ಕೊಂಡೆವೂರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ಕೃಷ್ಣ ವೇಷ ಸ್ಪರ್ಧೆ

ಉಪ್ಪಳ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ನಡೆದ ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ಮಕ್ಕಳು ಕೃಷ್ಣನ ವಿವಿಧ ವೇಷ ದsರಿಸಿ ಗಮನ ಸೆಳೆದರು. ಶಾಲೆಯ ವಿದ್ಯಾರ್ಥಿಗಳಿಗೆ ಮುದ್ದು ಕೃಷ್ಣ, ಬಾಲ ಕೃಷ್ಣ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಸಚಿವ ಅಬ್ದುಲ್ ಗಫೂರ್ ಸೆ. 8ರಂದು ಜಿಲ್ಲೆಯಲ್ಲಿ

ಕಾಸರಗೋಡು: ಸಾಮಾಜಿಕ ನ್ಯಾಯ-ಮೀನುಗಾರಿಕಾ ಖಾತೆ ಸಚಿವ ವಿ.ಇ. ಅಬ್ದುಲ್ ಗಫೂರ್ ಸೆ.8ರಂದು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಅಂದು ಬೆಳಿಗ್ಗೆ 1೦ ಗಂಟೆಗೆ ಹಾರ್ಬರ್ ಇಂಜಿನಿಯರಿಂಗ್ ಎಕ್ಸಿಕ್ಯೂಟೀವ್ ಇಂಜಿನಿಯರ್ ಕಚೇರಿಯಲ್ಲಿ ನಡೆಯುವ ಅವಲೋಕನಾ ಸಭೆಯಲ್ಲಿ ಸಚಿವರು ಭಾಗವಹಿಸುವರು. ಮಧ್ಯಾಹ್ನ 12ಕ್ಕೆ ಕಾಸರಗೋಡು ಕಸಬಾ ಕಡಪ್ಪುರದ ಫಿಶರೀಸ್ ಎಕ್ಸ್‌ಟೆನ್ಶನಲ್ ಸಭಾಂಗಣ ದಲ್ಲಿ ‘ಮಿಗವ್’ ಯೋಜನೆಯ ಅಂಗವಾಗಿ ನಡೆಯುವ  ಸಮಾರಂಭದಲ್ಲಿ ಅತ್ಯಧಿಕ ಅಂಕ ಗಳಿಸಿ ಉತ್ತೀರ್ಣರಾದ ಮೀನುಗಾರರ ಮಕ್ಕಳಿಗೆ ಜಿಲ್ಲೆಯ ಶಿಕ್ಷಣ ಪುರಸ್ಕಾರ ವಿತರಣೆ ನೆರವೇರಿಸುವರು. ಸಂಜೆ 3 ಗಂಟೆಗೆ …

ಜನರಲ್ ಆಸ್ಪತ್ರೆಯ ಫ್ರೀಜರ್ ದುರಸ್ತಿ ನಡೆಸಿ  ಮಾದರಿಯಾದ ಬಿಜೆಪಿ ಕೌನ್ಸಿಲರ್‌ಗಳು

ಕಾಸರಗೋಡು: ಹಲವು ದಿನಗಳಿಂದ ಕೆಟ್ಟು ಹೋಗಿದ್ದ ಕಾಸರಗೋಡು ಜನರಲ್ ಆಸ್ಪತ್ರೆಯ ಫ್ರೀಜರ್‌ನ್ನು ಬಿಜೆಪಿ ನಗರಸಭಾ ಕೌನ್ಸಿಲರ್‌ಗಳಾದ ದಿವ್ಯ ಸಂದೀಪ್ ಹಾಗೂ ರಾಜೇಶ್ ಅಮೈ ದುರಸ್ತಿ ನಡೆಸಿ ಮಾದರಿಯಾಗಿದ್ದಾರೆ.  ಫ್ರೀಜರ್ ಕೆಟ್ಟುಹೋಗಿರುವುದರ ಪರಿಣಾಮ ರೋಗಿಗಳು ಭಾರೀ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಿತ್ತು.  ಫ್ರೀಜರ್ ದುರಸ್ತಿಗೊ ಳಿಸಲು  ಅಧಿಕಾರಿಗಳ ಭಾಗದಿಂದ ಯಾವುದೇ ಕ್ರಮ ಉಂಟಾಗಿಲ್ಲವೆಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ತಜ್ಞರಾದ ಮೆಕ್ಯಾನಿಕ್‌ಗಳನ್ನು ಆಸ್ಪತ್ರೆಗೆ ಕರೆತಂದು ಫ್ರೀಜರ್ ದುರಸ್ತಿಗೊಳಿಸ ಲಾಯಿತು. ಜನರ ಸಮಸ್ಯೆಯನ್ನು ಮನಗಂಡು ಅದರ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಂಡ ಬಿಜೆಪಿ …

ಕೇಳುಗುಡ್ಡೆಯ ಹರೀಂದ್ರನಾಥ್ ನಿಧನ

ಕಾಸರಗೋಡು: ಕೇಳುಗುಡ್ಡೆ ನಿವಾಸಿ ಎ.ವಿ. ಹರೀಂದ್ರನಾಥ್ (66) ನಿನ್ನೆ ನಿಧನಹೊಂದಿದರು. ದಿವಂಗತರಾದ ಉಪೇಂದ್ರನಾಥ್-ಗೋದಾವರಿ ದಂಪತಿಯ ಪುತ್ರನಾದ ಮೃತರು ಪತ್ನಿ ವಸಂತಿ, ಮಕ್ಕಳಾದ ಕೃಷ್ಣಪ್ರಸಾದ್, ಶಿವಪ್ರಸಾದ್, ಚೈತ್ರ, ಅಳಿಯ ಶಿವಪ್ರಸಾದ್, ಸೊಸೆಯಂದಿರಾದ ಪೂರ್ಣಿಮ, ನವ್ಯಶ್ರೀ, ಸಹೋದರ-ಸಹೋದರಿಯರಾದ ರಾಜೇಂದ್ರ ಕುಮಾರ್, ಜಗದೀಶ್, ಸರೋಜ, ವಿಜಯಲಕ್ಷ್ಮಿ, ಆಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಸಹೋದರಿ ಸಬಿತ ಈ ಹಿಂದೆ ನಿಧನರಾಗಿದ್ದಾರೆ.

ಕೈಕಂಬ- ಬಾಯಾರು ರಸ್ತೆಯಲ್ಲಿ ಅವ್ಯವಸ್ಥೆಯ ಹಲವು ಹಂಪ್‌ಗಳು ಸಂಚಾರ ಸಮಸ್ಯೆ ಬಗ್ಗೆ ಸ್ಥಳೀಯರಿಂದ ಪ್ರತಿಭಟನೆಗೆ ಸಿದ್ಧತೆ

ಉಪ್ಪಳ: ಲೋಕೋಪಯೋಗಿ ಇಲಾಖೆಯ ಕೈಕಂಬ-ಬಾಯಾರು ರಸ್ತೆಯಲ್ಲಿ ಹಲವಾರು ಹಂಪ್‌ಗಳಿದ್ದು, ಇದನ್ನು ಅವ್ಯವಸ್ಥೆ ರೀತಿಯಲ್ಲಿ ನಿರ್ಮಿಸಿದ ಕಾರಣ ಬಸ್ ಸಹಿತ ವಾಹನಗಳ ಬಿಡಿಭಾಗಗಳು ಹಾನಿಗೀಡಾಗುತ್ತಿರುವುದಾಗಿ ಮಾಲಕರು, ಸವಾರರು ದೂರಿದ್ದಾರೆ. ಅಲ್ಲದೆ ಅಪಘಾತಕ್ಕೂ ಕಾರಣವಾಗುತ್ತಿದೆ. ಇದನ್ನು ತೆರವುಗೊಳಿಸಲು ಒತ್ತಾಯಿಸಿ ಜನಪರ ಒಕ್ಕೂಟ ಬಾಯಾರು ಇದರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮೂಲಕ ಮನವಿ ನೀಡಲು ಸಿದ್ದತೆ ನಡೆಸುತ್ತಿದ್ದಾರೆ. ಈ ಹಿಂದೆ ಬಸ್ ಯೂನಿಯನ್ ವತಿಯಿಂದ ಶಾಸಕರಿಗೆ, ಲೋಕೋಪಯೋಗಿ ಇಲಾಖೆಗೆ ಮನವಿ ನೀಡಿದ್ದರು. ಆದರೆ ಇದುವರೆಗೂ ಹಂಪ್ ತೆರವುಗೊಳಿಸಲು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಬಸ್ …