ಕಾಸರಗೋಡು: 16ರ ಹರೆಯದ ಬಾಲಕನಿಗೆ ಸಲಿಂಗರತಿ ಕಿರುಕುಳ ನೀ ಡಿದ ಪ್ರಕರಣದಲ್ಲಿ ನೀಲೇಶ್ವರ ಪೊಲೀ ಸರು ಬಂಧಿಸಿದ ಬೇಕಲ ಉಪಜಿಲ್ಲಾ ಶಿಕ್ಷಣ ಅಧಿಕಾರಿ ವಿ.ಕೆ. ಸೈನುದ್ದೀನ್ ನನ್ನು ತನಿಖಾ ವಿಧೇಯವಾಗಿ ಶಿಕ್ಷಣ ಡೆಪ್ಯುಟಿ ಡೈರೆಕ್ಟರ್ ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಶಿಕ್ಷಣ ಖಾತೆ ಸಚಿವ ವಿ. ಶಿವನ್ ಕುಟ್ಟಿಯವರ ನಿರ್ದೇಶ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ. ಪಡನ್ನ ನಿವಾಸಿಯೂ, ಪಡನ್ನಕ್ಕಾಡ್ನಲ್ಲಿ ವಾಸಿಸುವ ಸೈನುದ್ದೀನ್ನನ್ನು ನೀಲೇಶ್ವರ ಪೊಲೀಸರು ಪೋಕ್ಸೋ ಪ್ರಕಾರ ನಿನ್ನೆ ಬಂಧಿಸಿದ್ದರು. ಆರೋಪಿಗೆ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಅದರ ಬೆನ್ನಲ್ಲೇ ಶಿಕ್ಷಣ ಡೆಪ್ಯುಟಿ ಡೈರೆಕ್ಟರ್ ಸೈನುದ್ದೀನ್ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.






