ಸಮಗ್ರ 2026: 100 ದಿನ ಕ್ರಿಯಾ ಯೋಜನೆ  ಮುಖ್ಯಮಂತ್ರಿಯಿಂದ ಉದ್ಘಾಟನೆ ನಾಳೆ

ತಿರುವನಂತಪುರ: ರಾಜ್ಯ ಸರಕಾರದ 100 ದಿನ ಕ್ರಿಯಾ ಯೋಜನೆಯಾದ ಸಮಗ್ರ 2026 ಮುಖ್ಯಮಂತ್ರಿ ವಿ.ಡಿ. ಸತೀಶನ್ ನಾಳೆ ಉದ್ಘಾಟಿಸುವರು. 15,೦೦೦ ಫಲಾನುಭವಿಗಳಿಗೆ 100 ಕೋಟಿ ರೂ.ಗೂ ಮಿಕ್ಕಿದ ಸಾಲ ಇದೇ ವೇಳೆ ಮುಖ್ಯಮಂತ್ರಿ ವಿತರಿಸುವರು ಎಂದು ಸಚಿವೆ ಕೆ.ಎ. ತುಳಸಿ ತಿಳಿಸಿದ್ದಾರೆ. ರಾಜ್ಯ ಸರಕಾರದ 100 ದಿನ ಕ್ರಿಯಾ ಯೋಜನೆಯಂಗವಾಗಿ ರಾಜ್ಯ ಹಿಂದುಳಿದ ವಿಭಾಗ ಅಭಿವೃದ್ಧಿ ಕಾರ್ಪೊರೇಷನ್ ಜ್ಯಾರಿಗೊಳಿಸುವ ಕಾರ್ಯಕ್ರಮದ, ವಿವಿಧ ಕ್ಷೇಮ ಯೋಜನೆಗಳ ರಾಜ್ಯ ಮಟ್ಟದ ಉದ್ಘಾಟನೆ ಕೂಡಾ ನಾಳೆ ಕೊಚ್ಚಿಯಲ್ಲಿ ನಡೆಯಲಿದೆ. ಪಳ್ಳುರುತ್ತಿ ಎಸ್.ಎನ್. …

ಕುಂಞಿರಾಮ ಬೆಳ್ಚಪ್ಪಾಡ ನಿಧನ

ಬದಿಯಡ್ಕ: ಪಳ್ಳತ್ತಡ್ಕ ಕೋರಿ ಕ್ಕಾರು ನಿವಾಸಿ ಕುಂಞಿರಾಮ ಬೆಳ್ಚಪ್ಪಾಡ (72) ನಿಧನ ಹೊಂದಿದರು. ಮೃತರು ಪತ್ನಿ ಯಶೋಧ, ಮಕ್ಕಳಾದ ಸತೀಶ, ಸುಜಾತ, ಧನ್ಯ, ಸೊಸೆ ಶಶಿಕಲ, ಅಳಿಯಂದಿರಾದ ಪೀತಾಂಭರನ್, ಸಂತು, ಸಹೋದರಿಯ ರಾದ ಶಾರದ, ಗಿರಿಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬೇಕರಿ ಮಾಲಕ ನಿಧನ

ಕಾಸರಗೋಡು: ನಗರದ ಟಾಪ್ಸ್ ಬೇಕರಿ ಮಾಲಕ ಅಣಂಗೂರು ಪಚ್ಚಕ್ಕಾಡ್ ನಿವಾಸಿ ವಿನಯರಾಜ್ (63) ನಿಧನ ಹೊಂದಿದರು. ದಿ| ಅಚ್ಯುತನ್- ಚಂದ್ರವಲ್ಲಿ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಜಯಶ್ರೀ, ಮಕ್ಕಳಾದ ಷೋಣಿಮ, ಮೋನಿಶ್, ಅಳಿಯ ರೋಶಿತ್ ರಾಜನ್, ಸಹೋದರ ಶಮ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ದೇರಂಬಳ ಕಾಲು ಸೇತುವೆ ಕುಸಿದು ವರ್ಷ ಹಲವು ಕಳೆದರೂ ನಿರ್ಮಾಣಕ್ಕೆ  ಕ್ರಮವಿಲ್ಲ: ಅಧಿಕಾರಿಗಳು ಕಣ್ಣು ತೆರೆಯದಿದ್ದರೆ ಅಪಾಯ ಸಾಧ್ಯತೆ ಇನ್ನೂ ಇದೆ

ಉಪ್ಪಳ: ದೇರಂಬಳದಲ್ಲಿ ಸೇತುವೆ ಕುಸಿದು ಬಿದ್ದು ಹಲವು ವರ್ಷ ಕಳೆದರೂ ಮರು ನಿರ್ಮಿಸದಿರುವುದರಿಂದ ಊರವರ ಸಂಚಾರಕ್ಕೆ ಸಮಸ್ಯೆಯಾಗಿದೆ. ತಾತ್ಕಾಲಿಕವಾಗಿ ಊರವರು ನಿರ್ಮಿಸಿದ ಕಂಗಿನ ಸೇತುವೆಯಿಂದ ಸಂಚಾರ ಭೀತಿಗೆ ಕಾರಣವಾಗುತ್ತಿದೆ. ಮೀಂಜ ಹಾಗೂ ಮಂಗಲ್ಪಾಡಿ ಪಂಚಾಯತ್ ಸಂಗಮಿಸುವ ದೇರಂಬಳದಲ್ಲಿ ೨೦೦೩ರಲ್ಲಿ ಜಿಲ್ಲಾ ಪಂಚಾಯತ್‌ನಿAದ ಕಾಲು ಸೇತುವೆಯನ್ನು ನಿರ್ಮಿಸಲಾಗಿತ್ತು. ಇದು ಹಲವು ವರ್ಷಗಳ ಹಿಂದೆ ಮಳೆಗಾಲದ ಸಂದರ್ಭದಲ್ಲಿ ಕುಸಿದು ಬಿದ್ದಿದೆ. ಈ ವೇಳೆ ಜನರ ಸಂಚಾರ ಇಲ್ಲದಿರುವುದರಿಂದ ಭಾರೀ ದುರಂತ ತಪ್ಪಿಹೋಗಿರುವುದಾಗಿ ಸ್ಥಳಿಯರು ತಿಳಿಸಿದ್ದಾರೆ. ಸಂಕ ಮರು ನಿರ್ಮಾಣಕ್ಕೆ ಒತ್ತಾಯಿಸಿದ್ದರೂ …

ದೇರಂಬಳ ಸೇತುವೆ ಕೂಡಲೇ ಪುನರ್ ನಿರ್ಮಿಸಬೇಕು- ಎಂ.ಎಲ್. ಅಶ್ವಿನಿ

ಉಪ್ಪಳ: ಮಂಗಲ್ಪಾಡಿ- ಮೀಂಜ ಪಂಚಾ ಯತ್‌ಗಳನ್ನು ಜೋಡಿಸುವ ದೇರಂಬಳ ಕಾಂಕ್ರೀಟ್ ಸೇತುವೆ ಹಾನಿಗೊಂಡು ಹಲವು ವರ್ಷಗಳು ಕಳೆದರೂ ಪುನರ್ ನಿರ್ಮಾಣ ಕ್ರಮಗಳು ಆರಂಭಿಸದಿರುವುದು ಜನರೊಂದಿಗಿನ ತೀವ್ರ ಅನೀತಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಮೀಂಜ ಪಂಚಾಯತ್‌ನಿಂದ ವಿದ್ಯಾರ್ಥಿಗಳು ಸಹಿತ ನೂರಾರು ಮಂದಿ ದಿನಂಪ್ರತಿ ಈ ಸೇತುವೆಯ ಮೂಲಕ ಪ್ರಯಾಣಿ ಸುತ್ತಿದ್ದಾರೆ. ಸೇತುವೆ ಕುಸಿದು ಬಿದ್ದ ಕಾರಣ ಕೇವಲ ೬೦೦ ಮೀಟರ್ ದೂರದ ಬಸ್ ತಂಗುದಾಣಕ್ಕೆ ತಲುಪಲು ಕೂಡಾ ಕಿಲೋ ಮೀಟರ್‌ಗಳಷ್ಟು ಸುತ್ತುಬಳಸಿ ಹೋಗಬೇಕಾದ ಸ್ಥಿತಿ …