ಬಂದ್ಯೋಡಿನಲ್ಲಿ ಅಸ್ವಸ್ಥನಾಗಿ ಕಂಡುಬಂದ ವ್ಯಕ್ತಿಯನ್ನು ದೈಗೋಳಿ ಆಶ್ರಮಕ್ಕೆ ಸೇರಿಸಿದ ಸೇವಾಭಾರತಿ

ಉಪ್ಪಳ: ಹಲವು ದಿನಗಳಿಂದ ಬಂದ್ಯೋಡು ಪರಿಸರದಲ್ಲಿ ಅಲೆದಾಡುತಿದ್ದ ಮಾನಸಿಕ ಅಸ್ವಸ್ಥಗೊಂಡ ವ್ಯಕ್ತಿಯೋರ್ವರನ್ನು ನಿನ್ನೆ ಬೆಳಿಗ್ಗೆ ಮಂಗಲ್ಪಾಡಿ ಸೇವಾ ಭಾರತಿ ಕಾರ್ಯಕರ್ತರು ಅವರಿಗೆ ಆಹಾರ, ಪಾನೀಯವನ್ನು ನೀಡಿ ಕುಂಬಳೆ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿ ಬಳಿಕ ದೈಗೋಳಿಯ ಸಾಯಿನಿಕೇತನ ಆಶ್ರಮಕ್ಕೆ ಸೇರಿಸಿದ್ದಾರೆ. ಈ ಹಿಂದೆ ಕೂಡಾ ಅನೇಕ ಬಾರಿ ಸೇವಾಭಾರತಿ ಕಾರ್ಯಕರ್ತರು ಹಲವಾರು ಮಂದಿಯನ್ನು ಆಶ್ರಮಕ್ಕೆ ದಾಖಲಿಸಿ ಸೇವಾಕಾರ್ಯಗಳನ್ನು ನಡೆಸಿದ್ದಾರೆ. ಸಾಯಿನಿಕೇತನ ಆಶ್ರಮ ಇಂತಹ ನೂರಾರು ಮಂದಿಗೆ ಆಶ್ರಯ ನೀಡುತ್ತಾ ಬಂದಿದೆ.

RELATED NEWS

You cannot copy contents of this page