ದೇರಂಬಳ ಹೊಳೆಗೆ ಬಿದ್ದ ಯುವತಿಯ ಪ್ರಾಣ ರಕ್ಷಿಸಿದ ಯುವಕ: ಹೊಳೆಗೆ ಸಂಕ ಬೇಡಿಕೆಗೆ ಸ್ಪಂದಿಸದ ಅಧಿಕಾರಿಗಳು
ಉಪ್ಪಳ: ಅಡಿಕೆ ಮರದ ಸಂಕದ ಮೇಲೆ ನಡೆದುಹೋಗುತ್ತಿದ್ದಾಗ ಆಯತಪ್ಪಿ ಹೊಳೆಗೆ ಬಿದ್ದ ಯುವತಿಯನ್ನು ಯುವಕನೋರ್ವ ಅತೀ ಸಾಹಸದಿಂದ ರಕ್ಷಿಸಿದ ಘಟನೆ ನಡೆದಿದೆ. ಮೀಂಜ ಬಳಿಯ ದೇರಂಬಳದಲ್ಲಿ ನಿನ್ನೆ ಸಂಜೆ ಸುಮಾರು 4 ಗಂಟೆ ವೇಳೆ ಈ ಘಟನೆ ನಡೆದಿದೆ. ದೇರಂಬಳ ತಜಂಕುರಿಯ ಐತಪ್ಪ ಪೂಜಾರಿಯವರ ಪುತ್ರಿ ಸುಶ್ಮಿತಾ (23) ಹೊಳೆಗೆ ಬಿದ್ದಿದ್ದು, ಈಕೆಯನ್ನು ಸ್ಥಳೀಯ ನಿವಾಸಿ ಉದಯಕುಮಾರ್ ಶೆಟ್ಟಿ (40) ಎಂಬವರು ಅತೀ ಸಾಹಸದಿಂದ ರಕ್ಷಿಸಿದ್ದಾರೆ. ಪುತ್ತೂರಿನ ಕಾಲೇಜಿನಲ್ಲಿ ಕಲಿಯುತ್ತಿರುವ ಸಹೋದರಿ ನಿಶ್ಮಿತಾಳನ್ನು ಜೋಡುಕಲ್ಲಿನಿಂದ ಕರೆದುಕೊಂಡು ಮನೆಗೆ …
Read more “ದೇರಂಬಳ ಹೊಳೆಗೆ ಬಿದ್ದ ಯುವತಿಯ ಪ್ರಾಣ ರಕ್ಷಿಸಿದ ಯುವಕ: ಹೊಳೆಗೆ ಸಂಕ ಬೇಡಿಕೆಗೆ ಸ್ಪಂದಿಸದ ಅಧಿಕಾರಿಗಳು”