ಕನ್ನೆಪ್ಪಾಡಿಯಲ್ಲಿ ಫ್ರೆಂಡ್ಸ್  ಆಟೋಸ್ಟಾಂಡ್ ನಾಮಫಲಕ ಅನಾವರಣ

ಬದಿಯಡ್ಕ: ಪಂಚಾಯತ್‌ನ ಕನ್ನೆಪ್ಪಾಡಿಯಲ್ಲಿ ಫ್ರೆಂಡ್ಸ್ ಆಟೋ ಸ್ಟಾಂಡ್‌ನ ಉದ್ಘಾಟನೆ ಜರಗಿತು. ಪಂ. ಅಧ್ಯಕ್ಷ ಶಂಕರ ಡಿ. ನಾಮಫಲಕ ಅನಾವರಣಗೊಳಿಸಿ ಮಾತನಾಡುತ್ತಾ ನಾಡಿನ ಸುಸ್ಥಿತಿಯನ್ನು ಕಾಯುವಲ್ಲಿ ಕನ್ನೆಪ್ಪಾಡಿಯ ಆಟೋಚಾಲಕರು ಮಾದರಿಯಾಗಿದ್ದಾರೆ. ಪಂ. ಹಾಗೂ ಸಾರಿಗೆ ಇಲಾಖೆಯ ಆದೇಶಗಳನ್ನು ಯಥಾವತ್ತಾಗಿ ಪಾಲಿಸಿ ಚಾಲಕರು ನಾಡಿನ ಜನತೆಯ ಸೇವೆಯನ್ನು ಮಾಡುವುದರೊಂದಿಗೆ ಸಮಾಜಮುಖಿಯಾಗಿ ಕಾರ್ಯಪ್ರವೃತ್ತರಾಗಬೇಕು ಎಂದರು. ಸದಸ್ಯ ಗಂಗಾಧರ ಗೋಳಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಬ್ಲೋಕ್ ಪಂ.ಸದಸ್ಯ ಮಹೇಶ್ ವಳಕ್ಕುಂಜ, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, …

ಸಿಪಿಸಿಆರ್‌ಐ ಆವರಣ ಗೋಡೆ ಸಮುದ್ರ ಪಾಲು  ಕೃಷಿ ಭೂಮಿ ನೀರು ಪಾಲಾಗುವ ಭೀತಿ

  ಕಾಸರಗೋಡು: ಕಡಲ್ಕೊ ರೆತಕ್ಕೆ ಸಿಪಿಸಿಆರ್‌ಐಯ ತೋಟ ಅಪಾಯಕ್ಕೆ ಸಿಲುಕಿದೆ. ಕಾಸರ ಗೋಡು ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆಯ ಕಡಲತೀರದ ತೋಟ ಸುಮಾರು 1 ಕಿಲೋ ಮೀಟರ್ ಉದ್ದಕ್ಕೆ ಸಮುದ್ರ ತೀರ ಸಮೀಪ ವಿದ್ದು, ಇಲ್ಲಿ ಈಗ ಸುಮಾರು 8೦ ಮೀಟರ್ ಉದ್ದದ ಆವರಣಗೋಡೆ ಸಮುದ್ರ ಪಾಲಾಗಿದೆ. ಇನ್ನು 3೦ ಮೀಟರ್ ಉದ್ದದ ಆವರಣಗೋಡೆ  ಕುಸಿತದ ಅಂಚಿನಲ್ಲಿದೆ. ಈ ಹಿಂದೆ ಸಂಸ್ಥೆಯ ಗಡಿಯ ಹೊರಭಾಗದಲ್ಲಿ ಸಮೀಪದ ಗ್ರಾಮವನ್ನು ಸಂಪರ್ಕಿಸುವ ಡಾಮರು ರಸ್ತೆಯಿದ್ದು, ಸಮುದ್ರವು ಗಡಿಯಿಂದ ಸುಮಾರು …

ಜೇಮ್ಸ್ ಡಿಸೋಜ ನಿಧನ

ಪೆರ್ಲ: ಇಲ್ಲಿಗೆ ಸಮೀಪದ ಬೊಲ್ಕಿನಡ್ಕ ನಿವಾಸಿ ಜೇಮ್ಸ್ ಡಿಸೋಜ (72) ನಿನ್ನೆ ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕೃಷಿಕರಾಗಿದ್ದ ಇವರು ಮಣಿಯಂಪಾರೆ ಸಂತ ಲಾರೆನ್ಸ್‌ರ ಇಗರ್ಜಿ ನಿರ್ಮಾಣ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿ ಪದಾಧಿಕಾರಿಯಾಗಿ ಕಾರ್ಯನಿರ್ವ ಹಿಸಿದ್ದರು. ಮೃತರು ಪತ್ನಿ ಲೂಸಿ ಡಿಸೋಜ, ಮಕ್ಕಳಾದ ಸಂತೋಷ್ ಡಿಸೋಜ, ದಯಾಕಿಶೋರ್, ಸಚಿನ್, ಸೋಫಿಯ, ಸೊಸೆಯಂದಿರಾದ ಝೀನಪ್ರಿಯ, ವಿನಯ ಡಿಸೋಜ, ಅಶ್ವಿನಿ ಡಿಸೋಜ, ಸಹೋದರ ಥೋಮಸ್ ಡಿಸೋಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹೊಸಂಗಡಿಯಲ್ಲಿ ಆಟೋ ಚಾಲಕರ ನಿಲ್ದಾಣ ಶಾಸಕರಿಂದ ಉದ್ಘಾಟನೆ

ಮಂಜೇಶ್ವರ: ಹೊಸಂಗಡಿಯಲ್ಲಿ ರಿಕ್ಷಾ ಚಾಲಕರು ಮತ್ತು ಮಾಲಕರು ಸುಮಾರು ೪.೫೦ ಲಕ್ಷ ವೆಚ್ಚ ಮಾಡಿ ನಿರ್ಮಿಸಿದ ಆಟೋ ಫ್ರೆಂಡ್ಸ್ ಹೊಸಂ ಗಡಿ ಎಂಬ ಹೆಸರಿನ ಆಟೋರಿಕ್ಷಾ ನಿಲ್ದಾಣವನ್ನು ನಿನ್ನೆ ಉದ್ಘಾಟಿಸಲಾ ಯಿತು. ಹೊಸಂಗಡಿ ಪೇಟೆಯ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಲಾ ಗಿರುವ ಈ ನಿಲ್ದಾಣವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಶುಭ ಹಾರೈಸಿದರು. ಹಿರಿಯ ಆಟೋ ಚಾಲಕ ಶ್ರೀಧರ ಬಿ.ಎಂ. ಅಧ್ಯಕ್ಷತೆ ವಹಿಸಿದರು. ಇದೇ ವೇಳೆ ಹಿರಿಯ ಆಟೋ ಚಾಲಕರನ್ನು ಅಭಿನಂದಿಸಲಾ …