ನೆಟ್ಟಣಿಗೆ ಸರಕಾರಿ ಶಾಲೆಗೆ ಆತಂಕ  ಒಡ್ಡುತ್ತಿದ್ದ ಅಪಾಯಕಾರಿ ಮರಗಳ ತೆರವು

ಬೆಳ್ಳೂರು: ನೆಟ್ಟಣಿಗೆ ಸರಕಾರಿ ಶಾಲೆಯ ಬಳಿ ಆತಂಕ ಸೃಷ್ಟಿಸಿದ್ದ ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಯಿತು. ಶಾಲಾ ತರಗತಿ ಕೊಠಡಿಗಳಿಗೆ ಹಾಗೂ ಅಡುಗೆ ಕೋಣೆ ಹತ್ತಿರದಲ್ಲೇ ಇದ್ದ ಒಣಗಿದ ಬೃಹತ್ ಮೂರು ಅಕೇಶಿಯಾ ಮರಗಳನ್ನು ತೆರವುಗೊಳಿಸಲಾಗಿದೆ. ಪಕ್ಕದಲ್ಲೇ ವಿದ್ಯುತ್ ತಂತಿಯೂ ಹಾದುಹೋಗಿದ್ದು, ಯಾವುದೇ ಕ್ಷಣ ಮುರಿದು ಬೀಳುವ ಭೀತಿ ನೆಲೆಗೊಂಡಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಹರ್ಷ ಹಾಗೂ ಪಿಟಿಎ ಜಂಟಿಯಾಗಿ ಪಂಚಾಯತ್‌ಗೆ ಮನವಿ ಸಲ್ಲಿಸಿದ್ದು, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪಂಚಾಯತ್, ವನ ಸಂರಕ್ಷಣಾ ಸಮಿತಿ ಒಳಗೊಂಡ ‘ಟ್ರೀ …

ಇನ್ನೂ ಅಭಿವೃದ್ಧಿಗೊಳ್ಳದ ಮಂಜೇಶ್ವರ ತಾಲೂಕು ಸಪ್ಲೈ ಕಚೇರಿ  ಶಾಸಕರ ನಿರ್ಲಕ್ಷ್ಯವೆಂದು ಒಬಿಸಿ ಮೋರ್ಚಾ ಆರೋಪ

ಮಂಜೇಶ್ವರ: ಮಂಜೇಶ್ವರ ತಾಲೂಕು ಸಪ್ಲೈ ಆಫೀಸ್ ವಿಸ್ತರಣೆ ಮತ್ತು ಅಭಿವೃದ್ಧಿ ವಿಷಯದಲ್ಲಿ ಶಾಸಕರು ನಿರ್ಲಕ್ಷ್ಯ ವಹಿಸುತ್ತಿರುವುದಾಗಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಆರೋಪಿಸಿದ್ದಾರೆ. ತಾಲೂಕಿನ ಸಾವಿರಾರು ಜನರಿಗೆ ಆಸರೆಯಾಗಿರುವ ಈ ಕಚೇರಿಯ ಮೂಲಭೂತ ಸೌಕರ್ಯ ಅಭಿವೃದ್ಧಿ ವಿಷಯದಲ್ಲಿ ಜನಪ್ರತಿನಿಧಿಗಳು ಉದಾಸೀನತೆ ತೋರುತ್ತಿರುವುದಾಗಿ ಅವರು ದೂರಿದ್ದಾರೆ. ಸಪ್ಲೈ ಕಚೇರಿಯಲ್ಲಿ ಕನಿಷ್ಠ ಸೌಕರ್ಯಗಳೂ ಇಲ್ಲದ ಕಾರಣ ಪ್ರತೀ ದಿನ ಇಲ್ಲಿಗೆ ತಲುಪುವ ನೂರಾರು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿಯೂ ಇದೆ. ಕಚೇರಿಯನ್ನು ವಿಸ್ತರಿಸಿ ಜನರಿಗೆ ಸೌಲಭ್ಯ …

ಬಾಯಾರು: ಗುಡ್ಡೆ ಕುಸಿದು ಬಿದ್ದು ಸಂಚಾರಕ್ಕೆ ಅಡಚಣೆ

ಬಾಯಾರು: ಗುಡ್ಡೆ ಕುಸಿದು ಬಿದ್ದು ರಸ್ತೆಯಲ್ಲಿ ಸಂಚಾರ ಮೊಟಕುಗೊಂಡ ಘಟನೆ ನಡೆದಿದೆ. ಪೈವಳಿಕೆ ಪಂಚಾಯತ್‌ನ ೧೦ನೇ ವಾರ್ಡಿನ ಧರ್ಮತ್ತಡ್ಕ-ಕನಿಯಾಲ ಕಂಪದಮೂಲೆ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಪರಿಸರದಲ್ಲಿ ಗುಡ್ಡೆ ಸಹಿತ ಮರಗಳು ಹಾಗೂ ಗದ್ದೆ ಬದಿಯ ಮಣ್ಣು ನಿನ್ನೆ ಮಧ್ಯಾಹ್ನ ಕುಸಿದು ರಸ್ತೆಗೆ ಬಿದ್ದಿದೆ. ಈ ವೇಳೆ ವಾಹನ ಹಾಗೂ ಜನರ ಸಂಚಾರ ಇಲ್ಲದಿದ್ದರಿಂದ ಅಪಾಯ ತಪ್ಪಿದೆ. ರಸ್ತೆಗೆ ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಪಂಚಾಯತ್ ಕಾರ್ಯದರ್ಶಿ, ಪೈವಳಿಕೆ ಪಂಚಾಯತ್ …

ರಸ್ತೆಯಲ್ಲಿ ಕಟ್ಟಿನಿಂತ ನೀರಿನಲ್ಲಿ ಕಪ್ಪೆಗಳ ವಾಸ: ತಿನ್ನಲು ಬರುವ  ಹಾವುಗಳಿಂದ ಕೃಷ್ಣ ನಗರದ ಪರಿಸರ ನಿವಾಸಿಗಳಿಗೆ ನಡೆದಾಡಲು ಭೀತಿ

ಮಂಗಲ್ಪಾಡಿ: ಮಂಗಲ್ಪಾಡಿ ಪಂಚಾಯತ್‌ನ ಕೃಷ್ಣ ನಗರ ಬಳಿ ರಸ್ತೆಯಲ್ಲಿ ನೀರು ಕಟ್ಟಿ ನಿಂತು ಸಂಚಾರ ಸಮಸ್ಯೆ ಎದುರಾಗಿದೆ. ನಯಾ ಬಜಾರ್-ಚೆರುಗೋಳಿ ರಸ್ತೆಯಿಂದ ಕೃಷ್ಣನಗರ ಭಾಗಕ್ಕೆ ತೆರಳುವ ಕಾಂಕ್ರೀಟ್ ರಸ್ತೆಯಲ್ಲಿ ನೀರು ಕುಟ್ಟಿ ನಿಲ್ಲುತ್ತಿದ್ದು, ಈ ಭಾಗದ ಜನರ ಸಂಚಾರಕ್ಕೆ ಸಮಸ್ಯೆಯಾಗಿದೆ. ನೀರು ಕಟ್ಟಿ ನಿಲ್ಲುವ ಕಾರಣ ಇಲ್ಲಿ ಕಪ್ಪೆಗಳು, ಸೊಳ್ಳೆಗಳು ಹೆಚ್ಚಿದ್ದು, ಜೊತೆಗೆ ಕಪ್ಪೆಗಳನ್ನು ತಿನ್ನಲೆಂದು ವಿವಿಧ ಜಾತಿಯ ಹಾವುಗಳು ಇಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ ಈ ದಾರಿಯಾಗಿ ಸಾಗಿದ ಓರ್ವರಿಗೆ ದೊಡ್ಡ ದೊಂದು ಕನ್ನಡಿ ಹಾವು ಕಂಡುಬಂದಿದೆ. …

ಮೊಗ್ರಾಲ್‌ಪುತ್ತೂರು ನಿವಾಸಿ ಮುಂಬೈಯಲ್ಲಿ ಕುಸಿದುಬಿದ್ದು ಮೃತ್ಯು

ಕುಂಬಳೆ: ಮೊಗ್ರಾಲ್ ಪುತ್ತೂರು ಕೋಟಕ್ಕುನ್ನು ದೇಶಾಂಕುಳದ ಅಬ್ದುಲ್ ಗಫೂರ್ (54) ಮುಂಬೈಯ ವಾಸಸ್ಥಳದಲ್ಲಿ ಕುಸಿದುಬಿದ್ದು ಮೃತಪಟ್ಟರು. ನಿನ್ನೆ ಮುಂಜಾನೆ ಕುಸಿದುಬಿದ್ದ ಇವರನ್ನು ಮುಂಬೈ-ಕೇರಳ ಮುಸ್ಲಿಂ ಜಮಾಅತ್ ಪದಾಧಿಕಾರಿಗಳ ನೇತೃತ್ವದಲ್ಲಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಹಲವು ವರ್ಷಗಳ ಕಾಲ ಅನಿವಾಸಿ ಯಾಗಿದ್ದ ಅಬ್ದುಲ್ ಗಫೂರ್ ಎರಡು ವರ್ಷಗಳಿಂದ ಮುಂಬೈ ಕೇಂದ್ರೀಕರಿಸಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲದೆ  ಸಾಮಾಜಿಕ ಚಟುವಟಿಕೆಗಳಲ್ಲೂ ನಿರತನಾಗಿದ್ದರು. ಮೃತದೇಹವನ್ನು ಇಂದು ಅಪರಾಹ್ನ ೩ ಗಂಟೆ ವೇಳೆ ಊರಿಗೆ ತಲುಪಿಸಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ. ಮೃತರು ಪತ್ನಿ ತಾಹರ, …