ಜಿಲ್ಲಾ ಪಂಚಾಯತ್ ಸದಸ್ಯನ ಹೆಸರು ಶಾಲಾ ಶಿಲಾಫಲಕದಿಂದ ಅಳಿಸಿದ ಪ್ರಕರಣ: ಅಂಗಡಿಮೊಗರುನಲ್ಲಿ ವಿಶಿಷ್ಟ ವಿದ್ಯಮಾನ

ಪುತ್ತಿಗೆ: ಜಿಲ್ಲಾ ಪಂಚಾಯತ್ ಸದಸ್ಯನ ಹೆಸರನ್ನು ಸರಕಾರಿ ಕಾರ್ಯಕ್ರಮದ ಶಿಲಾಫಲಕದಿಂದ ಅಳಿಸಲಾಗಿದೆ ಎಂದು ದೂರಲಾಗಿದೆ. ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಕಟ್ಟಡ ಉದ್ಘಾಟನೆ ಶಿಲಾಫಲಕದಿಂದ ಜಿಲ್ಲಾ ಪಂಚಾ ಯತ್ ಸದಸ್ಯ ಹಾಗೂ ಡಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಸೋಮಶೇಖರ ಜೆ.ಎಸ್.ರ ಹೆಸರನ್ನು ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಅಳಿಸಿ ಹಾಕಲಾಗಿದೆ. ಫಲಕದಲ್ಲಿನ ಇನ್ಯಾ ರದೇ ಹೆಸರಿಗೆ ಯಾವುದೇ ಹಾನಿ ಉಂಟಾಗದಂತೆ ಸೋಮಶೇಖರರ ಹೆಸರನ್ನು ಉಜ್ಜಲಾಗಿದೆ. ಕಾಸರ ಗೋಡು ಪ್ಯಾಕೇಜ್‌ನಲ್ಲಿ ಒಳಪಡಿಸಿ ಸರಕಾರದ ನಿಧಿ ಉಪಯೋಗಿಸಿ ನಿರ್ಮಿ ಸಿದ ಕಟ್ಟಡದ …

ಕಾರ್ಲೆ ತರವಾಡು ಮನೆ ಹಿರಿಯ ನಿಧನ

ಮುಳ್ಳೇರಿಯ: ಕಾರ್ಲೆ ತರವಾಡು ಮನೆ ಹಿರಿಯರಾದ ಯಜ್ಞೇಶ್ವರ ಪೂಜಾರಿ (79) ನಿಧನ ಹೊಂದಿದರು. ಕಳೆದ ಕೆಲವು ಸಮಯಗಳಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಸೀತ, ಮಕ್ಕಳಾದ ಶಿವರಂಜನ್, ಮುರಳೀಧರ, ಅನಿತ, ಮಮತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪ್ರಧಾನಿ ಮೋದಿ, ತಾಯಿಯನ್ನು ಅವಹೇಳನಗೈದ ಜಾನ್ ಮಣಿದಾಸ್ ವಿರುದ್ಧ ವಿವಿಧ ಕಡೆಗಳಲ್ಲಿ ಖಂಡನೆ, ದೂರು ದಾಖಲು

ಕುಂಬಳೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನಿಧನ ಹೊಂದಿದ ಅವರ ತಾಯಿಯ ಬಗ್ಗೆ ಅವಮಾನಕರ ವಾದ ರೀತಿಯಲ್ಲಿ ಅವಹೇಳನಗೈದ ಜಾನ್ ಮಣಿದಾಸ್ ವಿರುದ್ಧ ಕೇಸು ದಾಖಲಿಸಬೇಕೆಂದು ಬಿಜೆಪಿ ಕುಂಬಳೆ ಮಂಡಲ ಸಮಿತಿ ಕುಂಬಳೆ ಪೊಲೀ ಸರಲ್ಲಿ ಆಗ್ರಹಿಸಿದೆ. ಮಂಡಲ ಅಧ್ಯಕ್ಷ ವಿಕ್ರಮ್ ಪೈ, ರಾಜ್ಯ ಮುಖಂಡರಾದ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಕೆ.ಪಿ. ವಲ್ಸರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಮುಜುಂ ಗಾವು, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್, ಮಹಿಳಾ …