ಅರಣ್ಯದಲ್ಲಿ ಬಚ್ಚಿಡಲಾಗಿದ್ದ  ಹುಳಿರಸ, ಮದ್ಯ ಪತ್ತೆ

ಮುಳ್ಳೇರಿಯ: ಆದೂರಿಗೆ ಸಮೀಪದ ಪೆರಿಯಡ್ಕದ ಅರಣ್ಯದಲ್ಲಿ ಬದಿಯಡ್ಕ ಅಬಕಾರಿ ರೇಂಜ್ ಇನ್ಸ್ ಪೆಕ್ಟರ್ ಎಚ್. ಬಿನುರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಅಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾ ರಿಸಲು ಬಚ್ಚಿಡಲಾಗಿದ್ದ ೧೦೦ ಲೀಟರ್ ಹುಳಿರಸ ಮತ್ತು ಒಂದು ಲೀಟರ್ ಕಳ್ಳಬಟ್ಟಿ ಸಾರಾಯಿ ಪತ್ತೆಹಚ್ಚಿದೆ.

ಈ ಮಾಲುಗಳನ್ನು ಬಳಿಕ ಅಲ್ಲೇ ನಾಶಪಡಿಸಲಾಯಿತು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಐ.ಬಿ. ಪಿ.ಒ ಜೇಕಬ್, ಮಹಿಳಾ ಎಕ್ಸೈಸ್ ಆಫೀಸರ್ ಶಾಲಿನಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಾದ ಜನಾರ್ಧನನ್, ವಿನೋದ್ ಬಿ. ಮತ್ತು ಅಮಲ್‌ಜಿತ್ ಎಂಬವರು ಒಳಗೊಂಡಿದ್ದರು.

You cannot copy contents of this page