ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಹಲ್ಲೆ: ಯುಡಿಎಫ್ ಅಭ್ಯರ್ಥಿ ಸೇರಿ 20 ಮಂದಿ ವಿರುದ್ಧ ಕೇಸು

ಕಾಸರಗೋಡು: ಪೊಲೀಸ್ ಇನ್ಸ್‌ಪೆಕ್ಟರ್‌ರ ಮೇಲೆ ಹಲ್ಲೆ ನಡೆಸಿದ ಆರೋಪದಂತೆ ಅಜಾನೂರು ಪಂಚಾ ಯತ್‌ನ ಯುಡಿಎಫ್ ಅಭ್ಯರ್ಥಿ ಸಿ.ಎಚ್. ನಿಝಾಮುದ್ದೀನ್ ಸೇರಿದಂತೆ ಒಟ್ಟು 20 ಮಂದಿ ವಿರುದ್ಧ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಅಜಾನೂರು ಪಂಚಾಯತ್‌ನ 24ನೇ ವಾರ್ಡ್‌ನಲ್ಲಿ ಮತದಾನದ ದಿನದಂದು ಸಂಜೆ ಅಲ್ಲಿನ ಬೂತ್ ಏಜೆಂಟ್ ಆಗಿದ್ದ ಐಎನ್‌ಎಲ್ ಕಾರ್ಯಕರ್ತರಿಗೆ ಯುಡಿಎಫ್‌ನ ತಂಡವೊಂದು ಬೆದರಿಕೆ ಒಡ್ಡಿತ್ತೆನ್ನಲಾಗಿದೆ. ಆ ಬಗ್ಗೆ ನೀಡಲಾದ ದೂರಿನಂತೆ ಅಲ್ಲಿಗೆ ಬಂದ ಹೊಸದುರ್ಗ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಇ.ಅನೂಬ್ ಕುಮಾರ್‌ರ ನೇತೃತ್ವದ ಪೊಲೀಸರ ಜೀಪನ್ನು ಅರ್ಧ ತಾಸಿನ ತನಕ ತಡೆದು ನಿಲ್ಲಿಸಿ, ಜೀಪಿನಿಂದ ಇನ್ಸ್‌ಪೆಕ್ಟರ್ ಅನೂಬ್ ಕುಮಾರ್‌ರನ್ನು ಹಿಡಿದೆಳೆದು ಎದೆಗೆ ಹೊಡೆದು ಅವರನ್ನು ಕೆಳಗೆ ದೂಡಿ ಹಾಕಿರುವುದಾಗಿ ಆರೋಪಿಸಿ ನೀಡಿದ ದೂರಿನಂತೆ ಪೊಲೀಸರು 20 ಮಂದಿ ಯುಡಿಎಫ್ ಕಾರ್ಯಕರ್ತರ ವಿರುದ್ಧ ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.

You cannot copy contents of this page