ಮಂಜೇಶ್ವರ ತಾಲೂಕು ಕಚೇರಿ ಡೆಪ್ಯುಟಿ ತಹಶೀಲ್ದಾರ್ ಅಸೌಖ್ಯದಿಂದ ನಿಧನ

ಮಂಜೇಶ್ವರ: ಮಂಜೇಶ್ವರ ತಾಲೂಕು ಕಚೇರಿಯಲ್ಲಿ ಡೆಪ್ಯುಟಿ ತಹಶೀಲ್ದಾರ್ ಆಗಿದ್ದ ಪೆರ್ಲ ಬಳಿಯ ಅರೆಮಂಗಿಲ ನಿವಾಸಿ ಸುಬ್ಬಣ್ಣ ನಾಯ್ಕ್ ಪಿ (೫೩) ಅಸೌಖ್ಯ ಬಾಧಿಸಿ ನಿಧನ ಹೊಂದಿದರು. ಹಳದಿ ಕಾಮಾಲೆ ರೋಗದಿಂದ ಬಳಲುತ್ತಿದ್ದ ಇವರು ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ.

ಕಂದಾಯ ಇಲಾಖೆಯಲ್ಲಿ ವಿಲ್ಲೇಜ್ ಆಫೀಸರ್ ಆಗಿ ಶೇಣಿ, ಪೆರ್ಲ, ಕಾಟುಕುಕ್ಕೆ, ಬಾಯಾರು, ಮೀಂಜ, ವಿಲ್ಲೇಜ್ ಕಚೇರಿಗಳಲ್ಲಿ ಸೇವೆ ಗೈದಿದ್ದರು. ಬಳಿಕ ತಾಲೂಕು ಕಚೇರಿಯಲ್ಲಿ ಡೆಪ್ಯುಟಿ ತಹಶೀಲ್ದಾರ್ ಆಗಿ ಭಡ್ತಿ ಹೊಂದಿದ್ದರು.

ಮೃತರು ಪತ್ನಿ ಭವಾನಿ, ಮಕ್ಕಳಾದ ಜಿತಿನ್ ಎಸ್, ನಿವೇದ್, ಸಹೋದರರಾದ ಈಶ್ವರ ನಾಯ್ಕ್, ಗಣೇಶ್, ಸಹೋದರಿಯರಾದ ದೇವಕಿ, ಗೌರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page