ಬೋಳಂಗಳದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯದಿಂದ ಸಾಂಕ್ರಾಮಿಕರೋಗ ಭೀತಿ: ಕಸ ತೆರವುಗೊಳಿಸಿ ಶುಚಿಗೊಳಿಸಲು ಡಿಫಿ ಆಗ್ರಹ

ಪೈವಳಿಕೆ: ಪಂಚಾಯತ್‌ನ ಬೋಳಂಗಳದಲ್ಲಿ ಇರುವ ಮಾಲಿನ್ಯ ವಿಲೇವಾರಿ ಕೇಂದ್ರದ ಬಳಿ ರಾಶಿ ಬಿದ್ದ ತ್ಯಾಜ್ಯ ಪರಿಸರಕ್ಕೆ ಹಾನಿಯುಂಟು ಮಾಡುತ್ತಿದ್ದು, ಸ್ಥಳೀಯರ ಆರೋಗ್ಯದ ಬಗ್ಗೆ ಆತಂಕ ಹುಟ್ಟಿಸಿದೆ. ಮನೆಮನೆಗಳಿಂದ ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆಯರು ಸಂಗ್ರಹಿಸುವ ಪ್ಲಾಸ್ಟಿಕ್  ತ್ಯಾಜ್ಯವನ್ನು  ಬೋಳಂ ಗಳದಲ್ಲಿರುವ ವಿಲೇವಾರಿ ಕೇಂದ್ರದಲ್ಲಿ ತಂದಿರಿಸಲಾಗುತ್ತಿದೆ. ಇಲ್ಲಿ ಕೇಂದ್ರದೊಳಗೆ ಹಾಗೂ ಹೊರಗೆ ರಾಶಿ ಬಿದ್ದಿರುವ ತ್ಯಾಜ್ಯದಿಂದ ದುರ್ವಾಸನೆ ಪರಿಸರವಿಡೀ ಹರಡುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ನಿರ್ಮಾಣವಾಗಿದೆ. ರಾಜ್ಯದೆಲ್ಲೆಡೆ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪರಿಸರದ ಜನರು ಇನ್ನಷ್ಟು …

ಸೇವಾ ಭಾರತಿಯಿಂದ ಬದಿಯಡ್ಕದಲ್ಲಿ ಸುಕೃತಂ ಪಾಲಿಯೇಟಿವ್ ಕೇರ್ ವಾಹನ ಆರಂಭ

ಬದಿಯಡ್ಕ: ದೇಶೀಯ ಸೇವಾ ಭಾರತಿ, ಬದಿಯಡ್ಕ ಘಟಕದ ಕಾರುಣ್ಯ ಸೇವಾ ಕಾರ್ಯಗಳಿಗಾಗಿ ಸೇವಾ ಶಕ್ತಿ ಫೌಂಡೇಷನ್ ಸಂಸ್ಥೆ ಮತ್ತು ಶಾಂತಿಮಠAನ ಕೊಡುಗೆ, ಸುಕೃತಂ ಪ್ಯಾಲೀಯೇಟಿವ್ ಕೇರ್ ವಾಹನದ ಲೋಕಾರ್ಪಣೆ ಕಾರ್ಯಕ್ರಮ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಜರಗಿತು. ಉದ್ಯಮಿ ಗೋಪಾಲಕೃಷ್ಣ ಪೈ ಬಿ. ವಾಹನಕ್ಕೆ ಚಾಲನೆ ನೀಡಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬದಿಯಡ್ಕ ಪಂ. ಅಧ್ಯಕ್ಷ ಶಂಕರ.ಡಿ ಮುಖ್ಯ ಅತಿಥಿಯÁಗಿ ಮಾತನಾಡಿ, ಸಮಾಜ ಸೇವೆಗೆ ಮತ್ತೊಂದು ಹೆಸರಾಗಿರುವ ಸೇವಾ ಭಾರತಿಯ ಈ ಸಾರ್ವಜನಿಕ ಹಿತಚಿಂತನಾ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ …

ಮಂಜೇಶ್ವರ: ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕಾಗಿ ವಿಧಾನಸಭೆಯಲ್ಲಿ ವಿವಿಧ ಯೋಜನೆಗಳ ಘೋಷಣೆ; ಸ್ಥಳ ಸಂದರ್ಶಿಸುವುದಾಗಿ ನೀರಾವರಿ ಸಚಿವ

ಮಂಜೇಶ್ವರ: ಮಂಜೇಶ್ವರ ಮಂಡಲದ ಕರ್ನಾಟಕ ಗಡಿಯಿಂದ ಆರಂಭಿಸಿ ಮೊಗ್ರಾಲ್ ವರೆಗಿರುವ ತೀರ ಪ್ರದೇಶಗಳಲ್ಲಿ ತೀವ್ರವಾದ ಕಡಲ್ಕೊರೆತ ಉಂಟಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಾಣಬೇಕೆಂದು ಆಗ್ರಹಿಸಿ ಶಾಸಕ ಎಕೆಎಂ ಅಶ್ರಫ್ ವಿಧಾನಸಭೆಯಲ್ಲಿ ಮಂಡಿಸಿದ ಸಬ್‌ಮಿಷನ್‌ಗೆ ಉತ್ತರವಾಗಿ ತುರ್ತು ಕ್ರಮಗಳನ್ನು ನೀರಾವರಿ ಸಚಿವ ಮೋನ್ಸ್ ಜೋಸೆಫ್ ಘೋಷಿಸಿದ್ದಾರೆ. ಲೋಕಬ್ಯಾಂಕ್ ಧನಸಹಾಯ ಯೋಜನೆಯಲ್ಲಿ, ಪ್ರತ್ಯೇಕ ಮಿಷನ್ ಡೈರೆಕ್ಟರೇಟ್‌ನ ವ್ಯಾಪ್ತಿಯಲ್ಲಿ ಸೇರಿಸಿ ಪ್ರತ್ಯೇಕ ಪ್ಯಾಕೇಜ್‌ನೊಂದಿಗೆ ವಿವಿಧ ಯೋಜನೆಗಳನ್ನು ಜ್ಯಾರಿಗೊಳಿಸಲಾಗುವುದೆಂದು ಸಚಿವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಕಣ್ವತೀರ್ಥ, ಮೂಸೋಡಿ, ಉಪ್ಪಳ, ಶಾರದಾನಗರ, ಹನುಮಾನ್‌ನಗರ, ಪೆರಿಂಗಡಿ, ಶಿರಿಯ, …