ಪತ್ನಿ, ಅತ್ತೆಯ ದೇಹಕ್ಕೆ ಪೆಟ್ರೋಲ್ ಸುರಿದು ಕಿಚ್ಚಿರಿಸಿದಾಗ ಸುಟ್ಟು ಗಾಯಗೊಂಡ ಯುವಕ ಮೃತ್ಯು

ಕಾಸರಗೋಡು: ವಿವಾಹ ವಿಚ್ಛೇದನ ಪ್ರಕರಣ ದಾಖಲಿಸಿದ ದ್ವೇಷದಿಂದ ಪತ್ನಿ ಹಾಗೂ ಅತ್ತೆಯ ದೇಹದ ಮೇಲೆ ಪೆಟ್ರೋಲ್ ಸುರಿದು ಕಿಚ್ಚಿರಿಸುವ ವೇಳೆ ಅಕಸ್ಮಾತ್ ಬೆಂಕಿ ತಗಲಿ  ಗಂಭೀರ ಸುಟ್ಟು ಗಾಯ ಗೊಂಡ ಯುವಕ ಸಾವಿಗೀಡಾದ ಘಟನೆ ನಡೆದಿದೆ. ಕರಿವೆಳ್ಳೂರು ಕೊಳುಮ್ಮಲ್ ವರಿಕ್ಕರ ನಿವಾಸಿಯಾದ ಆಟೋ ರಿಕ್ಷಾ ಚಾಲಕ ಸಿ.ವಿ.ಸನಲ್ ಕುಮಾರ್ (46) ಸಾವನ್ನಪ್ಪಿದ ವ್ಯಕ್ತಿ.  ಸನಲ್ ಕುಮಾರ್ ಮತ್ತು ಪತ್ನಿ ಪ್ರಜೀಶರ  ದಾಂಪತ್ಯ ಜೀವನದಲ್ಲಿ  ಬಿರುಕುಂಟಾಗಿತ್ತೆನ್ನಲಾಗಿದೆ. ಇದರಿಂದ ಪತ್ನಿ ವಿವಾಹ ವಿಚ್ಛೇದನ ಪ್ರಕರಣ ದಾಖಲಿಸಿದ್ದರು. ಈ ದ್ವೇಷದಿಂದ ಕಳೆದ  …

ಇಡುಕ್ಕಿಯಲ್ಲಿ ಮತ್ತೊಂದು ಭಯಾನಕ ಘಟನೆ: ತಲೆಗೆ ಹೊಡೆದು ತಾಯಿಯ ಕೊಂದ ಪುತ್ರ

ಇಡುಕ್ಕಿ: ತೊಡುಪುಳದಲ್ಲಿ ಪುತ್ರ ತಾಯಿಯನ್ನು ತಲೆಗೆ ಹೊಡೆದು ಕೊಲೆಗೈದ ಘಟನೆ ನಡೆದಿದೆ. ಇಡವೆಟ್ಟಿ ಮೈಲಾಟುಂಪಾರ ವಳಪ್ ನಿವಾಸಿ ರೈಚಲ್ ಜೋಸೆಫ್ ಕೊಲೆಗೀಡಾದ ಮಹಿಳೆ. ಘಟನೆಯಲ್ಲಿ ಪುತ್ರ ಲಿಜೊನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಇತ್ತೀಚೆಗೆ ಎಳುಕ್ಕುಂವಯಲ್‌ನಲ್ಲಿ ಹೆತ್ತವರನ್ನು ಪುತ್ರ ಕೊಲೆಗೈದ ಘಟನೆಯ ಆತಂಕ ಮಾಸುವ ಮೊದಲೇ ಜಿಲ್ಲೆಯಲ್ಲಿ ಮತ್ತೊಂದು ದಾರುಣ ಕೊಲೆ ಸಂಭವಿಸಿದೆ. ನಿನ್ನೆ ಸಂಜೆ ೩ ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಎರ್ನಾಕುಳಂನಲ್ಲಿ ಹೋಂ ನರ್ಸ್ ಆಗಿ ಕೆಲಸ ಮಾಡುವ ರೈಚಲ್ ಜೋಸೆಫ್ ಕಳೆದ ಶುಕ್ರವಾರ …

ಮಂಗಲ್ಪಾಡಿಯಲ್ಲಿ ಕೃಷಿಕರ ದಿನಾಚರಣೆ 24 ಹಿರಿಯ ಕೃಷಿಕರಿಗೆ ಸನ್ಮಾನ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ಆಡಳಿತ ಸಮಿತಿ ಮತ್ತು ಮಂಗಲ್ಪಾಡಿ ಕೃಷಿ ಭವನದ ವತಿಯಿಂದ ಕೃಷಿಕರ ದಿನಾಚರಿಸಲಾಯಿತು. ಮಂಗಲ್ಪಾಡಿಯ ಅತ್ಯುತ್ತಮ 24 ಕೃಷಿಕರನ್ನು ಸನ್ಮಾನಿಸಲಾಯಿತು. ಉಪ್ಪಳ ಪೇಟೆಯಿಂದ ಪ್ರಾರಂಭವಾದ ವರ್ಣರಂಜಿತ ಮೆರವಣಿಗೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾ ಯಿತು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್‌ಮಾನ್ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲಾ ತಂಙಳ್ ಮುಖ್ಯ ಅತಿಥಿಯಾಗಿದ್ದರು. ಕೃಷಿ ಅಧಿಕಾರಿ ಅರುಣ್ ಪ್ರಸಾದ್ ಕೆ.ಎಂ ಸ್ವಾಗತಿಸಿದರು.ಹಿರಿಯ ಕೃಷಿಕ ಬಿ. ಸುಫಲಾ …

ಹಬ್ಬದ ಹಿನ್ನೆಲೆ: ಜಿಲ್ಲೆಯಲ್ಲಿ ಹೆಚ್ಚು ರೈಲು ಸೇವೆಗಳು, ನಿಲುಗಡೆಗಳಿಗೆ ಕ್ರಮ- ಬಿಜೆಪಿ

ಕಾಸರಗೋಡು: ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಜಿಲ್ಲೆಯಲ್ಲಿ ಹಬ್ಬದ ಸಂದರ್ಭಗಳಲ್ಲಿ ಹೆಚ್ಚಿನ ಪ್ಯಾಸೆಂಜರ್, ಮೆಮು ರೈಲು ಸೇವೆಗಳನ್ನು ಒದಗಿಸಲು ಹಾಗೂ ಪ್ರಸ್ತುತ ಸಂಚರಿಸುತ್ತಿರುವ ವಿವಿಧ ರೈಲುಗಳಿಗೆ ತುರ್ತಾಗಿ ತಾತ್ಕಾಲಿಕ ನಿಲುಗಡೆಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಓಣಂ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಮುಂತಾದ ಹಬ್ಬಗಳ ಅಂಗವಾಗಿ ಮುಂಬರುವ ಒಂದು ತಿಂಗಳ ಅವಧಿಯಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದ್ದು, ಇದನ್ನು ಪರಿಗಣಿಸಿ ವಿವಿಧ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ನೀಡುವಂತೆ ಒತ್ತಾಯಿಸಲಾಗುವುದು …

ಕೆಟ್ಟುಹೋದ ಹೈಮಾಸ್ಟ್ ದೀಪ :ಕತ್ತಲಾವರಿಸಿ ಬಾಯಾರುಪದವುನಲ್ಲಿ ಸಮಸ್ಯೆ

ಪೈವಳಿಕೆ: ಬಾಯಾರುಪದವು ಜಂಕ್ಷನ್‌ನಲ್ಲಿ ಹೈಮಾಸ್ಟ್ ದೀಪ ಕೆಟ್ಟು ಹೋಗಿ ಹಲವಾರು ತಿಂಗಳು ಕಳೆದರೂ ದುರಸ್ತಿಗೆ ಕ್ರಮಕೈಗೊಳ್ಳದಿರುವುದು ಸ್ಥಳೀಯರಿಗೆ ಸಮಸ್ಯೆಯಾಗಿದೆ. ಈ ಪ್ರದೇಶದಲ್ಲಿ ಎರಡು ಬ್ಯಾಂಕ್‌ಗಳು, ಹಲವು ಅಂಗಡಿಗಳು , ಆಟೋ ನಿಲ್ದಾಣಗಳು ಕಾರ್ಯಾಚರಿಸುತ್ತಿದ್ದು, ಜನನಿಬಿಡ ಪ್ರದೇಶವಾಗಿದೆ. ಈ ಪೇಟೆಯಲ್ಲಿ ರಾತ್ರಿ ೭ ಗಂಟೆಯ ನಂತರ ಸಂಪೂರ್ಣ ಕತ್ತಲು ಆವರಿಸಿ ಕೊಳ್ಳುತ್ತಿದೆ. ಲಕ್ಷಾಂತರ ಹಣ ವ್ಯವಯಿಸಿ ನಿರ್ಮಿಸಿದ ಈ ಬೀದಿ ದೀಪ ಈಗ ಉಪಯೋಗಶೂನ್ಯವಾಗಿದೆ. ಇಲ್ಲಿ ಬೀದಿ ದೀಪವಿಲ್ಲದೆ ನಾಗರಿಕರಿಗೆ, ಹಾಗು ವ್ಯಾಪಾರಿಗಳಿಗೆ ಅತೀವ ತೊಂದರೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. …

ರೈಲ್ವೇ ನಿಲ್ದಾಣದಲ್ಲಿ ಮರೆತುಹೋದ ಹಣ ಒಳಗೊಂಡ ಬ್ಯಾಗ್ ಪ್ರಯಾಣಿಕೆಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಶುಚೀಕರಣ ಸಿಬ್ಬಂದಿ

ಕಾಸರಗೋಡು: ರೈಲ್ವೇ ನಿಲ್ದಾಣದಲ್ಲಿ ಮರೆತುಹೋದ  ೬೩ ಸಾವಿರ ರೂಪಾಯಿಗಳಿದ್ದ ಬ್ಯಾಗನ್ನು ಮುಖ್ಯೋಪಾಧ್ಯಾಯಿನಿಗೆ ಮರಳಿ ತಲುಪಿಸಿ ರೈಲ್ವೇ ಶುಚೀಕರಣ ಸಿಬ್ಬಂದಿ ಸಜಿನಿ ಎಂಬವರು ಪ್ರಾಮಾಣಿಕತೆ ಮೆರೆದಿದ್ದಾರೆ. ತಳಂಗರೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋ ಪಾಧ್ಯಾಯಿನಿ ಬಿಂದು ಈ ತಿಂಗಳ ೧೫ರಂದು ಬೆಳಿಗ್ಗೆ 11 ಗಂಟೆಗೆ ಕಾಸರಗೋಡು ರೈಲು ನಿಲ್ದಾಣದಿಂದ ರೈಲಿನಲ್ಲಿ ಪ್ರಯಾಣಿಸಿದ್ದರು.  ಅನಂತರವೇ ಅವರಿಗೆ ಹಣವಿದ್ದ ಬ್ಯಾಗ್ ರೈಲ್ವೇ ನಿಲ್ದಾಣದಲ್ಲಿ ಮರೆತು ಹೋಗಿರುವುದು ನೆನಪಾಗಿದೆ. ಇನ್ನು ಆ ಬ್ಯಾಗ್ ಮರಳಿ ಲಭಿಸಲಾರದೇ  ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. …

ಪ್ರೇಮ ಭಂಡಾರಿ ನಿಧನ

ಮಂಜೇಶ್ವರ: ಪಾವೂರು ಕೋಡಿ ದಿ| ಬಿರ್ಮಣ ಭಂಡಾರಿ ಅವರ ಪತ್ನಿ, ಕಾಸರಗೋಡು ಅಂಚೆ ಕಚೇರಿಯ ನಿವೃತ್ತ ಉದ್ಯೋಗಿ ಪ್ರೇª೧ÀÄ ಭಂಡಾರಿ (70) ನಿಧನ ಹೊಂದಿದರು. ಮೃತರು ಮಕ್ಕಳಾದ ಹರಿಕಿರಣ್, ಶಿವಪ್ರಸಾದ್, ಪ್ರಕಾಶ್ ಅಲ್ಲದೆ ಸೊಸೆಯಂದಿರು, ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮುಹಮ್ಮದ್ ಎಂ.ಎಸ್ ನಿಧನ

ಮಂಜೇಶ್ವರ: ವರ್ಕಾಡಿ ಸುಂಕದ ಕಟ್ಟೆ ನಿವಾಸಿ ಮುಹಮ್ಮದ್ ಎಂ.ಎಸ್ (85) ನಿಧನ ಹೊಂದಿದರು. ಮೃತರು ಪತ್ನಿ, ಐಸಮ್ಮ, ಮಕ್ಕಳಾದ ಸಿದ್ದಿಕ್ (ಮಂಜೇಶ್ವರ ತಾಲೂಕು ಕಚೇರಿ ಉದ್ಯೋಗಿ), ಇಬ್ರಾಹಿಂ, ಅಬ್ದುಲ್ ಖಾದರ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಹೃದಯಾಘಾತ: ನಿಧನ

ಬದಿಯಡ್ಕ: ಉಂಡೆಮನೆ ದಿ| ಸತ್ಯಶಂಕರ ಭಟ್‌ರ ಪತ್ನಿ ಯು. ರತ್ನಾವತಿ (59) ನಿಧನ ಹೊಂದಿದರು. ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಇವರು ಬಿಜೆಪಿ ಅಭ್ಯರ್ಥಿಯಾಗಿ ಪಂಚಾಯತ್‌ಗೆ ಸ್ಪರ್ಧಿಸಿದ್ದರು. ಮೃತರು ಮಕ್ಕಳಾದ ಲಕ್ಷ್ಮೀ, ಶಂಕರ ತೇಜಸ್ವಿ, ನವನೀತಕೃಷ್ಣ, ಅಳಿಯ ಶ್ರೀನಿಧಿ ರಾವ್, ಸೊಸೆಯಂದಿರಾದ ರಕ್ಷಿತ, ಸೀಮಾ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

ನೆಲ್ಕಳದ ಲಲಿತ ನಿಧನ

ಕಾಸರಗೋಡು: ವಿದ್ಯಾನಗರ ಬಳಿಯ ಉದಯಗಿರಿ ನೆಲ್ಕಳ ನಿವಾಸಿ ದಿ| ರಾಮನ್ ಕೆ.ಎನ್. ಎಂಬವರ ಪತ್ನಿ ಲಲಿತ (9೦) ಇಂದು ಮುಂಜಾನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ವಿಜಯನ್ ಕೆ.ಎನ್, ಬೇಬಿ ಕೆ.ಎನ್, ವೇಣು ಕೆ.ಎನ್, ರಾಜೇಂ ದ್ರನ್ ಕೆ.ಎನ್, ಅಳಿಯ ಸೊಸೆಯಂದಿ ರಾದ ಕುಂಞಿಕಣ್ಣನ್, ಪ್ರಮೀಳ, ಬೇಬಿ, ರೇವತಿ, ರೇಶ್ಮಾ, ಶ್ರೀವಿದ್ಯಾ, ಸಹೋದ ರರಾದ ಜಯಕರನ್, ರವಿ, ಸಹೋದರಿ ಪ್ರೇಮ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.  ಇನ್ನಿಬ್ಬರು ಮಕ್ಕಳಾದ ಮಹೇಶ್, ಜಯಪ್ರಕಾಶ್, ಅಳಿಯ ಬಾಬು, ಸಹೋದರರಾದ …