ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳವು: ಬದಿಯಡ್ಕ ನಿವಾಸಿ ಸೆರೆ

ಕಾಸರಗೋಡು: ಪುತ್ತೂರು ಬಳಿಯ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳವುಗೈದ ಪ್ರಕರಣದಲ್ಲಿ ಬದಿಯಡ್ಕ ನಿವಾಸಿಯನ್ನು ಪುತ್ತೂರು ರೂರಲ್ ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕದ ಕೆ. ಸತೀಶ್ (31) ಸೆರೆಯಾದ ವ್ಯಕ್ತಿ. ಆಗಸ್ಟ್ ೨೫ರಂದು ಬೆಳಿಗ್ಗೆ ಕ್ಷೇತ್ರದ ಹೊರಗೆ ಇರಿಸಲಾಗಿದ್ದ ಕಾಣಿಕೆ ಡಬ್ಬಿ ನಾಪತ್ತೆ ಯಾಗಿತ್ತು. ಕ್ಷೇತ್ರದ ನೌಕರರ ಗಮನಕ್ಕೆ ಇದು ಬಂದಿದ್ದು, ಆ ಬಳಿಕ ನಡೆಸಿದ ಹುಡುಕಾಟದಲ್ಲಿ ಕಾಣಿಕೆ ಡಬ್ಬಿಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ದೇವಸ್ಥಾನದ ಅಧಿಕಾರಿಗಳು ಸಿಸಿ ಟಿವಿ ದೃಶಗಳನ್ನು ಪರಿಶೀಲಿಸಿದಾಗ 24ರಂದು ರಾತ್ರಿ ಅಪರಿಚಿತ …

ಉಮಾನಾಥ ಪೂಜಾರಿ ನಿಧನ 

 ಕುಡಾಲುಮೇರ್ಕಳ: ಮುದೆಲ್ತಡ್ಕ ನಿವಾಸಿ ಉಮಾನಾಥ ಪೂಜಾರಿ (77) ಕರ್ನಾಟಕ ಕೊಲ್ಯದ ಪುತ್ರನ ಮನೆಯಲ್ಲಿ ನಿಧನ ಹೊಂದಿದರು. ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ. ಮಂಡೆಕಾಪು ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷರಾಗಿದ್ದು, ಸಿಪಿಎಂ ಮಂಡೆಕಾಪು ಬ್ರಾಂಚ್ ಸಮಿತಿ ಸದಸ್ಯನಾಗಿದ್ದರು. ಮೃತರು ಪತ್ನಿ ನಾಗಮ್ಮ, ಮಕ್ಕಳಾದ ಶ್ವೇತ, ಸ್ಮಿತ, ಗಣೇಶ್ ಪ್ರಸಾದ್, ಸಹೋದರ- ಸಹೋದರಿಯರು, ಅಳಿಯ, ಸೊಸೆ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಸುಗುಣ ತಂತ್ರಿ ನಿಧನ

ಬದಿಯಡ್ಕ: ದಿ| ದೇಲಂಪಾಡಿ  ಬಾಲಕೃಷ್ಣ ತಂತ್ರಿಯವರ ಪತ್ನಿ ಸುಗುಣ ತಂತ್ರಿ (75) ನಿಧನ ಹೊಂದಿದರು. ವಯೋಸಹಜ ಅಸೌಖ್ಯದಿಂದಿದ್ದ ದ.ಕ. ಜಿಲ್ಲೆಯ ರಾಮಕುಂಜದ ಇರ್ಕುಮಠದಲ್ಲಿರುವ ತವರು ಮನೆಯಲ್ಲಿ ನಿಧನ ಸಂಭವಿಸಿದೆ. ಇವರಿಗೆ ಮಕ್ಕಳಿಲ್ಲ. ಧಾರ್ಮಿಕ, ಸಾಂಸ್ಕೃತಿಕ, ಸಂಗೀತಾಸಕ್ತರಾಗಿದ್ದ ಇವರು ಅನೇಕ ದೇವಸ್ಥಾನಗಳಲ್ಲಿ ಧಾರ್ಮಿಕ ಪ್ರವಚನ, ಸಂಗೀತ ಕಛೇರಿ ನೀಡಿದ್ದರು.