306 ಪ್ಯಾಕೆಟ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಕಾಸರಗೋಡು: ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಜೋಸೆಫ್ ಜೆ ಯು  ನೇತೃತ್ವದ ತಂಡ  ಮಧೂರು ಕಲ್ಲಕಟ್ಟೆಯಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 180 ಎಂ.ಎಲ್‌ನ 306 ಟೆಟ್ರಾ ಪ್ಯಾಕೆಟ್ ಕರ್ನಾಟಕ ನಿರ್ಮಿತ ಮದ್ಯ (55.08  ಲೀಟರ್) ಪತ್ತೆಹಚ್ಚಿ ವಶ ಪಡಿಸಿಕೊಂಡಿದ್ದಾರೆ. ಇದಕ್ಕೆ ಸಂ ಬಂಧಿಸಿ ಕಲ್ಲಕಟ್ಟೆ ಸಜಿನ್ ನಿವಾಸದ ಸಜಿನ್  ಎ.ಕೆ. (33) ಎಂಬಾತನನ್ನು  ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈತನ ವಿರುದ್ಧ ಇದೇ ರೀತಿಯ ಬೇರೆ ಅಬಕಾರಿ ಕೇಸುಗಳೂ ಇವೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಸರಗೋಡು ಅಸಿಸ್ಟೆಂಟ್ ಎಕ್ಸೈಸ್ ಕಮಿಶನರ್ ಎಚ್. ನೂರುದ್ದೀನ್‌ರ ನೇತೃತ್ವದಲ್ಲಿ ನಡೆಸಲಾದ ಕೋಂಬಿಂಗ್‌ನ ವೇಳೆ ಲಭಿಸಿದ ಮಾಹಿತಿಯಂತೆ ಕಲ್ಲಕಟ್ಟೆ ಯಲ್ಲಿ ಈ ಅಬಕಾರಿ ಕಾರ್ಯಾಚರಣೆ ನಡೆಸಲಾಗಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.  ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಬಕಾರಿ ಪ್ರಿವೆಂಟೀವ್ ಆಫೀಸರ್ ಉಣ್ಣಿಕೃಷ್ಣನ್‌ಕೆ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಬಾಬು ವಿ, ರಾಜೇಶ್ ಪಿ, ಫಸೀಲಾ ಮತ್ತು ಚಾಲಕ ಸುಮೋದ್ ಕುಮಾರ್ ಎಂ ವಿ ಎಂಬವರು ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page