ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ಬಳಿ ಹಸಿರು ನಮನೋತ್ಸವಕ್ಕೆ ಚಾಲನೆ

ಪೆರಡಾಲ: ಪೆರಡಾಲ ಶ್ರೀ ಉದ ನೇಶ್ವರ ದೇವಸ್ಥಾನದ ಆವರಣದಲ್ಲಿ ‘ಶ್ರೀ ಉದನೇಶ್ವರ ಹಸಿರು ನಮ ನೋತ್ಸವ’ ಎಂಬ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ದೇವಸ್ಥಾನದ ಆಡಳಿತ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಅಡ್ವ. ವೆಂಕಟ್ರಮಣ ಭಟ್ ಚಂಬಲ್ತಿಮಾರು ಮಾತನಾಡಿ, ದೇವರ ಸೇವೆ ಜೊತೆಗೆ ಪ್ರಕೃತಿ ಸೇವೆ ಮಾಡುವುದು ನಮ್ಮ ಕರ್ತವ್ಯ. ಈ ಹಸಿರು ನಮನೋತ್ಸವ ವನ್ನು ಪ್ರತಿ ವರ್ಷ ಆಚರಿಸಿ, ದೇವರ ಅನುಗ್ರಹಕ್ಕೆ ಪಾತ್ರರಾಗೋಣ ಎಂದು ಕರೆ ನೀಡಿದರು. ಬ್ರಹ್ಮ …

ಕನ್ನಡ ಗ್ರಾಮದಲ್ಲಿ ಕನ್ನಡ ಪತ್ರಿಕೋದ್ಯಮ ದಿನಾಚರಣೆ ನಾಳೆ

ಕಾಸರಗೋಡು: ಕಾಸರಗೋಡು ಜಿಲ್ಲಾ ಫ್ರೀಲ್ಯಾನ್ಸ್ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ, ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ಕನ್ನಡ ಪತ್ರಿಕೋಧ್ಯಮ ದಿನಾಚರಣೆ, ಪತ್ರಿಕಾ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಜಿಲ್ಲೆಯಲ್ಲಿ ಕನ್ನಡ ಪತ್ರಿಕೋಧ್ಯಮ ನಡೆದು ಬಂದ ದಾರಿ- ಉಪನ್ಯಾಸ ನಾಳೆ ಸಂಜೆ ೪ ಗಂಟೆಗೆ ಕನ್ನಡ ಗ್ರಾಮದಲ್ಲಿ ನಡೆಯಲಿದೆ. ಈ ವೇಳೆ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಛಾಯಾಗ್ರಾಹಕ ಶ್ರೀಕಾಂತ್ ಕಾಸರ ಗೋಡರನ್ನು ಅಭಿನಂದಿಸಲಾಗುವುದು. …

ಕಾಸರಗೋಡಿನಲ್ಲಿ ನಾಳೆ ಕನ್ನಡ ಪತ್ರಿಕಾ ದಿನಾಚರಣೆ

ಕಾಸರಗೋಡು: ಕಾಸರಗೋಡು ಕೋಟೆಕಣಿ ರಾಮನಗರದ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ವತಿಯಿಂದ ನಾಳೆ ಕನ್ನಡ ಪತ್ರಿಕಾ ದಿನಾಚರಣೆ ನಡೆಯಲಿದೆ. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಸಂಜೆ 5 ಗಂಟೆಗೆ ನಡೆಯುವ ಈ ಕಾರ್ಯಕ್ರ ಮವನ್ನು ಗೀತಾ ಪ್ರಕಾಶನದ ಸಂಪಾದಕ ಕೆ.ವಿ.ರಮೇಶ್ ಉದ್ಘಾಟಿಸುವರು.  ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯ ತ್ತಡ್ಕ ಅಧ್ಯಕ್ಷತೆ ವಹಿಸುವರು. ಕೆಸಿಎನ್ ಚಾನೆಲ್‌ನ  ನಿರ್ದೇಶಕ ಪುರುಷೋತ್ತಮ ನಾಕ್ ಸಹಿತ ಹಲವರು ಉಪಸ್ಥಿತರಿರುವರು. ಈ ವೇಳೆ  ಕಾಸರಗೋಡು ಹೊಸ ಬಸ್ ನಿಲ್ದಾಣದ …

ಪೈವಳಿಕೆ ತ್ಯಾಜ್ಯ ಸಮಸ್ಯೆ ಡಿಫಿಯಿಂದ ಪಂಚಾಯತ್ ಮಾರ್ಚ್

ಪೈವಳಿಕೆ: ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ರೀತಿ ಕೈಬಿಡಬೇಕೆಂದು ಆಗ್ರಹಿಸಿ ಡಿವೈಎಫ್‌ಐ ಪೈವಳಿಕೆ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಿತು.  ವಿಲೇವಾರಿ ಕೇಂದ್ರದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ ತೆರವುಗೊಳಿಸಬೇಕು ಮೊದಲಾದ ಬೇಡಿಕೆ ಮುಂದಿಟ್ಟು ಡಿಫಿ ಮಂಜೇಶ್ವರ ಬ್ಲೋಕ್ ಸಮಿತಿ ಪಂಚಾಯತ್‌ಗೆ ಪ್ರತಿಭಟನೆ ನಡೆಸಿದೆ. ಕಾಸರಗೋಡು ಜಿಲ್ಲಾಧ್ಯಕ್ಷ ಎಂ.ವಿ. ರತೀಶ್ ಉದ್ಘಾಟಿಸಿದರು. ಉದಯ ಸಿ.ಎಚ್. ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೋಳಿ, ಅಬ್ದುಲ್ ರಜಾಕ್ ಚಿಪ್ಪಾರ್, ಸಾಬಿರ್ ಉಪ್ಪಳ, ಹಾರಿಸ್ ಪೈವಳಿಕೆ, ಮಹೇಶ್ ಕುಮಾರ್, ಅಬ್ದುಲ್ ಆಸೀಫ್, ಝಕರಿಯ …

ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಯುವಕ ಸೆರೆ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಯುವಕನನ್ನು  ಬಂಧಿಸಲಾಗಿದೆ.  ಕಣ್ಣೂರು ಚೇಲೋರ ಕಾಪಿಟ್‌ನ ಕೆ.ಪಿ. ಶಾನಿಶ್ (35) ಎಂಬಾತನನ್ನು ನೀಲೇಶ್ವರ ಎಸ್‌ಐ ಕೆ. ಅಜಿತ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಕಾರಿನಿಂದ 1.8 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್‌ಸ್ಪೆಕ್ಟರ್ ಕೆ. ಮುರಳೀಧರನ್‌ರಿಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರದಲ್ಲಿ ನಡೆಸಿದ ತಪಾಸಣೆ ವೇಳೆ ಯುವಕ ಸೆರೆಗೀಡಾಗಿದ್ದಾನ. ನಿನ್ನೆ ರಾತ್ರಿ 9/40ರ ವೇಳೆ ನೀಲೇಶ್ವರ ಮಾರ್ಕೆಟ್ ಜಂಕ್ಷನ್‌ನಲ್ಲಿ ಪೊಲೀಸರು ಕಾರ್ಯಾಚರಣೆ ನಿರತರಾಗಿದ್ದ ವೇಳೆ ಅಲ್ಲಿಗೆ ಕಾರೊಂದು ತಲುಪಿತ್ತು. ಪೊಲೀಸರನ್ನು …