ಸಿ.ಕೆ. ಚಿಪ್ಪಾರ್ ಅವರ 15ನೇ ವಾರ್ಷಿಕ ಸಂಸ್ಮರಣೆ

ಪೈವಳಿಕೆ: ಸಿಪಿಐ ಹಿರಿಯ ಮುಂದಾಳು ಹಾಗೂ ಜನಪರ ಹೋರಾಟಗಾರ ಸಿ.ಕೆ. ಚಿಪ್ಪಾರ್ ಅವರ 15ನೇ ವಾರ್ಷಿಕ ಸಂಸ್ಮರಣೆ ಇಂದು ಬೆಳಿಗ್ಗೆ ನಡೆಯಿತು. ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿದರು. ಅವರು ಮಾತನಾಡಿ ಸಿ.ಕೆ. ಚಿಪ್ಪಾರ್ ಅವರ ಹೋರಾಟಮಯ ಜೀವನ, ಮಾನವೀಯ ಮೌಲ್ಯಗಳು ಹಾಗೂ ಪಕ್ಷದ ಬೆಳವಣಿಗೆಗೆ ಅವರು ಸಲ್ಲಿಸಿದ ಕೊಡುಗೆಯನ್ನು ಸ್ಮರಿಸಿದರು. ಅವರ ಆದರ್ಶ ಇಂದಿನ ಯುವ ಪೀಳಿಗೆಗೆ ಪ್ರೇರಣೆ ಎಂದು ಅವರು ನುಡಿದರು. ಸಮದ್ ಬಿ.ಎ. ಅಧ್ಯಕ್ಷತೆ ವಹಿಸಿದರು. ಲಾರೆನ್ಸ್ ಡಿಸೋಜ  ಧ್ವಜಾರೋಹಣ …

ಕನ್ನಟಿಕಾನ ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವುಗೊಳಿಸಲು ಆಗ್ರಹ

ಪೆರ್ಲ: ಪೆರ್ಲದಿಂದ ಕನ್ನಟಿಕಾನ- ಸ್ವರ್ಗ ದಾರಿಯಾಗಿ ಪುತ್ತೂರಿಗೆ ತೆರಳುವ ಪೆರ್ಲ-ಸೂರಂಬೈಲು ರಸ್ತೆ ಹೊಂಡಗಳಿಂದ ಕೂಡಿ ಸಮಸ್ಯೆಯಲ್ಲಿರುವ ವೇಳೆ ಈ ರಸ್ತೆಯ ಎರಡೂ ಬದಿಗಳಲ್ಲಿ ಒಣಗಿ ನಿಂತಿರುವ ಮರಗಳು ಇನ್ನಷ್ಟು ಸಂಕಷ್ಟ ತಂದಿರಿಸುತ್ತಿದೆ. ಕನ್ನಟಿಕಾನದಲ್ಲಿ ರಸ್ತೆ ಅಂಚಿಗೆ ಒಣಗಿ ನಿಂತಿರುವ ಮರವೊಂದು ಯಾವುದೇ ಸಮಯದಲ್ಲಿ ತುಂಡಾಗಿ ಬೀಳುವ ಅಪಾಯ ಕಂಡು ಬರುತ್ತಿದೆ. ಶಾಲಾ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಹಲವಾರು ಮಂದಿ ಈ ದಾರಿಯಾಗಿ ಸಂಚರಿಸುತ್ತಿದ್ದು, ಅಲ್ಲದೆ ಬಸ್‌ಗಾಗಿ ಕಾದು ನಿಲ್ಲಲು ಈ ಪ್ರದೇಶವನ್ನೇ ಬಳಸಿಕೊಳ್ಳುತ್ತಿದ್ದಾರೆ. ಅಪಾಯಕಾರಿ ಸ್ಥಿತಿಯಲ್ಲಿರುವ ಮರದ …

ಮಂಜೇಶ್ವರದಲ್ಲಿ ರೆವನ್ಯೂ ಟವರ್, ಜಿಲ್ಲೆಯ ಗ್ರೂಪ್ ವಿಲ್ಲೇಜ್  ಕಚೇರಿಗಳ ಸಮಸ್ಯೆಗಳಿಗೆ ಪರಿಹಾರ ಕಾಣುವುದಾಗಿ ಸಚಿವ ಎ.ಪಿ. ಅನಿಲ್ ಕುಮಾರ್

ಕಾಸರಗೋಡು: ಮಂಜೇಶ್ವರದಲ್ಲಿ ಕಂದಾಯ ಟವರ್ ನಿರ್ಮಿಸುವುದಾಗಿಯೂ, ಜಿಲ್ಲೆಯ ಗ್ರೂಪ್ ವಿಲ್ಲೇಜ್ ಕಚೇರಿಗಳ ಸಮಸ್ಯೆಗಳಿಗೆ ಪರಿಹಾರ ಕಾಣುವುದಾಗಿಯೂ ಇಲಾಖೆ ಸಚಿವ ಎ.ಪಿ. ಅನಿಲ್ ಕುಮಾರ್ ನುಡಿದರು. ಕಲೆಕ್ಟ್ರೇಟ್‌ನ ಮಿನಿ ಕಾನ್ಫರೇನ್ಸ್ ಹಾಲ್‌ನಲ್ಲಿ ನಡೆದ ರಾಜ್ಯ ಕಂದಾಯ ಇಲಾಖೆಯ ಮೊದಲ ಜಿಲ್ಲಾಮಟ್ಟದ ಅವಲೋಕನ ಸಭೆಯಲ್ಲಿ ಸಚಿವರು ಮಾತನಾಡುತ್ತಿದ್ದರು. ಕಂದಾಯ ಇಲಾಖೆಯ ಮುಖವನ್ನಾಗಿ ಕಾಣುವ ವಿಲ್ಲೇಜ್ ಕಚೇರಿಗಳನ್ನು ಜನ ಸೌಹಾರ್ದವನ್ನಾಗಿ ಮಾಡಲಾಗುವುದು. ಮಾದರಿ ಪೊಲೀಸ್ ಠಾಣೆಯಂತೆಯೇ ಪ್ರಾಮುಖ್ಯವಿರುವುದಾಗಿದೆ ಗ್ರಾಮ ಕಚೇರಿಗಳು ಕೂಡಾ ಎಂದು ಅವರು ನುಡಿದರು. ರಾಜ್ಯದಲ್ಲಿ ಭೂಮಿ ಸ್ತರ ವಿಂಗಡಣಗೆ …