ಯುವಕನಿಗೆ ಹಲ್ಲೆ: ನರಹತ್ಯಾಯತ್ನ ಪ್ರಕರಣದ ಆರೋಪಿ ಸೆರೆ
ಮಂಜೇಶ್ವರ: ಇಬ್ಬರು ಯುವಕರಿಗೆ ಹಲ್ಲೆಗೈದ ಪ್ರಕರಣದಲ್ಲಿ ಆರೋಪಿಗಳ ಪೈಕಿ ಓರ್ವನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ.
ಮಚ್ಚಂಪಾಡಿ ನಿವಾಸಿ ಅಬ್ದುಲ್ ಜಬ್ಬಾರ್ (37) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಪಾವೂರು ಕೋಡಿ ಹೌಸ್ನ ಅಬ್ದುಲ್ ಖಾದರ್ (39), ಮುಹಮ್ಮದ್ ಜಾಹಾರ್ (31) ಎಂಬಿವರಿಗೆ ಹಲ್ಲೆಗೈದ ಪ್ರಕರಣದಲ್ಲಿ ಅಬ್ದುಲ್ ಜಬ್ಬಾರ್ ಆರೋಪಿಯಾಗಿ ದ್ದಾನೆ. ಇತ್ತೀಚೆಗೆ ಮಚ್ಚಂಪಾಡಿ ಪಳ್ಳದಲ್ಲಿ ಕಾರನ್ನು ಹಿಂದಿಕ್ಕಲಾಯಿತೆಂಬ ದ್ವೇಷದಿಂದ ಈ ಇಬ್ಬರಿಗೆ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಈ ಸಂಬಂಧ ಅಬ್ದುಲ್ ಖಾದರ್ ನೀಡಿದ ದೂರಿನಂತೆ ಅಬ್ದುಲ್ ಜಬ್ಬಾರ್ ಹೊರತು ಹೊಸಂಗಡಿಯ ಯಾಕೂಬ್, ಪಾವೂರು ಮುಬಾರಕ್, ಮಂಜೇಶ್ವರದ ಅಶ್ರಫ್ ಎಂಬಿವರ ವಿರುದ್ಧವೂ ಮಂಜೇಶ್ವರ ಪೊಲೀಸರು ನರಹತ್ಯಾಯತ್ನ ಕೇಸು ದಾಖಲಿಸಿದ್ದಾರೆ. ಬಂಧಿತ ಅಬ್ದುಲ್ ಜಬ್ಬಾರ್ಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಇತರ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.