ಬದಿಯಡ್ಕ- ಚೆರ್ಕಳ ರಸ್ತೆಯಲ್ಲಿ ಹೊಂಡಬಾಳೆ ನೆಟ್ಟು ಬಿಜೆಪಿ ಪ್ರತಿಭಟನೆ
ಬದಿಯಡ್ಕ: ಬದಿಯಡ್ಕ- ಚೆರ್ಕಳ ರಸ್ತೆಯಲ್ಲಿರುವ ಹೊಂಡಗಳಲ್ಲಿ ಬಿಜೆಪಿ ಬಾಳೆ ನೆಟ್ಟು ಪ್ರತಿಭಟನೆ ವ್ಯಕ್ತಪಡಿಸಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ನೇತೃತ್ವ ನೀಡಿದರು. ರಸ್ತೆಯ ಶೋಚನೀಯ ಸ್ಥಿತಿಯ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ಭಾರೀ ಆಳದ ಹೊಂಡಗಳು ಸೃಷ್ಟಿಯಾಗಿದ್ದು ಇದು ಅಪಾಯಭೀತಿ ಹುಟ್ಟಿಸುತ್ತಿದೆ. ಹಾಗಿದ್ದರೂ ಅದರ ದುರಸ್ತಿಗೆ ಕ್ರಮ ಕೈಗೊಳ್ಳದಿರುವುದು ಜನರೊಂದಿಗೆ ಸರಕಾರ ತೋರಿಸುವ ಸವಾಲಾಗಿದೆ ಎಂದು ಅವರು ಆರೋಪಿಸಿದರು. ಸ್ಥಳೀಯ ಜನತೆ ಹಾಗೂ ಪ್ರಯಾಣಿಕರು ಪ್ರತಿಭಟನೆಗೆ ಬೆಂಬಲ ನೀಡಿದರು.