ವಿದ್ಯಾನಗರ ಕೈಗಾರಿಕಾ ಪ್ರಾಂಗಣದ ಶೋಚನೀಯಾವಸ್ಥೆ ಪರಿಹರಿಸಲು ಕೆಎಸ್‌ಎಸ್‌ಐಎಯಿಂದ ಸಚಿವರಿಗೆ ಮನವಿ

ಕಾಸರಗೋಡು: ಮೂಲಭೂತ ಸೌಕರ್ಯಗಳ ಕೊರತೆಯಿಂದ ಉಸಿರು ಕಟ್ಟುವಂತಹ ವಿದ್ಯಾನಗರ ಸಿಡ್ಕೋ ಕೈಗಾರಿಕಾ ಪ್ರಾಂಗಣದ ಶೋಚನೀಯಾವಸ್ಥೆಯನ್ನು ತುರ್ತಾಗಿ ಪರಿಹರಿಸಬೇಕೆಂದು ಆಗ್ರಹಿಸಿ ಕೆಎಸ್‌ಎಸ್‌ಐಎ ಕಾಸರಗೋಡು ಜಿಲ್ಲಾ ಸಮಿತಿ ಕೈಗಾರಿಕಾ-ಐಟಿ ಸಚಿವ ಪಿ.ಕೆ. ಕುಂಞಾಲಿಕುಟ್ಟಿ, ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಎಂಬಿವರಿಗೆ ಮನವಿ ಸಲ್ಲಿಸಿದೆ. ಸಿಡ್ಕೋ ಇಂಡಸ್ಟ್ರೀಯಲ್ ಎಸ್ಟೇಟ್ ಇಂಡಸ್ಟ್ರೀಯಲ್ ಫಾರಂ ಪದಾಧಿಕಾರಿ ಗಳು ಕಾಸರಗೋಡಿಗೆ ತಲುಪಿದ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಹೊಂಡಗಳೆದ್ದು ಶೋಚನೀ ಯಾವಸ್ಥೆಯಲ್ಲಿರುವ ರಸ್ತೆಗಳು, ವಿದ್ಯುತ್, ಇತರ ಮೂಲಭೂತ ಸೌಕರ್ಯ ಅಭಿವೃದ್ಧಿ, ಸೇಲ್ ಡೀಡ್ ನೀಡುವುದರಲ್ಲಿನ ತಾಂತ್ರಿಕ …

ಪ್ರೈವೆಟ್ ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಸಮ್ಮೇಳನ ನಾಳೆ

ಕಾಸರಗೋಡು: ಕೇರಳ ಸ್ಟೇಟ್ ಪ್ರೈವೆಟ್ ಬಸ್ ಆಪರೇಟರ್ಸ್ ಫೆಡರೇಶನ್‌ನ ಜಿಲ್ಲಾ ಸಮ್ಮೇಳನ ನಾಳೆ ಹೊಸದುರ್ಗದ ಮುನ್ಸಿಪಲ್ ಮಿನಿ ಕಾನ್ಫರೆನ್ಸ್ ಹಾಲ್‌ನಲ್ಲಿ  ನಡೆಯಲಿದೆ. ಫೆಡರೇಶನ್‌ನ  ಜಿಲ್ಲಾಧ್ಯಕ್ಷ ಕೆ. ಗಿರೀಶ್‌ರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾವೇಶವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸು ವರು. ಹೊಸದುರ್ಗ ನಗರಸಭಾ ಅಧ್ಯಕ್ಷ ವಿ.ವಿ. ರಮೇಶನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಫೆಡರೇಶನ್‌ನ ರಾಜ್ಯಾಧ್ಯಕ್ಷ ಕೆ.ಕೆ. ಥೋಮಸ್ ಪ್ರಧಾನ ಭಾಷಣಗಾರ ರಾಗಿರುವರೆಂದು ಈ ಪ್ರಯುಕ್ತ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಫೆಡರೇಶನ್‌ನ ಜಿಲ್ಲಾಧ್ಯಕ್ಷ ಕೆ. ಗಿರೀಶ್, ಕಾರ್ಯದರ್ಶಿ …

ಕೆಜೆಎಂ ರಸ್ತೆ ಪುನರುದ್ಧಾರಕ್ಕೆ ಶಾಸಕರ  ನಿಧಿಯಿಂದ 97 ಲಕ್ಷ ರೂ. ಮಂಜೂರು

ಮಂಜೇಶ್ವರ: ಶೋಚನೀಯ ಸ್ಥಿತಿಯಲ್ಲಿದ್ದ ಕೆಜೆಎಂ ರಸ್ತೆಯ ಪುನರುದ್ಧಾರ ಕಾಮಗಾರಿಗೆ ಶಾಸಕರ ನಿಧಿಯಿಂದ 97 ಲಕ್ಷ ರೂ. ಮಂಜೂರು ಮಾಡಲಾಗಿದೆ. ಸ್ಥಳೀಯರ ಬಹುಕಾಲದ ಬೇಡಿಕೆಗೆ ಪರಿಹಾರ ಉಂಟಾಗಿದೆ. ರಸ್ತೆಯ ಕಾಮಗಾರಿ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನೆರವೇರಿಸಿದರು. ಈ ವೇಳೆ ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಸೈಫುಲ್ಲ ತಂಙಳ್, ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ, ಉಪಾಧ್ಯಕ್ಷೆ ಫಾತಿಮತ್ ಸುಹ್ರ, ಬ್ಲೋಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹನೀಫ್ ಅಣ್ಣಿ, ಸದಸ್ಯ ಮುಕ್ತಾರ್, ಇಲ್ಯಾಸ್ ತೂಮಿನಾಡು, ಹಾಮಿದ್ ತಂಙಳ್, ಹಮೀದ್ …

ಪೈವಳಿಕೆಯಲ್ಲಿ ಹುತಾತ್ಮ ಸಹೋದರರ ಸಂಸ್ಮರಣೆ

ಪೈವಳಿಕೆ: ಭೂಮಾಲಿಕರ ದಬ್ಬಾಳಿಕೆ ವಿರುದ್ಧ ಹೋರಾಡಿ ಜೀವ ಕಳೆದು ಕೊಂಡ ಪೈವಳಿಕೆ ನಿವಾಸಿಗಳಾದ ಸುಂದರ ಶೆಟ್ಟಿ, ಮಹಾಬಲ ಶೆಟ್ಟಿ, ಚೆನ್ನಪ್ಪ ಶೆಟ್ಟಿ ಸಹೋದರರ ಹುತಾತ್ಮ ಸಂಸ್ಮರಣೆ ವಾರ್ಷಿಕ ಕಾರ್ಯಕ್ರಮವನ್ನು ಪೈವಳಿಕೆಯಲ್ಲಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಕೆ. ಅನಿಲ್ ಕುಮಾರ್ ಉದ್ಘಾಟಿಸಿದರು. ೬೮ನೇ ಹುತಾತ್ಮ ದಿನಾಚರಣೆ ಅಂಗವಾಗಿ ಪೈವಳಿಕೆ ಪೇಟೆಯಲ್ಲಿ ಮೆರವಣಿಗೆ, ಸಂಸ್ಮರಣೆ ಸಮ್ಮೇಳನ ನಡೆಸಲಾಯಿತು. ಏರಿಯಾ ಕಾರ್ಯದರ್ಶಿ ಸಿಜಿ ಮ್ಯಾಥ್ಯು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸೆಕ್ರಟರಿ ಯೇಟ್ ಸದಸ್ಯ ಕೆ.ಆರ್. ಜಯಾನಂದ, ಜಿಲ್ಲಾ ಸಮಿತಿ …

ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ ತಲಪಾಡಿಗೆ ಸ್ಥಳಾಂತರಿಸಲು ಸಿದ್ಧತೆ

ಮಂಜೇಶ್ವರ: ಹೊಸಂಗಡಿ ಬಳಿಯ ವಾಮಂಜೂರಿನಲ್ಲಿ ಕಾರ್ಯಾಚರಿಸುತ್ತಿರುವ ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ನ್ನು ತಲಪಾಡಿಗೆ ಸ್ಥಳಾಂತರಿಸಲು ಸಿದ್ದತೆ ನಡೆಸಲಾಗು ತ್ತಿದೆ. ಹಲವಾರು ವರ್ಷಗಳಿಂದ ವಾಮಂಜೂರಿನಲ್ಲಿ ಚೆಕ್‌ಪೋಸ್ಟ್ ಕಚೇರಿ ಕಂಟೈನರ್‌ನಲ್ಲಿ ಕಾರ್ಯಾ ಚರಿಸುತ್ತಿದೆ. ಆದರೆ ಕಚೇರಿಗೆ ಸ್ವಂತ ಕಟ್ಟಡ, ಶೌಚಾಲಯ, ವಾಸಮಾಡಲು ವ್ಯವಸ್ಥೆ ಇಲ್ಲದೆ ಉದ್ಯೋಗಸ್ಥರು ಸಂಕಷ್ಟಕ್ಕೀಡಾಗಿದ್ದಾರೆ. ಈ ಪರಿಸರದ ಬಾಡಿಗೆ ಕ್ವಾರ್ಟರ್ಸ್ನಲ್ಲಿ ಉದ್ಯೋಗಸ್ಥರು ವಾಸವಾಗಿದ್ದಾರೆ. ಹೆದ್ದಾರಿ ಅಭಿವೃದ್ಧಿಗೊಂಡ ಬಳಿಕ ವಾಸ ಸ್ಥಳಕ್ಕೆ ಹೊಸಂಗಡಿ ಮೂಲಕ ಒಂದು ಕಿಲೋ ಮೀಟರ್ ಸುತ್ತು ವರಿದು ತೆರಳಬೇಕಾಗುತ್ತಿದೆ. ವಾಹನ ತಪಾಸಣೆ ಹೆದ್ದಾರಿಯಲ್ಲಿಯೇ ನಡೆಸಬೇಕಾಗುತ್ತಿದ್ದು ಹೆದ್ದಾರಿ …