ಒಂದಂಕಿ ಲಾಟರಿ ನಡೆಸುತ್ತಿದ್ದಾತ ಸೆರೆ
ಕುಂಬಳೆ: ಕೇರಳ ರಾಜ್ಯ ಲಾಟರಿಗೆ ಸಮಾನವಾಗಿ ಒಂದಂಕಿ ಲಾಟರಿ ನಡೆಸುತ್ತಿದ್ದ ವ್ಯಕ್ತಿಯನ್ನು ಕುಂಬಳೆ ಪೊಲೀಸರು ಬಂಧಿಸಿ ದ್ದಾರೆ. ಬಂದ್ಯೋಡು ಮಂಜುಶ್ರೀ ನಿಲಯದ ಮಂಜುನಾಥ (58) ಬಂಧಿತ ವ್ಯಕ್ತಿ. ಈತನ ಕೈಯಂದ 31,981 ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಜುನಾಥ ಬಂದ್ಯೋಡಿನಲ್ಲಿ ಕೇರಳ ಲಾಟರಿಗೆ ಸಮಾನವಾಗಿ ಲಾಟರಿ ನಡೆಸುತ್ತಿದ್ದಾ ನೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಎಸ್ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈತನ ವಿರುದ್ಧ ಕೇರಳ ಲಾಟರಿ ಆಕ್ಟ್ ಪ್ರಕಾರ ಕೇಸು ದಾಖಲಿಸಲಾಗಿದೆ. ಬಂಧಿತನನ್ನು ನ್ಯಾಯಾಲಯದಲ್ಲಿ ಹಾಜರುಪಡಿ ಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.