ದೈಗೋಳಿ ಅಂಗನವಾಡಿ ಶಿಕ್ಷಕಿಗೆ ರಾಜ್ಯ ಪ್ರಶಸ್ತಿ
ವರ್ಕಾಡಿ: ಮೀಂಜ ಪಂಚಾಯತ್ ಕೋಳ್ಯೂರು ವಾರ್ಡ್ನ ದೈಗೋಳಿ ಅಂಗನವಾಡಿ ಟೀಚರ್ ವಿಶಾಲಾಕ್ಷಿಯವರಿಗೆ ೨೦೨೪ನೇ ಸಾಲಿನ ರಾಜ್ಯ ಮಟ್ಟದ ಶ್ರೇಷ್ಠ ಅಂಗನವಾಡಿ ಕಾರ್ಯಕರ್ತೆ ಗಿರುವ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ತಿರುವನಂತಪುರದಲ್ಲಿ ಜರಗಿದ ಸಮಾರಂಭದಲ್ಲಿ ರಾಜ್ಯ ಮಹಿಳಾ ನಿಗಮದ ಅಧ್ಯಕ್ಷೆ ರೋಸಾ ಕುಟ್ಟಿ ಕೆ.ಸಿ. ವಿಶಾಲಾಕ್ಷಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಳೆದ ೨೭ ವರ್ಷಗಳಿಂದ ದೈಗೋಳಿ ಅಂಗನವಾಡಿಯಲ್ಲಿ ಇವರು ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೈಗೋಳಿ ಜ್ಞಾನೋದಯ ಸಮಾಜ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸದಸ್ಯೆಯಾಗಿರುವ ಇವರಿಗೆ ಸಂಘಟನೆಗಳು ಅಭಿನಂದನೆ ಸಲ್ಲಿಸಿವೆ.