ಪೈವಳಿಕೆಯಲ್ಲಿ ಬೀದಿನಾಯಿಗಳ ಕಾಟ: ಸ್ಕೂಟರ್‌ನ ಸೀಟು ಹರಿದುಹಾಕಿ ಅಟ್ಟಹಾಸ

ಪೈವಳಿಕೆ: ಪೈವಳಿಕೆ ಪೇಟೆ ಸಹಿತ ಪರಿಸರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಅಟ್ಟಹಾಸದಿಂದ ಸ್ಥಳೀ ಯರು ಭೀತಿಗೊಳಗಾಗಿದ್ದಾರೆ. ಪೇಟೆ ಯಲ್ಲಿ ನಾಯಿಗಳ ಹಿಂಡು ಅಲೆ ದಾಡುತ್ತಿರುವುದು ಪಾದಚಾರಿಗಳಲ್ಲಿ ತೀವ್ರ ಭೀತಿಗೆ ಕಾರಣವಾಗಿದೆ. ಅಲ್ಲದೆ ವಾಹನ ಸವಾರರನ್ನು ಬೆನ್ನಟ್ಟಿ ಆಕ್ರಮಿಸಲು ಮುಂದಾಗು ತ್ತಿರುವುದಾಗಿ ದೂರಲಾಗಿದೆ. ಬುಧವಾರ ರಾತ್ರಿ ಪೈವಳಿಕೆಯ ನಜೀರ್ ಎಂಬವರ ಮನೆಯ ಸಿಟ್‌ಔಟ್‌ನಲ್ಲಿ ನಿಲ್ಲಿಸಲಾದ ಸ್ಕೂಟರ್‌ನ ಸೀಟ್‌ನ್ನು ನಾಯಿಗಳು ಹರಿದು ಹಾಕಿದ ಘಟನೆ ನಡೆದಿದ್ದು, ಈ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಬೀದಿ ನಾಯಿಗಳ ಕಾಟದಿಂದ ನಡೆದಾಡಲು ಸಾಧ್ಯವಾಗದ …

ಕಾಲ್ಚೆಂಡಾಟ ಮಧ್ಯೆ ವಿವಾದ: 11ರ ಬಾಲಕ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕೋಟ್ಟಯಂ: 11ರ ಹರೆಯದ ಬಾಲಕನನ್ನು ಬಾಡಿಗೆ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಈರಾಟ್‌ಪೇಟ ಕಿಡನಾಡ್ ಪೇಟೆಯಲ್ಲಿ ವಾಸಿಸುವ ಸುಭಾಷ್‌ರ ಪುತ್ರ ಆಮೋಸ್ ಮೃತಪಟ್ಟ ಬಾಲಕ. ಕಾಲ್ಚೆಂಡಾಟದ ಮಧ್ಯೆ ಸಹೋದರನೊಂದಿಗೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ.  ನಿನ್ನೆ ಸಂಜೆ ಆಟದ ಮಧ್ಯೆ ತರ್ಕವುಂಟಾಗಿತ್ತು. ಶಾಲೆಯಿಂದ ಬಂದ ಬಳಿಕ ಮೈದಾನದಲ್ಲಿ ಕಾಲ್ಚೆಂಡಾಟ ಆಡುತ್ತಿದ್ದ ಮಧ್ಯೆ ಸಹೋದರನೊಂದಿಗೆ ಜಗಳವುಂಟಾಗಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಾಲಕ ಮನೆಗೆ ಮರಳಿ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ. ಆಮೋಸ್ ತಿಡನಾಡ್ ಸರಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

ಹಿರಿಯ ವ್ಯಾಪಾರಿ ನಿಧನ

ಉಪ್ಪಳ: ಸೋಂಕಾಲು ಕೊಡಂಗೆ ರಸ್ತೆಯ ಬಳಂಕುಡೆ ನಿವಾಸಿ, ಕಾಸರಗೋಡು ವಿವೇಕಾನಂದ ನಗರದಲ್ಲಿ ವಾಸವಾಗಿರುವ ಹಿರಿಯ ವ್ಯಾಪಾರಿ ನಾರಾಯಣ.ಎಂ (78) ನಿಧನ ಹೊಂದಿದರು. ಅಲ್ಪ ಕಾಲದ ಅಸೌಖ್ಯದಿಂದ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತೆ್ಸಯಲ್ಲಿದ್ದರು. ಇವರು ಪ್ರತಾಪನಗರ ಹಾಗೂ ಕೊಡಂಗೆಯಲ್ಲಿ ಹಲವಾರು ವರ್ಷಗಳ ಕಾಲ ದಿನಸಿ ವ್ಯಾಪಾರಿಯಾಗಿದ್ದರು. ಬಿಜೆಪಿ ಹಿರಿಯ ಕಾರ್ಯಕರ್ತರಾಗಿದ್ದ ಇವರು ದಿವಂಗತರಾದ ಅಂಬು ವೈದ್ಯರ್ -ಕಲ್ಯಾಣಿ ಅಮ್ಮ ದಂಪತಿ ಪುತ್ರರಾಗಿದ್ದು, ಪತ್ನಿ ಪ್ರಮೀಳ, ಮಕ್ಕಳಾದ ನಿಶಾ, ನಿಮ್ಮಿ, ಸೌಮ್ಯ, ಅಳಿಯಂದಿರಾದ ಸಜಿತ್, ಸುಜಿತ್, ಸಹೋದರ -ಸಹೋದರಿಯರಾದ ಯಶೋದ, …