ಕುಂಬಳೆ: ಬಿ.ಎಂ.ಎಸ್ ಶಾಸ್ತಾ ಆಟೋ ಸ್ಟಾ ್ಯಂಡ್ ನಾಯ್ಕಾಪ್ ಇದರ ಚಾಲಕರ ಕುಟುಂಬ ಸಂಗಮ ಸಭೆ ನಾರಾಯಣ ಮಂಗಲ ಗಣೇಶ ಮಂದಿರದಲ್ಲಿ ಜರಗಿತು. ಯೂನಿಟ್ ಅಧ್ಯಕ್ಷ ಲೋಹಿತಾಕ್ಷ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ನಿರ್ಮಾಣ ಸಂಘದ ಜಿಲ್ಲಾ ಕೋಶಾಧಿಕಾರಿ ಐತ್ತಪ್ಪ ನಾರಾಯಣ ಮಂಗಲ ಉದ್ಘಾಟಿಸಿದರು. ಆಗಲಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಜಿ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸುನಿಲ್ ಕುಮಾರ್ ಸ್ವಾಗತಿಸಿ, ಪುರುಷೋತ್ತಮ .ವಂದಿಸಿದರು. ಭಾಸ್ಕರ ಎನ್. ನಿರೂಪಿಸಿದರು







