ಆಟೋರಿಕ್ಷಾ ಚಾಲಕನ ಆತ್ಮಹತ್ಯೆ: ತನಿಖೆ ತೀವ್ರ

ಕಾಸರಗೋಡು: ಕಾಸರ ಗೋಡು ರೈಲು ನಿಲ್ದಾಣ ರಸ್ತೆ ಬಳಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಮೂಲತಃ ಕರ್ನಾಟಕ ನಿವಾಸಿ ಕೆ. ಅಬ್ದುಲ್ ಸತ್ತಾರ್ (60) ತಮ್ಮ  ಕ್ವಾರ್ಟರ್ಸ್‌ನೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣದ ತನಿಖೆಯನ್ನು ಕ್ರೈಮ್ ಬ್ರಾಂಚ್ ತೀವ್ರಗೊಳಿಸಿದೆ. ಅಬ್ದುಲ್ ಸತ್ತಾರ್‌ರ ಆಟೋರಿಕ್ಷಾವನ್ನು ಕಾಸರಗೋಡು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ದಿನಗಳು ಕಳೆದರೂ  ಬಿಟ್ಟುಕೊಡದೇ ಇರುವುದರಿಂದ ಮನನೊಂದು ಅವರು ಆತ್ಮಹತ್ಯೆಗೈದಿದ್ದರು.

ಆತ್ಮಹತ್ಯೆಗೆ ಸಂಬಂಧಿಸಿ ಅಬ್ದುಲ್ ಸತ್ತಾರ್‌ರ ಸಂಬಂಧಿಕರ ಹೇಳಿಕೆಗಳನ್ನು ಈಗಾಗಲೇ ದಾಖಲಿಸಿಕೊಳ್ಳಲಾಗಿದೆ. ಆತ್ಮಹತ್ಯೆಗೈದುದರ ನಿಜವಾದ ಕಾರಣಗಳ ಬಗ್ಗೆ ಹಾಗೂ ಅದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಜಿಲ್ಲಾ ಕ್ರೈಮ್ ಬ್ರಾಂಚ್ ಡಿವೈಎಸ್‌ಪಿ ಟಿ. ಉತ್ತಮ್‌ದಾಸ್ ತಿಳಿಸಿದ್ದಾರೆ.

You cannot copy contents of this page