ವ್ಯಾಪಕ ಅಬಕಾರಿ ದಾಳಿ: ಅನಧಿಕೃತ ಮದ್ಯ ವಶ
ಕಾಸರಗೋಡು: ಅಬಕಾರಿ ತಂಡ ಜಿಲ್ಲೆಯ ಹಲವೆಡೆಗಳಲ್ಲಾಗಿ ವ್ಯಾಪಕ ದಾಳಿ ನಡೆಸಿದ್ದು, ಅದರಲ್ಲಿ ಗೋವಾ ಮದ್ಯ ಹಾಗೂ ಅಕ್ರಮ ಮದ್ಯ ತಯಾ ರಿಗಾಗಿ ಸಿದ್ಧಪಡಿಸಲಾಗಿದ್ದ ವಾಶ್ನ್ನು ವಶಪಡಿಸಿಕೊಂಡಿದೆ. ಇದಕ್ಕೆ ಸಂಬA ಧಿಸಿ ಇಬ್ಬರನ್ನು ಸೆರೆಹಿಡಿಯಲಾಗಿದೆ.
ಕೂಡ್ಲು ಪಾಯಿಚ್ಚಾಲ್ನ ಆಜಾದ್ನಗರ ರಸ್ತೆ ಬಳಿ ಬಚ್ಚಿಡಲಾಗಿದ್ದ 11.7 ಲೀಟರ್ ಗೋವಾ ನಿರ್ಮಿತ ಮದ್ಯವನ್ನು ಕಾಸರಗೋಡು ಎಕ್ಸೈಸ್ ರೇಂಜ್ ಕಚೇರಿಯ ಇನ್ಸ್ಪೆಕ್ಟರ್ ಸೂರಜ್ ಎನ್ ಮತ್ತು ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬA ಧಿಸಿ ಮೊಗ್ರಾಲ್ ಪಾಯಿಚ್ಚಾಲ್ನ ಶರತ್ ಕುಮಾರ್ ಕೆ (44) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ.
ಕಾಸರಗೋಡು ಸ್ಪೆಷಲ್ ಸ್ಕ್ವಾಡ್ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಪ್ರಮೋದ್ ಕುಮಾರ್ ವಿ ನೇತೃತ್ವದ ತಂಡ ಕುಂಬಳೆ ಸಮೀಪದ ಬಂಬ್ರಾಣ ಅಂಡಿತ್ತಡ್ಕದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಶೆಡ್ನೊಳಗೆ ಕಾರ್ಬನ್ ಪೆಟ್ಟಿಗೆಗಳಲ್ಲಾಗಿ ಬಚ್ಚಿಡಲಾಗಿದ್ದ 129.6 ಲೀಟರ್ ಗೋವಾ ಮದ್ಯ ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬA ಧಿಸಿ ಸ್ಥಳೀಯ ಬಾಲಕೃಷ್ಣ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹೊಸದುರ್ಗ ಕೊವ್ವಲ್ನ ಕ್ಲಬ್ವೊಂದರ ಬಳಿ ಅಕ್ರಮವಾಗಿ ಬಚ್ಚಿಡಲಾಗಿದ್ದ 18 ಲೀಟರ್ ಕರ್ನಾಟಕ ಮದ್ಯವನ್ನು ಹೊಸದುರ್ಗ ಎಕ್ಸೈಸ್ ಇನ್ಸ್ಪೆಕ್ಟರ್ ಜಿಷ್ಣು ಕುಮಾರ್ ಇ ನೇತೃತ್ವದ ತಂಡ ವಶಪಡಿಸಿಕೊಂಡಿದೆ. ಈ ಮಾಲನ್ನು ಸ್ಕೂಟರ್ವೊಂದರಲ್ಲಿ ಬಚ್ಚಿಡಲಾಗಿತ್ತು. ಅದಕ್ಕೆ ಸಂಬAಧಿಸಿ ಹೊಸದುರ್ಗ ಕಡಪ್ಪುರದ ಸಜೇಶ್ ಎ.ಕೆ. (37) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ವೆಳ್ಳರಿಕುಂಡ್ ಮಾಲೋಂ ಮುಟ್ಟಾಂಕಡವುನ ನಿರ್ಜನ ಹಿತ್ತಿಲಲ್ಲಿ ಕಳ್ಳಬಟ್ಟಿ ಸಾರಾಯಿಗಾಗಿ ಸಿದ್ಧಪಡಿಸಲಾಗಿದ್ದ 60 ಲೀಟರ್ ಹುಳಿರಸವನ್ನು ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ನೀಲೇಶ್ವರ ರೇಂಜ್ ಎಕ್ಸೈಸ್ ಇನ್ಸ್ಪೆಕ್ಟರ್ ವೈಶಾಖ್ ಎನ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಕಾಸರಗೋಡು ಕೈನೋತ್ತ್ ಬಳಿಯ ಪೊದೆಯಲ್ಲಿ ಮೂರು ಗೋಣಿ ಚೀಲಗಳಲ್ಲಾಗಿ ಬಚ್ಚಿಡಲಾಗಿದ್ದ ಸ್ಥಿತಿಯಲ್ಲಿ 180 ಎಂಎಲ್ನ 402 ಬಾಟಲಿ (72.360 ಲೀಟರ್) ಗೋವಾ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ಆದರೆ ಈ ಸಂಬAಧ ಯಾರನ್ನೂ ಬಂಧಿಸಲಾಗಿಲ್ಲ. ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ನ ಗ್ರೇಡ್ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ಸಿಕೆವಿ ಸುರೇಶ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.