ಉಪ್ಪಳ: ಧರ್ಮತಡ್ಕ-ಕನಿಯಾಲ ಲೋಕೋಪಯೋಗಿ ಇಲಾಖೆ ರಸ್ತೆ ಹೊಂಡಗಳಿAದ ಹಾಗೂ ತಿರುವುಗಳಿಂದ ಕೂಡಿದ್ದು ಅಪಘಾತಕ್ಕೆ ಕಾರಣವಾಗುತ್ತಿರುವು ದಾಗಿ ದೂರಲಾಗಿದೆ. ಈ ರಸ್ತೆ ಉದ್ದಕ್ಕೂ ಅಲ್ಲಲ್ಲಿ ಹೊಂಡ ಸೃಷ್ಟಿಯಾಗಿ ವಾಹನಗಳ ಸಂಚಾರ ಹಾಗೂ ಸೈಡು ನೀಡಲು ಆತಂಕದ ಸ್ಥಿತಿ ಉಂಟಾಗಿದೆ. ಕನಿಯಾಲ ಕಡೆಗೆ ತೆರಳುವ ವೇಳೆ ಭಾರೀ ಇಳಿಜಾರು ಪ್ರದೇಶವಾಗಿರುದರಿಂದ ಅಪಘಾತ ಭೀತಿ ಹೆಚ್ಚಿದೆ. ಈ ರಸ್ತೆಯಲ್ಲಿ ಈ ಹಿಂದೆ ಹಲವಾರು ಭಾರೀ ಕೆಂಪು ಕಲ್ಲು ಸಾಗಾಟದ ಲಾರಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ನಡೆದಿದೆ. ಧರ್ಮ ತ್ತಡ್ಕ-ಕನಿಯಾಲ ಮೂಲಕ ಬಳ್ಳೂರು ಸಹಿತ ಕರ್ನಾಟಕವನ್ನು ಸಂಗಮಿಸುವ ರಸ್ತೆ ಇದಾಗಿದೆ. ದಿನನಿತ್ಯ ಬಸ್ ಸಹಿತ ನೂರಾರು ವಾಹನಗಳು ಈ ರಸ್ತೆಯಿಂದ ಆತಂಕದಿAದಲೇ ಸಂಚರಿಸುತ್ತಿದೆ. ಸಂಬAಧಪಟ್ಟವರು ರಸ್ತೆ ದುರಸ್ತಿ ಹಾಗೂ ಅಪಾಯ ಆಹ್ವಾನಿಸುವ ತಿರುವುವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.







