ಕೆ.ಪಿ. ಕುಂಞಿಕಣ್ಣನ್ ನಿಧನಕ್ಕೆ ಸರ್ವಪಕ್ಷ ಸಂತಾಪ

ಬದಿಯಡ್ಕ:  ಮಾಜಿ ಶಾಸಕ, ಕಾಂಗ್ರೆಸ್ ಮುಖಂಡನಾಗಿದ್ದ ಕೆ.ಪಿ. ಕುಂಞಿಕಣ್ಣನ್ ನಿಧನಕ್ಕೆ ಬದಿಯಡ್ಕ ದಲ್ಲಿ ಸರ್ವಪಕ್ಷಗಳ ಸಂತಾಪ ಸಭೆ ಜರಗಿತು. ಬದಿಯಡ್ಕ ಮಂಡಲ ಕಾಂ ಗ್ರೆಸ್ ನೇತೃತ್ವ ನೀಡಿದೆ. ಪಂಚಾಯತ್ ಅಧ್ಯಕ್ಷೆ ಶಾಂತಾ ಬಾರಡ್ಕ ಅಧ್ಯಕ್ಷತೆ ವಹಿಸಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ  ಶ್ಯಾಮ ಪ್ರಸಾದ್ ಮಾನ್ಯ, ಸಿಪಿಎಂನ ಪ್ರಕಾಶ್ ಅಮ್ಮಣ್ಣಾಯ, ಐಯುಎಂಎಲ್‌ನ  ಅಬ್ದುಲ್ಲ ಚಾಲಕ್ಕೆರೆ, ಬಿಜೆಪಿಯ ಅವಿನಾಶ್ ಬದಿಯಡ್ಕ, ಸಿಪಿಐಯ ಸುಧಾಕರನ್, ಜನತಾದಳದ ಕರುಣಾಕರನ್, ಪಂಚಾಯತ್ ಉಪಾಧ್ಯಕ್ಷ ಎಂ. ಅಬ್ಬಾಸ್, ಚಂದ್ರಹಾಸ ರೈ, ಗಂಗಾಧರ ಗೋಳಿಯಡ್ಕ, ಚಂದ್ರಹಾಸ ಮಾಸ್ತರ್, ರಾಮ ಪಟ್ಟಾಜೆ, ಕೇಶವ,ಅಖಿಲೇಶ್ ನಗುಮುಗಂ, ಶ್ರೀನಾಥ್, ಶಾಫಿ ಗೋಳಿಯಡ್ಕ, ರವಿ ಮೆಣಸಿನಪಾರೆ, ಲೋಹಿತಾಕ್ಷನ್, ಜೋನಿ ಕ್ರಾಸ್ತಾ, ವಾಮನ ನಾಯ್ಕ, ಸವಾದ್, ಸತೀಶ, ಸುಂದರ ನಾಯ್ಕ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page