ಉಪ್ಪಳ: ಯು.ಡಿ.ಎಫ್ ಮಂಜೇಶ್ವರ ಮಂಡಲ ಚುನಾವಣಾ ಸಮಾವೇಶ ನಿನ್ನೆ ನಯಬಜಾರಿ ನಲ್ಲಿರುವ ಫೆರೋ ಹಾಲ್ನಲ್ಲಿ ನಡೆಯಿತು. ಕರ್ನಾಟಕ ಆರೋಗ್ಯ ಮತ್ತು ದ.ಕ ಜಿಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಅಜೀಜ್ ಮರಿಕೆ ಅಧ್ಯಕ್ಷತೆ ವಹಿಸಿದರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಅಭ್ಯರ್ಥಿ ಎ.ಕೆ.ಎಂ ಅಶ್ರಫ್, ಮಾಜಿ ಸಚಿವ ರಮಾನಾಥ ರೈ, ಆರ್.ಎಸ್.ಪಿ ನಾಯಕ ಬಾಲಕೃಷ್ಣನ್, ಎಂ.ಸಿ ಪ್ರಭಾಕರನ್, ಹಾದಿ ತಂಙಳ್, ಸುಬ್ಬಯ್ಯ ರೈ, ಸುಂದರ ಆರಿಕ್ಕಾಡಿ, ಅಶ್ರಫ್ ಕಾರ್ಲೆ, ಎ.ಕೆ ಆರೀಫ್, ಕಮಲಾಕ್ಷಿ, ಸೋಮಶೇಖರ ಜೆ.ಎಸ್, ಲಕ್ಷ÷್ಮಣ ಪ್ರಭು ಕುಂಬಳೆ, ಫಿದಾ ಊಜಂಪದವು, ಹರ್ಷಾದ್ ವರ್ಕಾಡಿ, ಡಿ.ಎಂ.ಕೆ ಮೊಹಮ್ಮದ್, ಸವಾದ್ ಸುಳ್ಯ, ಸಹಿತ ದ.ಕ ಜಿಲ್ಲಾ ಪ್ರಮುಖ ನಾಯಕರು ಉಪಸ್ಥಿತರಿ ದ್ದರು. ಯು.ಡಿ.ಎಫ್ ಸಂಚಾಲಕ ಮಂಜುನಾಥ ಆಳ್ವ ಸ್ವಾಗತಿಸಿದರು.






