ಹೊಸಂಗಡಿ ಬಳಿ ಕರ್ನಾಟಕ ನಿವಾಸಿ ಕಾರ್ಮಿಕನ ಕೊಲೆ: ಸ್ಥಳದಿಂದ ನಾಪತ್ತೆಯಾದ ವ್ಯಕ್ತಿಗಾಗಿ ಶೋಧ

ಮಂಜೇಶ್ವರ: ಹೊಸಂಗಡಿ ಬಳಿಯ ಅಂಗಡಿಪದವಿನಲ್ಲಿ ಕರ್ನಾಟಕ ನಿವಾಸಿಯಾದ ಯುವಕ ನಿಗೂಢರೀತಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರ. ಕರ್ನಾಟಕದ ಹೊಸಪೇಟೆ ಲಿಂಗನಾಯಕನಹಳ್ಳಿ ನಿವಾಸಿ ದಿ| ಪಿರಾ ನಾಯ್ಕ್‌ರ ಪುತ್ರ ರಮೇಶ (38) ಕೊಲೆಗೀಡಾದ ವ್ಯಕ್ತಿ.  ಅಂಗಡಿಪದವಿನಲ್ಲಿರುವ ಹಳೆಯ ಎರಡಂತಸ್ತಿನ ಮನೆಯೊಳಗೆ ನಿನ್ನೆ ರಾತ್ರಿ 7 ಗಂಟೆ ವೇಳೆ ರಮೇಶ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಈ ಮನೆಯಲ್ಲಿ ಬಾಡಿಗೆಗೆ ವಾಸಿಸುವ  ಕೃಷ್ಣಪ್ಪ ಎಂಬವರು ಮೃತದೇಹವನ್ನು ಮೊದಲು ಕಂಡಿದ್ದಾರೆ.  ಬಳಿಕ ಈ ವಿಷಯವನ್ನು  ಮನೆಯ ಮಾಲಕನಾದ ನರಸಿಂಹ ಮೂರ್ತಿಗೆ  ತಿಳಿಸಲಾಯಿತು. ಅವರು ಮನೆಗೆ …

ವೃದ್ಧೆ ಏಕಾಂಗಿಯಾಗಿ ವಾಸಿಸುವ ಮನೆಯಿಂದ 5 ಪವನ್ ಚಿನ್ನ, 50 ಸಾವಿರ ರೂ. ಕಳವು

ಪೆರ್ಲ:  ವೃದ್ಧೆಯೊಬ್ಬರು ಏಕಾಂಗಿಯಾಗಿ  ವಾಸಿಸುವ ಮನೆಯ ಬಾಗಿಲು ಮುರಿದು  ಒಳನುಗ್ಗಿದ ಕಳ್ಳರು 2 ಪವನ್ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ದೋಚಿದ್ದಾರೆ.  ಏಳ್ಕಾನ ಬಳಿಯ ಬಾಳೆಗುಳಿ ನಿವಾಸಿ  ಪಾರ್ವತಿ (73) ಎಂಬವರ ಮನೆಯಿಂದ ಕಳವು ನಡೆದಿದೆ. ಮೊನ್ನೆ ರಾತ್ರಿ ಕಳವು ನಡೆದಿದ್ದು ನಿನ್ನೆ ಬೆಳಿಗ್ಗೆ ಈ ಬಗ್ಗೆ ತಿಳಿದುಬಂದಿದೆ. ಪಾರ್ವತಿಯವರ ಪುತ್ರಿ ನೀಲೇಶ್ವರದಲ್ಲಿ ವೈದ್ಯೆಯಾಗಿದ್ದಾರೆ. ಆದ್ದರಿಂದ ಮನೆಯಲ್ಲಿ ಬೇರೆ ಯಾರೂ ಇಲ್ಲದುದರಿಂದ  ಪಾರ್ವತಿ ಪ್ರತಿದಿನ ಸಂಜೆ ಸಮೀಪದಲ್ಲಿರುವ ತರವಾಡು ಮನೆಗೆ ತೆರಳಿ ಮರುದಿನ ಬೆಳಿಗ್ಗೆ ಸ್ವಂತ …

ನಿಂತಿದ್ದ ಲಾರಿಗೆ ಕಾರು ಢಿಕ್ಕಿ: ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಎಂಟು ಮಂದಿ ಮೃತ್ಯು

ತೃಶೂರು: ರಸ್ತೆ ಬದಿ ನಿಲ್ಲಿಸಿದ್ದ ಸರಕು ಲಾರಿಯ ಹಿಂಬದಿಗೆ ಕಾರು ಢಿಕ್ಕಿ ಹೊಡೆದು  ತಮಿಳುನಾಡಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಎಂಟು ಮಂದಿ ಸಾವನ್ನಪ್ಪಿದ ದಾರುಣ ಘಟನೆ ನಿನ್ನೆ ತಡರಾತ್ರಿ ತೃಶೂರು ಕೈಪಮಂಗಲ ಪನಂಬಕುನ್ನು ಸೆಂಟರ್ ಬಳಿ ನಡೆದಿದೆ. ತಮಿಳುನಾಡು ದಿಂಡಿಗಲ್‌ನ ಪಿ.ಎಸ್.ಎನ್.ಎ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಸೇಲಂನ ವಿಶ್ವ (21), ದಿಂಡಿಗಲ್‌ನ ಸೂರ್ಯ (20), ಮಧುರೈ ನಿವಾಸಿಗಳಾದ ಸಂತೋಷ್ (20), ಪ್ರಸನ್ನ (20), ದಿಂಡಿಗಲ್ ನಿವಾಸಿಗಳಾದ ಯುವಂಜಿತ್ (20), ಜೋಷ್ವ (20) ಎಂಬವರು ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು. ದುರಂತದಲ್ಲಿ …

ಖ್ಯಾತ ನ್ಯಾಯವಾದಿ ಸುಧೀರ್ ಮೇಲತ್‌ ನಿಧನ

ಕಾಸರಗೋಡು: ಕಾಸರಗೋಡು ಬಾರ್‌ನ ಖ್ಯಾತ ನ್ಯಾಯವಾದಿ ಮಾಲಕಲ್ ಸುಧೀರ್ ಮೇಲತ್ (56) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ರಾತ್ರಿ ಎರ್ನಾಕುಳಂ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಹೆಚ್ಚುವರಿ ಸರಕಾರಿ ಪ್ಲೀಡರ್, ಪಬ್ಲಿಕ್ ಪ್ರೋಸಿಕ್ಯೂಟರ್ ಆಗಿದ್ದರು. ವಿದ್ಯಾನಗರ ಲಯನ್ಸ್‌ಕ್ಲಬ್‌ನ ಸ್ಥಾಪಕ ಕಾರ್ಯದರ್ಶಿ, ಮಾಜಿ ಅಧ್ಯಕ್ಷನಾಗಿದ್ದರು. ಕೇರಳ ಕಾಂಗ್ರೆಸ್ (ಎಂ) ಜಿಲ್ಲಾ ಕಾರ್ಯದರ್ಶಿಯಾಗಿಯೂ ದುಡಿದಿದ್ದರು. ಮೃತರು ಪತ್ನಿ ರಮ್ಯ, ಮಕ್ಕಳಾದ ನಿಹಾಲ್, ಅಂಕಿತ್, ಸಹೋದರಿ ಯರಾದ ಲಲಿತ ಮೇಲತ್, ಪ್ರೀತಿ ಮೇಲತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕೇರಳ ಪೊಲೀಸ್ ರಾಜ್ಯ ಮಟ್ಟದ ಅಥ್ಲೆಟಿಕ್ ಧೀವಟಿಕೆ ಪ್ರಯಾಣ ಆರಂಭ

ಕಾಸರಗೋಡು: ಕೇರಳ ಪೊಲೀಸ್ ಇಲಾಖೆಯ ರಾಜ್ಯ ಮಟ್ಟದ ಅಥ್ಲೆಟಿಕ್ ಆಂಡ್ ಗೇಮ್ಸ್ ಮೀಟ್‌ನಂಗವಾಗಿ ‘ಕ್ರೀಡೆಗೆ  ಎಸ್ ಎನ್ನಿ ಮಾದಕ ದ್ರವ್ಯಕ್ಕೆ ನೋ ಎನ್ನಿ’   ಎಂಬ ಸಂದೇಶದೊಂದಿಗೆ ತಿರುವನಂತಪುರ ತನಕದ ಕೇರಳ ಪೊಲೀಸ್ ಸ್ಪೋರ್ಟ್ಸ್ ಧೀವಟಿಕೆ ಯಾತ್ರೆ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಿಂದ ಇಂದು ಬೆಳಿಗ್ಗೆ ಪ್ರಯಾಣ ಆರಂಭಿಸಿತು. ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಇಂದು ಬೆಳಿಗ್ಗೆ ನಡೆದ ಪೊಲೀಸರು, ವಿದ್ಯಾರ್ಥಿಗಳು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ನೆರೆದ ಸಮಾರಂಭದಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಧೀವಟಿಕೆ ಯಾತ್ರೆ …

ಐಲ ಸಮುದ್ರ ತೀರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಮುಳಿಂಜ ನಿವಾಸಿ

ಉಪ್ಪಳ: ಐಲ ಸಮುದ್ರ  ತೀರದಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಮುಳಿಂಜ ಮಹಾನಗರ ನಿವಾಸಿಯೂ, ದೈವ ಕಲಾವಿದರಾದ ತಿಮ್ಮಪ್ಪ (60) ಎಂಬವರಾಗಿದ್ದಾರೆಂದು ತಿಳಿದುಬಂದಿದೆ. ಕಳೆದ ಬುಧವಾರ ಸಂಜೆ ಇವರು ಐಲ ಸಮುದ್ರ ತೀರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ  ಪತ್ತೆಯಾಗಿದ್ದರು. ಕರಾವಳಿ ಪೊಲೀಸರು ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಿದ್ದರು.  ಬುಧವಾರ ಬೆಳಿಗ್ಗೆ ಉಪ್ಪಳಕ್ಕೆಂದು ತಿಳಿಸಿ ತಿಮ್ಮಪ್ಪ ಮನೆಯಿಂದ ತೆರಳಿದ್ದರೆನ್ನ ಲಾಗಿದ. ಅಂದು ಸಂಜೆಯಾದರೂ ಮನೆಗೆ ಮರಳಿ ಬಂದಿರಲಿಲ್ಲ. ಇದರಿಂದ ಮನೆಯವರು ವಿವಿಧೆಡೆ ಹುಡುಕಾಡಿ ದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ನಿನ್ನೆ …

ವ್ಯಕ್ತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ 

ಕಾಸರಗೋಡು: ವ್ಯಕ್ತಿಯೊಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಚೆರ್ಕಳ ಪಾಡಿ ಶ್ರೀನಿಲಯಂನ ಟಿ.ಕೆ. ಕೋರನ್ ಬೆಳ್ಚಪ್ಪಾಡ (73) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ೮.೩೦ರ ವೇಳೆ ಇವರು ಮನೆ ಬಳಿಯ ಮಾವಿನ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕೂಡಲೇ ಮನೆಯವರು ಅವರನ್ನು ಕಾಸರಗೋ ಡಿನ ಆಸ್ಪತ್ರೆಗೆ ತಲುಪಿಸಿದ್ದು, ಅಷ್ಟರೊಳಗೆ ಸಾವು ಸಂಭವಿಸಿತ್ತು. ಮೃತರು ಪತ್ನಿ ಪಿ.ವಿ. ನಾರಾಯಣಿ, ಮಕ್ಕಳಾದ ಟಿ.ಕೆ. ರಾಜೇಶ್, ರಾಧಿಕ, ರತೀಶ್, ಅಳಿಯ ಸುಧಾಕರನ್ (ನೆಲ್ಕಳ ಉದಯಗಿರಿ), ಸೊಸೆಯಂದಿರಾದ …

ನಿಡುವಲಂಪಾರ ತರವಾಡು ಕುಟುಂಬ ಸಭೆ

ಕಾಸರಗೋಡು: ನಿಡುವಲಂಪಾರ ತರವಾಡು ಕುಟುಂಬ ವಿವಿಧ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿತ್ತು. ತರವಾಡಿನ ವಿವಿಧ ತಲೆಮಾರುಗಳ ಕುಟುಂಬ ಸದಸ್ಯರನ್ನು ಒಟ್ಟುಗೂಡಿಸಿದ ಈ ಸಭೆಯು ಕುಟುಂಬ ಸಂಬAಧ, ತರವಾಡಿನ ಸಂಪ್ರದಾಯವನ್ನು ಎತ್ತಿ ತೋರಿಸಿತು.ನಾಗೇಶ್ ಉದಯಗಿರಿ ಅಧ್ಯಕ್ಷತೆ ವಹಿಸಿದ್ದರು. ಮಧುಸೂದನ ಪಣಿಕರ್ “ತರವಾಡು ಮತ್ತು ಕುಟುಂಬ ಸಂಬAಧಗಳು” ಎಂಬ ವಿಷಯದ ಕುರಿತು ಭಾಷಣ ಮಾಡಿದರು.ವಿವಿಧ ಕಲೆ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಕ್ಕಳು ಮತ್ತು ವಯಸ್ಕರು ಸೇರಿದಂತೆ ಕುಟುಂಬದ ಅನೇಕ ಸದಸ್ಯರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.ಅಮೂಲ್ಯ ಕೊಡುಗೆ ನೀಡಿದ ಕುಟುಂಬದ ಹಿರಿಯ ಸದಸ್ಯರು …

ಮಂಜೇಶ್ವರ ವಿಧಾನಸಭಾ ಮಂಡಲದ ಪರಿಶಿಷ್ಟ ಜಾತಿ ಉನ್ನತಿಗಳ ಅವಲೋಕನ ಸಭೆ

ಉಪ್ಪಳ: ಮಂಜೇಶ್ವರ ತಾಲೂಕು ಅಂಬೇಡ್ಕರ್ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಒಳಪಡಿಸಿದ ಪರಿಶಿಷ್ಟ ಜಾತಿ ಉನ್ನತಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅವಲೋಕನ ಸಭೆಯನ್ನು ಶಾಸಕ ಎಕೆಎಂ ಅಶ್ರಫ್‌ರ ನೇತೃತ್ವದಲ್ಲಿ ಉಪ್ಪಳದ ಶಾಸಕರ ಕಚೇರಿಯಲ್ಲಿ ನಡೆಸಲಾಯಿತು. ಒಂದು ಕೋಟಿ ರೂ.ನಂತೆ ಮಂಜೂರು ಮಾಡಿದ ಮಂಗಲ್ಪಾಡಿ ಪಂಚಾಯತ್‌ನ ಪುಳಿಕುತ್ತಿ ಎಸ್‌ಸಿ ಉನ್ನತಿ, ಪುತ್ತಿಗೆ ಪಂಚಾಯತ್‌ನ ಬಾಡೂರು ಎಸ್‌ಸಿ ಉನ್ನತಿ, ಕಟ್ಟತ್ತಡ್ಕ ಎಸ್‌ಸಿ ಉನ್ನತಿ,  ಪೈವಳಿಕೆ ಪಂಚಾಯತ್‌ನ ಏದಾರ್ ಎಸ್‌ಸಿ ಉನ್ನತಿ ಎಂಬಿವುಗಳ ಅಭಿವೃದ್ಧಿ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ನಿರ್ಮಾಣ ಕಾಮಗಾರಿಗಳು ಪೂರ್ತಿಯಾದ …

ಸಾರ್ವಜನಿಕ ಸ್ಥಳದಲ್ಲಿ ಪಾಯಿಖಾನೆ ತ್ಯಾಜ್ಯ ಉಪೇಕ್ಷೆ : ಉಪೇಕ್ಷಿಸಿದವರಿಂದಲೇ ಸ್ವಚ್ಛಗೊಳಿಸಿದ ಸ್ಥಳೀಯರು

ಕಾಸರಗೋಡು: ರಾತ್ರಿಯ ಮರೆಯಲ್ಲಿ ಪಾಯಿಖಾನೆಯ ತ್ಯಾಜ್ಯವನ್ನು ವಾಹನದಲ್ಲಿ ಹೇರಿಕೊಂಡು ತಂದು ಸಾರ್ವಜನಿಕ ತೋಡಿನಲ್ಲಿ ಉಪೇಕ್ಷಿಸಿದ ಘಟನೆ ನಡೆದಿದ್ದು, ಮಾಹಿತಿ ತಿಳಿದು ತಲುಪಿದ ಸ್ಥಳೀಯರ ನೇತೃತ್ವದಲ್ಲಿ ಈ ತ್ಯಾಜ್ಯವನ್ನು ಉಪೇಕ್ಷಿಸಿದ ವರಿಂದಲೇ ಸ್ವಚ್ಛಗೊಳಿಸಲಾಗಿದೆ. ಇತ್ತೀಚೆಗೆ ರಾತ್ರಿ ಹೊತ್ತಲ್ಲಿ ನಗರಸಭೆಯ ಅಣಂಗೂರು ಕಾಪಿವಳಪ್ ರಸ್ತೆ ಬದಿಯ ಸಣ್ಣ ತೋಡಿಗೆ ಪಾಯಿಖಾನೆ ತ್ಯಾಜ್ಯವನ್ನು  ಉಪೇಕ್ಷಿಸಲಾಗಿತ್ತು. ಪರಿಸರದಲ್ಲಿ ದುರ್ವಾಸನೆ ಹರಡಿದ ಹಿನ್ನೆಲೆಯಲ್ಲಿ ಹುಡುಕಾಡಿ ದಾಗ ತ್ಯಾಜ್ಯವನ್ನು ತೋಡಿನಲ್ಲಿ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿತ್ತು. ಬಳಿಕ ಸ್ಥಳೀಯರ ನೇತೃತ್ವದಲ್ಲಿ ಇಲ್ಲಿನ ಸಿಸಿ ಟಿವಿ ಕ್ಯಾಮರಾಗಳ …