ಪ್ರಸಿದ್ಧಿ ಪಡೆದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರಕ್ಕೆ ವಿದ್ಯುತ್ ಸ್ವಾವಲಂಬನೆಯಲ್ಲಿ ಮತ್ತೊಂದು ಖ್ಯಾತಿ

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಸೌರ ವಿದ್ಯುತ್ ಸ್ಥಾಪಿಸಿ ಕ್ಷೇತ್ರ ಸ್ವಾವಲಂಬನೆ ಹೊಂದಿದೆ. 50 ಕಿಲೋ ವ್ಯಾಟ್ ಸೌರಶಕ್ತಿ ಪ್ಲಾಂಟ್‌ನ್ನು ಕ್ಷೇತ್ರದಲ್ಲಿ ಸ್ಥಾಪಿಸಲಾಗಿದೆ. ಮೂರು ತಿಂಗಳ ಹಿಂದೆ ವರೆಗೆ ಪ್ರತೀ ತಿಂಗಳು 4೦,೦೦೦ ರೂ. ನಿಂದ 5೦,೦೦೦ ರೂ.ವರೆಗೆ ವಿದ್ಯುತ್ ವೆಚ್ಚದಲ್ಲಿ ಪಾವತಿಸಲಾಗುತ್ತಿತ್ತು. ಅದೀಗ ಪ್ರತೀ ತಿಂಗಳು ಮೀಟರ್ ಬಾಡಿಗೆ ರೂಪದಲ್ಲಿ 7೦ ರೂ. ಹಾಗೂ ಜಿಎಸ್‌ಟಿ ಸಹಿತದ ವಿದ್ಯುತ್ ಬೋರ್ಡ್‌ನ ಫಿಕ್ಸೆಡ್ ದರವಾಗಿ 5,೦೦೦ ರೂ. ಆಗಿ ಕಡಿತಗೊಂಡಿದೆ. ಈ ಮೊದಲು ತ್ರೀಫೇಸ್ …

ಪೆರಡಾಲ ದೇವಸ್ಥಾನಕ್ಕೆ ಬಸ್ ಸಂಚಾರ ಪುನರಾರಂಭ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಕ್ಕೆ ಬಸ್ ಸಂಚಾರ ಪುನರಾರಂಭಗೊಂಡಿದೆ. ನೀರ್ಚಾಲ್ ನಿಂದ ಕನ್ಯಪ್ಪಾಡಿ- ಪೆರಡಾಲ ಮೂಲಕ ಬದಿಯಡ್ಕಕ್ಕೆ, ಅನಂತರ ಕಾಸರಗೋಡಿಗೆ  ಸೂರ್ಯ ಸಂಸ್ಥೆಯ ಬಸ್ ಸಂಚರಿಸುತ್ತಿದೆ. ಇದು ಪೆರಡಾಲ ಕ್ಷೇತ್ರಕ್ಕೆ ತೆರಳುವ ಭಕ್ತರಿಗೆ ಹೆಚ್ಚಿನ ಪ್ರಯೋಜನಕಾರಿಯಾಗಿದೆ. ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ವೇದಮೂರ್ತಿ ಶಿವರಾಮ ಭಟ್ ಪೆರಡಾಲ ಅವರು ದೇವರ ಮುಂದೆ ಪ್ರಾರ್ಥಿಸಿ ತೆಂಗಿನಕಾಯಿ ಒಡೆಯುವ ಮೂಲಕ ಬಸ್‌ನ ಮೊದಲ ಸಂಚಾರ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಬದಿಯಡ್ಕ ಪಂಚಾಯತ್ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಪಂ. ಸದಸ್ಯ …

ಚಂದ್ರನ್ ನಿಧನ

ಮುಳ್ಳೇರಿಯ: ಆದೂರು ಕೊಯಂ ಕೂಡ್ಲು ನಿವಾಸಿ ಚಂದ್ರನ್ (68) ನಿಧನ ಹೊಂದಿದರು. ಮೃತರು ಮಕ್ಕಳಾದ ಪ್ರಮೋದ್, ಪ್ರಸಾದ್, ಸೊಸೆಯಂದಿ ರಾದ ಶ್ವೇತ, ರಶ್ಮಿನಿ, ಸಹೋದರರಾದ ಕುಮಾರನ್, ಭಾಸ್ಕರನ್, ಗೋಪಾಲನ್, ಸಹೋದರಿ ವೆಳ್ಳಚ್ಚಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಟಿ.ಎಂ. ಮೊಹಮ್ಮದ್ ನಿಧನ

 ಕಾಸರಗೋಡು: ಚೆರ್ಕಳ ಬೇವಿಂಜೆಯ ಮಾಜಿ ಗುತ್ತಿಗೆದಾರ ಹಾಗೂ ಹಿರಿಯ ನಾಗರಿಕ ಟಿ.ಎಂ. ಮೊಹಮ್ಮದ್ (78) ನಿಧನ ಹೊಂದಿ ದರು. ಮೃತರು ಪತ್ನಿ ನಫೀಸ, ಮಕ್ಕಳಾದ ವಾಹಿದ್, ರಹೀಂ, ಬಾಸಿತ್, ತಸ್ನೀಯ, ಜುಬೀನ, ಅಳಿಯಂದಿರಾದ ಖಾದರ್, ಅಶ್ರಫ್, ಸೊಸೆಯಂದಿರಾದ ಸಾಕಿರ, ನಿರ್ಷಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಕ್ಕು ನಿಧನ

ನೀರ್ಚಾಲು: ಕನ್ನೆಪ್ಪಾಡಿ ಗೋಳಿ ಯಡ್ಕ ನಿವಾಸಿ ದಿ| ಕೊರಗರ ಪತ್ನಿ ಅಕ್ಕು (85) ನಿಧನ ಹೊಂದಿದರು. ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತೆ ಯಾಗಿದ್ದರು. ಮೃತರು ಮಕ್ಕಳಾದ ದೈವ ನರ್ತಕ ಚೋಮ ಯಾನೆ ಸಂಜೀವ, ಲಲಿತ, ಸೊಸೆ ಗೌರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಪುತ್ರಿಯರಾದ ಲಕ್ಷ್ಮಿ ಹಾಗೂ ಸೀತ ಈ ಹಿಂದೆ ನಿಧನ ಹೊಂದಿದ್ದಾರೆ.

ಕಾಡು ಪೊದೆ ಬೆಳೆಯುತ್ತಿರುವ ವಿದ್ಯಾನಗರ ಕೈಗಾರಿಕಾ ಎಸ್ಟೇಟ್ 

ಕಾಸರಗೋಡು: ವಿದ್ಯಾನಗರ ಕೈಗಾರಿಕಾ ಎಸ್ಟೇಟ್‌ನ ಕೈಗಾರಿಕಾ ಘಟಕಗಳು ಕಾಡು ಆವರಿಸಿ ಅಪ್ರತ್ಯಕ್ಷವಾಗುತ್ತಿವೆ. ಕಳೆದ ಒಂದು ದಶಕದಿಂದ ಕೈಗಾರಿಕಾ ರಂಗದಲ್ಲಿ ರಾಜ್ಯ ನಡೆಸುತ್ತಿರುವ ಪರಿಷ್ಕಾರಗಳು, ಯೋಜನೆಗಳು ಕೈಗಾರಿಕಾ ವಲಯ ವನ್ನು ಈರೀತಿಗೆ ಕೊಂಡೊಯ್ದಿದೆ ಎಂದು ಹೇಳಲಾಗುತ್ತಿದೆ. ಕೈಗಾರಿಕಾ ಎಸ್ಟೇಟ್‌ನ 100ರಷ್ಟು ಘಟಕಗಳಲ್ಲಿ ಹೆಚ್ಚಿನವು ಹೆಸರಿಗೆ ಮಾತ್ರವೇ ಕಾರ್ಯಾಚರಿಸುತ್ತಿವೆ. ಎಸ್ಟೇಟ್‌ನ ಪ್ರಧಾನ ರಸ್ತೆ ಡಾಮರೀಕರಣವಿಲ್ಲದೆ ಹೊಂಡಗಳಿಂದ ತುಂಬಿ ಶೋಚನೀ ಯಾವಸ್ಥೆಯಲ್ಲಿದೆ. ಬೀದಿ ದೀಪಗಳು ಕಣ್ಣು ಮುಚ್ಚಿವೆ. ಕೆಲವು ಕಟ್ಟಡಗಳ ಸುತ್ತು ಪೊದೆ ಹಾಗೂ ಹುಲ್ಲು ತುಂಬಿಕೊಂಡಿದೆ. ಕಾಡು ಮೃಗಗಳು ಕೂಡಾ …