ಕಾಸರಗೋಡು: ರಾಜ್ಯದ ಪಂಚಾಯತ್, ನಗರಸಭೆ ಮತ್ತು ಕಾರ್ಪೋರೇಶನ್ ಒಳಗೊಂಡ ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ. ಶಾಜಿಯವರಿಗೆ ಕಾಸರಗೋಡು ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನದ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ವಹಿಸಿಕೊಟ್ಟಿದ್ದಾರೆ. ಇದೇ ರೀತಿ ಇತರ ಸಚಿವರುಗಳಾದ ಸನ್ನಿ ಜೋಸೆಫ್ರಿಗೆ ಕಣ್ಣೂರು, ಟಿ. ಸಿದ್ದಿಕ್ಗೆ ವಯನಾಡ್, ಎ.ಪಿ. ಅನಿಲ್ ಕುಮಾರ್-ಕಲ್ಲಿಕೋಟೆ, ಪಿ.ಕೆ. ಬಷೀರ್- ಮಲಪ್ಪುರಂ, ಎನ್, ಶಂಸುದ್ದೀನ್-ಪಾಲಕ್ಕಾಡ್, ಒ.ಜೆ.ಜನೀಶ್-ತೃಶೂರು, ರೋಜಿ ಎಂ ಜೋನ್-ಎರ್ನಾಕುಳಂ, ಅನೂಪ್ ಜೇಕಬ್ -ಇಡುಕ್ಕಿ, ಮೋನ್ಸ್ ಜೋಸೆಫ್ -ಕೋಟ್ಟಯಂ, ಎಂ. ಲಿಜು-ಆಲಪ್ಪುಳ, ಪಿ.ಸಿ. ವಿಶ್ವನಾಥ್-ಪತ್ತನಂತಿಟ್ಟ, ಶಿಬು ಜೆ ಬೇಬಿ ಜೋನ್-ಕೊಲ್ಲಂ, ಸಿ.ಪಿ. ಜೋನ್- ತಿರುವನಂತಪುರ ಜಿಲ್ಲೆಯ ಉಸ್ತುವಾರಿ ಸಚಿವ ಹೊಣೆಗಾರಿಕೆ ವಹಿಸಿಕೊಡಲಾಗಿದೆ.






