ಹಿರಿಯ ಬಿಜೆಪಿ ಕಾರ್ಯಕರ್ತ ನಿಧನ

ಕೂಡ್ಲು: ಕೋಣಿಬೈಲು ಬಾಳಿಕೆ ಧರ್ಮಚಾವಡಿ ಟ್ರಸ್ಟಿ, ನಗರದಲ್ಲಿ  ಹಲವು ವರ್ಷಗಳ ಕಾಲ ಟೈಲರ್ ಆಗಿದ್ದ  ಬಿ. ಗೋಪಾಲಕೃಷ್ಣ ಶೆಟ್ಟಿ (77) ನಿಧನ ಹೊಂದಿದರು. ಕೂಡ್ಲು ನಾಂಗುರಿ ನಿವಾಸಿಯಾದ ಇವರು ಪ್ರಸ್ತುತ ರಾಮದಾಸನಗರದಲ್ಲಿ ವಾಸಿಸುತ್ತಿದ್ದರು. ಬಿಜೆಪಿ, ಸಂಘ ಪರಿವಾರದ ಹಿರಿಯ ಕಾರ್ಯಕರ್ತ ರಾಗಿದ್ದ ಇವರು ಧಾರ್ಮಿಕ ರಂಗಗಳಲ್ಲೂ ಸಕ್ರಿಯರಾಗಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿದ್ದರು.  ಇವರ ಪತ್ನಿ ಕಲ್ಯಾಣಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಶರತ್, ಭರತ್, ಪ್ರತಾಪ್, ರೇಶ್ಮಾ, ಅಳಿಯ ರಂಜಿತ್, ಸೊಸೆಯಂ ದಿರಾದ ಚಿತ್ರಾ, ರಶ್ಮಿ, ಸಹೋದರ ರಾದ ಪ್ರಕಾಶ್ ಶೆಟ್ಟಿ, ವೆಂಕಟೇಶ್ ಶೆಟ್ಟಿ, ಸಹೋದರಿಯರಾದ ಸುಲೋಚನ, ಕಲಾವತಿ,  ಹೇಮಲತಾ, ಪುಷ್ಪಲತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ವಿಜಯ ಶೆಟ್ಟಿ ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page