧ್ಯಾಹ್ನ 1.15ರ ವೇಳೆ ಕುಂಜತ್ತೂರಿನಲ್ಲಿ ಎಸ್‌ಐ ಶಬರಿಕೃಷ್ಣನ್ ನೇತೃತ್ವದ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಭರತ್ ಸೋಂಕಾರ್ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದಾನೆ. …

ಮನೆಗೆ ಸಿಡಿಲಿನ ಆಘಾತ: ವ್ಯಾಪಕ ಹಾನಿ

ನೀರ್ಚಾಲು: ಸಿಡಿಲಿನ ಆಘಾತದಿಂದ ಮನೆಯ ವಿದ್ಯುತ್ ಉಪಕರಣಗಳು ಹಾನಿಗೀಡಾಗಿ ವ್ಯಾಪಕ ನಾಶನಷ್ಟ ಸಂಭವಿಸಿದೆ.  ಬಾಪಾಲಿಪೊನದ ಬಿ.ಎಂ. ಅಲಿಕುಂಞಿ ಎಂಬವರ ಮನೆಗೆ ಸಿಡಿಲು ಬಡಿದಿದೆ. ಇದರಿಂದ  ವಿದ್ಯುತ್ ವಯರಿಂಗ್, ಮೋಟಾರು, ವಾಷಿಂಗ್ ಮೆಶಿನ್ ಮೊದಲಾದ ಉಪಕರಣಗಳು ಹಾನಿಗೀಡಾಗಿವೆ.  ಮನೆಯ ಒಂದು ಬದಿಯ ಕಾಂಕ್ರೀಟ್ ತುಂಡಾಗಿ ಬಿದ್ದಿದೆ. ನಿನ್ನೆ ಸಂಜೆ ಸಿಡಿಲು ಬಡಿದಿದ್ದು ಮನೆ ಸಮೀಪದ ತೆಂಗಿನ ಮರಕ್ಕೂ ಹಾನಿಯುಂಟಾಗಿದೆ.  ಸಿಡಿಲಿನ ಸದ್ದು ಕೇಳಿ ಮನೆಯವರು ಹೊರಗೆ ಓಡಿದ್ದು ಇದರಿಂದ ಅಪಾಯದಿಂದ ಪಾರಾಗಿದ್ದಾರೆ.

ರಾಜ್ಯದ ಜನರ ಮನಸ್ಸಲ್ಲಿ ಪ್ರಧಾನ ವಿಪಕ್ಷ ಬಿಜೆಪಿ- ವಿ.ಕೆ. ಸಜೀವನ್

ಕಾಸರಗೋಡು: ವಿಧಾನಸಭಾ ಚುನಾವಣೆಯ ಬಳಿಕ ಜನರ ಮನಸ್ಸಲ್ಲಿ ಪ್ರಧಾನ ವಿಪಕ್ಷದ ಪಾತ್ರವನ್ನು ಬಿಜೆಪಿ ನಿರ್ವಹಿಸುತ್ತಿದೆ ಎಂದು ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ನುಡಿದರು. ಶಬರಿಮಲೆ ಚಿನ್ನ ದರೋಡೆ, ಸಿಎಂಆರ್‌ಎಲ್- ಎಕ್ಸಾಲಾಜಿಕ್ ಅವ್ಯವಹಾರ ಸಹಿತ ವಿವಿಧ ವಿಷಯಗಳನ್ನು ವಿಧಾನಸಭೆಯ ಹೊರಗೆ ಹಾಗೂ ಒಳಗೆ ಬಿಜೆಪಿ ಶಾಸಕರು ಮತ್ತೆ ಸಕ್ರಿಯಗೊಳಿಸಿರುವುದಾಗಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಪ್ರಶಿಕ್ಷಣ್ ಮಹಾ ಅಭಿಯಾನಕ್ಕೆ ಸಂಬಂಧಿಸಿ ನಡೆದ ಜಿಲ್ಲಾ ನಾಯಕತ್ವ ಸಭೆ ಉದ್ಘಾಟಿಸಿ ಅವರು ಹೇಳಿದರು. ಬಿಜೆಪಿಯ ಆಶಯ, ಇತಿಹಾಸ, ಕಾರ್ಯಯೋಜನೆ, ಉದ್ದೇಶ …

ಹಿರಿಯ ಬಡಗಿ ನಿಧನ

ಬಾಯಾರು: ಬಳ್ಳೂರು ನಿವಾಸಿ ವೆಂಕಟ್ರಮಣ ಆಚಾರ್ಯ (88) ನಿನ್ನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಬಡಗಿ ಹಾಗೂ ಕೃಷಿಕರಾಗಿದ್ದರು. ಬಾಯಾರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಹಿರಿಯ ಸದಸ್ಯರಾಗಿದ್ದರು. ಮೃತರು ಪತ್ನಿ ಯಶೋದ, ಮಕ್ಕಳಾದ ವಿಕ್ರಮ, ಭುವನೇಶ್ವರಿ, ಸರೋಜಿನಿ, ಶಶಿಧರ, ತಾರಾನಾಥ, ವನಿತಾ, ಸೊಸೆಯಂದಿ ರಾದ ರೇಣುಕಾ, ಶ್ಯಾಮಲ, ಶೋಭ, ಅಳಿಯಂದಿರಾದ ಲತೇಶ, ಪುಷ್ಪಾಕರ, ವಿನೋದ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರ ದಾಮೋದರ ಆಚಾರ್ಯ, ಸಹೋದರಿಯರಾದ ಪಾರ್ವತಿ, ಚಂದ್ರಾವತಿ ಈ ಹಿಂದೆ …

ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆ ವಿರುದ್ಧ ಸಿಐಟಿಯುನಿಂದ ಹೊಸಂಗಡಿ ಅಂಚೆಕಚೇರಿ ಮುಂದೆ ಧರಣಿ

ಮಂಜೇಶ್ವರ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆದುರಾಗಿ ಹೊಸಂಗಡಿ ಪೋಸ್ಟ್ ಆಫೀಸ್ ಮುಂದೆ ಸಿ.ಐ.ಟಿ.ಯು ಧರಣಿ ನಡೆಸಿದೆ. ಸಿ.ಐ.ಟಿ.ಯು ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ ಉದ್ಘಾಟಿಸಿ ಕೇಂದ್ರ ಸರಕಾರ ಪಶ್ಚಿಮ ಏಷ್ಯಾ ಯುದ್ದದ ಕಾರಣ ನೀಡಿ ಬಂಡವಾಳ ಶಾಹಿಗಳಿಗೆ ದೇಶದ ಬಡಜನತೆಯನ್ನೂ ಕೊಳ್ಳೆ ಒಡೆಯಲು ಲೈಸೆನ್ಸ್ ಕೊಟ್ಟಂತಾಗಿದೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಪೆಟ್ರೋಲ್ ಬೆಲೆ ಕಡಿಮೆ ಗೊಳಿಸಲು ಮುಂದಾಗಬೇಕು ಎಂದರು. ಚಂದ್ರ ನಾಯ್ಕ್ ಅಧ್ಯಕ್ಷತೆ ವಹಿಸಿದರು. ಸತೀಶ್ …

ರಸ್ತೆ ಮಧ್ಯೆ ಕೆಟ್ಟುಹೋದ ಲಾರಿ: ವಾಹನ ಸಂಚಾರ ಮೊಟಕುಗೊಂಡು ಪ್ರಯಾಣಿಕರಿಗೆ ಸಮಸ್ಯೆ

ಉಪ್ಪಳ: ಮರದ ದಿಮ್ಮಿ ಸಾಗಾಟದ ಲಾರಿಯೊಂದು ಬಾಯಾರು ಬಳಿಯ ಕೊಜಪೆಯಲ್ಲಿ ಕೆಟ್ಟು ಹೋಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ. ಮುಳಿಗದ್ದೆ-ಬೆರಿಪದವು ರಸ್ತೆಯ ಕೊಜಪೆ ಎಂಬಲ್ಲಿ ಇಕ್ಕಟ್ಟಾದ ಏರು ರಸ್ತೆಯಲ್ಲಿ ಬೆರಿಪದವು ಭಾಗದಿಂದ ಉಪ್ಪಳ ಭಾಗಕ್ಕೆ ಸಂಚರಿಸುತ್ತಿದ್ದ ಲಾರಿ ರಸ್ತೆ ಮಧ್ಯದಲ್ಲಿ ಕೆಟ್ಟು ಹೋಗಿತ್ತು. ಇದರಿಂದ ವಾಹನ ಸಂಚಾರಕ್ಕೆ ಹರಸಾಹಸ ಪಡಬೇಕಾ ಯಿತು.ಉಪ್ಪಳದಿಂದ ಪೆರ್ಲ, ಬೆರಿಪದವು, ಬಳ್ಳೂರು ಕಡೆಗಳಿಗೆ ಬಸ್‌ಗಳು ಬಾಯಾರು ಸೊಸೈಟಿ, ಕನಿಯಾಲ ಮೂಲಕ ಸುತ್ತು ಬಳಸಿ ಸಂಚಾರ ನಡೆಸಬೇಕಾದ ಅವಸ್ಥೆ ಉಂಟಾಗಿದೆ. ಇದರಿಂದ ಸಾರ್ವಜನಿಕರು …

ಎರಡೂವರೆ ವರ್ಷದ ಮಗುವಿನ ಚಿಕಿತ್ಸೆಗೆ ಸಹಾಯ: ಡಿವೈಎಫ್‌ಐಯಿಂದ  ಬಿರಿಯಾಣಿ ಚಾಲೆಂಜ್

ಕುಂಬಳೆ: ಗಂಭೀರ ಅಸೌಖ್ಯ ಬಾಧಿಸಿದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ರಹೀಫ್ ಎಂಬ ಎರಡೂವರೆ ವರ್ಷದ ಮಗುವಿನ ಚಿಕಿತ್ಸೆ ಖರ್ಚಿಗೆ ಹಣ ಸಂಗ್ರಹಿಸುವ ಅಂಗವಾಗಿ ಡಿವೈಎಫ್‌ಐ ಪೆರ್ಮುದೆ ಟೌನ್ ಕಮಿಟಿ ಬಿರಿಯಾಣಿ ಚಾಲೆಂಜ್ ನಡೆಸಿತು. ಈ ಮೂಲಕ ಲಭಿಸುವ ಹಣವನ್ನು ಕಮಿಟಿ  ಪೆರ್ಮುದೆ ಟ್ರಸ್ಟ್ ಅಕೌಂಟ್‌ಗೆ ಹಸ್ತಾಂತರಿಸಲಾಗುವುದು. ಪೆರ್ಮುದೆ ನಿವಾಸಿ ರೌಫ್ ಎಂಬವರ ಪುತ್ರನಾದ ರಹೀಫ್‌ಗೆ ಗಂಭೀರ ಅಸೌಖ್ಯ ಬಾಧಿಸಿದ್ದು, ಕಳೆದ ಮೂರು ತಿಂಗಳಿಂದ ಬೆಂಗಳೂರಿನಲ್ಲಿ ಚಿಕಿತ್ಸೆಯಲ್ಲಿದ್ದಾನೆ. ಮುಂದಿನ ಚಿಕಿತ್ಸೆಗೆ ಇನ್ನು ಕೂಡಾ ಭಾರೀ ಮೊತ್ತ ಅಗತ್ಯವಿದೆ. ಆದ್ದರಿಂದ …