ಕಂಚಿಕಟ್ಟೆ-ಕೊಡ್ಯಮ್ಮೆ ಸೇತುವೆ ಪುನರ್‌ನಿರ್ಮಾಣ: ನಬಾರ್ಡ್ ತಂಡದಿಂದ ಸ್ಥಳ ಸಂದರ್ಶನ

ಕುಂಬಳೆ: ಜೀರ್ಣಗೊಂಡು ಹಾನಿಯಾದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಸಂಚಾರ ನಿಷೇಧಿಸಿದ ಕುಂಬಳೆ ಪಂಚಾಯತ್‌ನ ಕಂಚಿಕಟ್ಟೆ – ಕೊಡ್ಯಮ್ಮೆ ಸೇತುವೆ ಪುನರ್ ನಿರ್ಮಾಣಕ್ಕೆ ಸಂಬಂಧಿಸಿ ನಬಾರ್ಡ್‌ನ ಜಿಲ್ಲೆಯ ಹಿರಿಯ ಅಧಿಕಾರಿ ಶರಣ್, ನೀರಾವರಿ ಇಲಾಖೆಯ ಅಧಿಕಾರಿಗಳ ತಂಡ ಮೈನರ್ ಇರಿಗೇಶನ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅರ್ಜುನನ್ ಇ.ಕೆ., ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಕುಲನ್ ಟಿ., ಅಸಿಸ್ಟೆಂಟ್ ಇಂಜಿನಿಯರ್ ರಾಘವನ್ ಕೆ. ಮೊದಲಾದವರು ಸ್ಥಳ ಸಂದರ್ಶಿಸಿದರು. ಈ ವೇಳೆ ಬ್ಲೋಕ್ ಪಂಚಾಯತ್ ಸದಸ್ಯ ಪೃಥ್ವಿರಾಜ್ ಶೆಟ್ಟಿ, ನಸೀಮ ಕುಂಬಳೆ, ಪಂಚಾಯತ್ ಉಪಾಧ್ಯಕ್ಷ ಬಲ್ಕೀಸ್, ಸದಸ್ಯರಾದ ಅಬ್ಬಾಸ್, ಮಂಜುನಾಥ ಆಳ್ವ, ಇನಾಸ್ ಫವಾಸ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಸಿ.ಎ. ಸುಬೈರ್, ಯೂಸಫ್ ಉಳುವಾರ್, ತಾಜುದ್ದೀನ್ ಮೊಗ್ರಾಲ್, ಯೂಸಫ್ ಕೆ.ಬಿ, ಜಯಪ್ರಕಾಶ್ ಶೆಟ್ಟಿ, ಮಹೇಶ್ ಪುಣಿಯೂರು, ಹನೀಫ್ ಹಾಜಿ ಎಂಬಿವರಿದ್ದರು. ಸೇತುವೆಯನ್ನು ಪುನರ್ ನಿರ್ಮಿಸಬೇಕೆಂದು ಆಗ್ರಹಿಸಿ ಸ್ಥಳೀಯರು ಈ ಮೊದಲು ಪ್ರತಿಭಟನೆ ನಡೆಸಿದ್ದರು. ವಿಧಾನಸಭೆಯಲ್ಲೂ ಈ ಬಗ್ಗೆ ಬೇಡಿಕೆ ಮುಂದಿಡಲಾಗಿತ್ತು. ಸರಕಾರ ಫಂಡ್ ಲಭ್ಯಗೊಳಿಸಿದ್ದು, ಈಗ ನಬಾರ್ಡ್‌ನ ಸಹಾಯದೊಂದಿಗೆ ಸೇತುವೆ ನಿರ್ಮಿಸಲು ಯತ್ನ ಆರಂಭಗೊಂಡಿದೆ.

RELATED NEWS

You cannot copy contents of this page