ರಸ್ತೆ ಕುಸಿದು ಬಿದ್ದು ತಿಂಗಳಾದರೂ ಅಧಿಕಾರಿಗಳು ಮೌನ: ಅಪಾಯ ಭೀತಿಯಲ್ಲಿ ವಾಹನ ಸಂಚಾರ

ಮಂಜೇಶ್ವರ: ಕಳೆದ ತಿಂಗಳು ಸುರಿದ ಭಾರೀ ಮಳೆಗೆ ರಸ್ತೆ ಕುಸಿದು ವಾಹನಗಳ ಸಂಚಾರಕ್ಕೆ ತಡೆ ಉಂಟಾಗಿದ್ದರೂ ಇಲಾಖೆ ಅಧಿಕಾರಿಗಳು ದುರಸ್ತಿಗೆ ಕ್ರಮಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾ ಗಿದೆ. ಮೀಂಜ ಪಂಚಾಯತ್ ವ್ಯಾಪ್ತಿಗೊಳಪಟ್ಟ ಹೊಸಂಗಡಿ-ಮೀಯಪದವು ರಸ್ತೆಯ ಮಜಿಬೈಲ್ ತಿರುವುನಲ್ಲಿ ರಸ್ತೆ ಕುಸಿದು ಆತಂಕದ ಸ್ಥಿತಿ ಉಂಟಾಗಿದೆ. ಲೋಕೋಪಯೋಗಿ ಇಲಾಖೆಯ ರಸ್ತೆ ಇದಾಗಿದೆ. ಕಳೆದ ತಿಂಗಳು ಸುರಿದ ಮಳೆಗೆ ರಸ್ತೆಯ ಒಂದು ಬದಿ ಕುಸಿದು ಬಿದ್ದಿದ್ದು, ಬಳಿಕ ಕ್ರಮೇಣ ಅಡಿಭಾಗದ ಮಣ್ಣು ಕೊರೆದು ಈಗ ಅರ್ಧ ರಸ್ತೆ ಕುಸಿದು ಹೋಗಿದೆ. ಇಕ್ಕಟ್ಟಾದ ರಸ್ತೆಯಲ್ಲಿ ಬಸ್ ಸಹಿತ ವಾಹನಗಳ ಸಂಚಾರಕ್ಕೆ ಆಡಚಣೆ ಉಂಟಾಗುತ್ತಿದ್ದು, ಆತಂಕದ ಸ್ಥಿತಿ ಇದೆ. ಈ ಹಿಂದೆಯೇ ಸ್ಥಳಕ್ಕೆ ಅಧಿಕಾರಿಗಳು ತಲುಪಿ ಪರಿಶೀಲಿಸಿ ಹೆಸರಿಗೆ ಮಾತ್ರ ಅಪಾಯದ ಸೂಚನೆಯ ನಾಮಫಲಕವನ್ನು ಇಟ್ಟು ಹೋಗಿದ್ದು, ದುರಸ್ತಿಗೊಳಿಸಲು ಮುಂದಾಗಲಿಲ್ಲವೆAದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆ ಕುಸಿದು ನಿರ್ಮಾಣಗೊಂಡ ಹೊಂಡದ ಪರಿಸರದಲ್ಲಿ ಭದ್ರತೆ ಇಲ್ಲದ ಹಿನ್ನೆಲೆಯಲ್ಲಿ ರಾತ್ರಿ ಕಾಲದ ವಾಹನಗಳು ಹೊಂಡ ಗಮನಕ್ಕೆ ಬಾರದೆ ಅಪಘಾತ ಸಂಭವಿಸಬಹುದಾಗಿದೆ. ಇನ್ನೂ ಕುಸಿದು ಬಿದ್ದಲ್ಲಿ ವಾಹನಗಳ ಸಂಚಾರ ಪೂರ್ಣಮೊಟಕುಗೊಳ್ಳಲಿದೆ. ಸಂಬAಧ ಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿಗೊಳಿಸಲು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

You cannot copy contents of this page