ಕ್ಷೌರದಂಗಡಿ  ಮಾಲಕ ನಿಧನ

ಉಳಿಯತ್ತಡ್ಕ: ಇಲ್ಲಿನ ಆಜಾದ್ ನಗರದಲ್ಲಿನ ಕ್ಷೌರದಂಗಡಿಯ ಮಾಲಕ ಟಿ. ಪರಮಶಿವನ್ (66) ನಿಧನ ಹೊಂದಿದರು. ಮೃತರು ಪತ್ನಿ ಟಿ. ಸುಮತಿ, ಮಕ್ಕಳಾದ ಇಂದ್ರಾಣಿ, ಗಣೇಶ್, ಶಾಮಿನಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಸುಂದರಿ ರೈ ನಿಧನ

ಮಂಡೆಕಾಪು: ಕುಡಾಲು ಕನಕಪಾಡಿ ನಿವಾಸಿ ದಿ| ವಿಶ್ವನಾಥ ರೈ ಅವರ ಪತ್ನಿ ಸುಂದರಿ ರೈ (78) ಸ್ವ-ಗೃಹದಲ್ಲಿ ನಿಧನ ಹೊಂದಿ ದರು. ಮೃತರು ಮಕ್ಕಳಾದ ಪದ್ಮಾವತಿ, ಜಲಜಾಕ್ಷಿ, ಪದ್ಮನಾಭ, ಅಳಿಯಂದಿರು, ಸೊಸೆ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಉಬ್ರಂಗಳದ  ದಾಮೋದರ ನಿಧನ

  ಕುಂಬ್ಡಾಜೆ: ಉಬ್ರಂಗಳ ನಿವಾಸಿ ದಾಮೋದರ (64) ಎಂಬವರು ನಿಧನಹೊಂದಿದರು. ಮೃತರು ಪತ್ನಿ ವಸಂತಿ, ಮಕ್ಕಳಾದ ದಯಾನಂದ, ವಿಜಯ ಕುಮಾರ್, ರಮ್ಯ, ಅಳಿಯ-ಸೊಸೆಯಂದಿರಾದ ಜಯನ್, ಅಂಜು, ಹರ್ಷ, ಸಹೋದರ-ಸಹೋದರಿಯರಾದ  ಬಟ್ಯ (ಬಿಎಸ್‌ಎನ್‌ಎಲ್ ಮಂಗಳೂರು), ಶ್ರೀಧರ, ಪುಷ್ಪಾವತಿ, ಶಾರದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಿ.ವಿ. ಅಬ್ದುಲ್ ರಹ್ಮಾನ್ ಹಾಜಿ ನಿಧನ

ಕಾಸರಗೋಡು: ಶ್ವಾಸಕೋಶ ತಜ್ಞ ಹಾಗೂ ಸಾಹಿತಿಯಾಗಿರುವ ಡಾ. ಎ.ಎ. ಅಬ್ದುಲ್ ಸತ್ತಾರ್‌ರ ತಂದೆ ಎರಿಯಾಲ್ ನಿವಾಸಿ ಬಿ.ವಿ. ಅಬ್ದುಲ್ ರಹ್ಮಾನ್ ಹಾಜಿ (9೦) ನಿಧನ ಹೊಂದಿದರು. ಹಡಗು ನೌಕರನಾಗಿದ್ದರು. ಇವರ ಪತ್ನಿ ಸೈನಾಬಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಇತರ ಮಕ್ಕಳಾದ ಮುಹಮ್ಮದ್ ಶರೀಫ್ ಎ.ಎ, ಸಫಿಯ, ಸೌದ, ಸುಮಯ್ಯಾಬಿ, ಸುರಯ್ಯಾಬಿ, ರಮ್ಲಾಬಿ, ನಜೀಮ, ಅಳಿಯಂದಿರಾದ ಅಬ್ದುಲ್ಲ ಕೆ.ಬಿ, ಅಹಮ್ಮದ್ ಚೇರಂಗೈ, ಬಶೀರ್, ಸತ್ತಾರ್, ರಜಾಕ್, ಸುಬೈರ್, ಸೊಸೆಯಂದಿರಾದ ಶಮೀಮ, ರಸೀನ ಹಾಗೂ ಅಪಾರ ಬಂಧು-ಮಿತ್ರರನ್ನು …

ಕಾಶ್ಯಮ್ಮ ನಿಧನ

ಮಧೂರು: ಮುಟ್ಟತ್ತೋಡಿ ನಿವಾಸಿ ನಾರಾಯಣ ಅಡಿಗರ ಪತ್ನಿ ಕಾಶ್ಯಮ್ಮ (8೦) ನಿಧನ ಹೊಂದಿದರು. ಮೃತರು ಪತಿ, ಮಕ್ಕಳಾದ ರಾಮಕೃಷ್ಣ ಅಡಿಗ (ಆರಂತೋಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ), ಶಂಕರ ಅಡಿಗ, ಜಯಶೀಲ, ಶ್ರೀವಿದ್ಯಾ, ಅಳಿಯಂದಿರಾದ ಸುಬ್ರಹ್ಮಣ್ಯ ಹೊಳ್ಳ ಮುಳಿಯಾರು, ವಾಸುದೇವ ವರ್ಕಾಡಿ, ಸಹೋದರರಾದ ವೆಂಕಟ್ರಮಣ ರಂಗ ಭಟ್, ಸುಬ್ರಹ್ಮಣ್ಯ ರಂಗ ಭಟ್, ಸಹೋದರಿಯರಾದ ಲಲಿತ, ಸುಮತಿ, ರಾಜಲಕ್ಷ್ಮಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ನಗರಸಭೆಯಲ್ಲಿ ಬೀದಿ ದೀಪ ದುರಸ್ತಿ ಮೊಟಕು: ನಗರಸಭಾ ಆಡಳಿತದ ಬೇಜವಾಬ್ಧಾರಿ ವಿರುದ್ಧ ಬಿಜೆಪಿ ಆಕ್ರೋಶ

ಕಾಸರಗೋಡು: ನಗರಸಭಾ ವ್ಯಾಪ್ತಿಯಲ್ಲಿ ಬೀದಿ ದೀಪಗಳು ಕೆಟ್ಟು ತಿಂಗಳುಗಳು ಕಳೆದರೂ ದುರಸ್ತಿ ಕಾರ್ಯ ಕೈಗೊಳ್ಳದೆ ಸಾರ್ವಜನಿಕರನ್ನು ನಗರಸಭಾ ಆಡಳಿತ ಕತ್ತಲೆಯಲ್ಲಿರಿಸಿದೆಯೆಂದು ಬಿಜೆಪಿ ನಗರಸಮಿತಿ ಆಕ್ರೋಶಿಸಿದೆ. ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಬಹುತೇಕ ವಾರ್ಡ್‌ಗಳಲ್ಲಿ ಬೀದಿ ದೀಪಗಳು ಉರಿಯುತ್ತಿಲ್ಲವೆಂದು ಬಿಜೆಪಿ ದೂರಿದ್ದು, ಇದರಿಂದ ರಾತ್ರಿ ವೇಳೆ ಜನಸಾಮಾನ್ಯರು, ಮಹಿಳೆಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಭಯದಿಂದ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳ್ಳತನ, ಅಪಘಾತ, ಬೀದಿ ನಾಯಿಗಳು ಆವಳಿ ಹೆಚ್ಚುತ್ತಿದ್ದರೂ ನಗರಸಭಾ ಆಡಳಿತ ಕಣ್ಮುಚ್ಚಿ ಕುಳಿತಿದೆಯೆಂದು ಬಿಜೆಪಿ ದೂರಿದೆ. ಈ ಬಗ್ಗೆ …

ನಗರಸಭೆಯಲ್ಲಿ ಭ್ರಷ್ಟಾಚಾರ ಆಡಳಿತ ಆರೋಪ: ಬಿಜೆಪಿಯಿಂದ ದೊಂದಿ ಮೆರವಣಿಗೆ

ಕಾಸರಗೋಡು: ನಗರಸಭೆಯ ಭ್ರಷ್ಟಾಚಾರದ ಆಡಳಿತದಿಂದ ನಗರ ವಾಸಿಗಳು ಸಂಕಷ್ಟಕ್ಕೀಡಾಗಿದ್ದಾರೆಂದು ಆರೋಪಿಸಿ ಬಿಜೆಪಿ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು. ಅಭಿವೃದ್ಧಿ ಕುಂಠಿತ, ಶೋಚನೀಯಗೊಂಡ ರಸ್ತೆಗಳು, ಉರಿಯದ ಬೀದಿ ದೀಪಗಳು, ಜನಪರ ಸಮಸ್ಯೆಗಳಿಗೆ ಅವಗಣನೆ ಎಂಬಿವುಗಳ ವಿರುದ್ಧ ಬಿಜೆಪಿ ಕಾಸರಗೋಡು ನಗರಸಭಾ ಸಮಿತಿ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು. ಕರಂದಕ್ಕಾಡಿನಿಂದ ಆರಂಭಗೊಂಡ ಮೆರವಣಿಗೆ ನಗರಸಭಾ ಕಚೇರಿ ಮುಂಭಾಗದಲ್ಲಿ ಸಮಾಪ್ತಿಗೊಂಡಿತು. ಮುಖಂಡರಾದ ಗುರುಪ್ರಸಾದ್ ಪ್ರಭು, ವರಪ್ರಸಾದ್ ಕೋಟೆಕಣಿ, ರವೀಂದ್ರ ಪೂಜಾರಿ, ಶರತ್ ಅಣಂಗೂರು, ವೀಣಾ ಅರುಣ್ ಶೆಟ್ಟಿ, ಶರತ್ ಅಮೈ, ರಾಮ್‌ಮೋಹನ್, …