ಜನಸಾಮಾನ್ಯರನ್ನು ಪಾಲ್ಗೊಳ್ಳಿಸಿ ಕೆಪಿಸಿಸಿಯಿಂದ ಜನಪರ ಚರ್ಚಾ ಸಭೆ

ಕಾಸರಗೋಡು: ಕೆಪಿಸಿಸಿ ನಡೆಸುವ ಸಮರಾಗ್ನಿ ಆಂದೋಲನ ಯಾತ್ರೆಯಂಗವಾಗಿ ವಿವಿಧ ವಲಯಗಳಲ್ಲಿ ಸಂಕಷ್ಟ ಎದುರಿಸುವವರನ್ನು ಪಾಲ್ಗೊಳ್ಳಿಸಿ ಇಂದು ಬೆಳಿಗ್ಗೆ ಕಾಸರಗೋಡು  ಮುನಿಸಿಪಲ್ ಕಾನ್ಫರೆನ್ಸ್ ಹಾಲ್‌ನಲ್ಲಿ  ಚರ್ಚಾ ಸಭೆ ನಡೆಸಲಾಯಿತು.

ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್, ವಿಪಕ್ಷ ನೇತಾರ ವಿ.ಡಿ. ಸತೀಶನ್ ನೇತೃತ್ವ ನೀಡಿದರು. ರಾಜ್ಯ ಸರಕಾರದ ನವಕೇರಳ ಸಭೆಯಲ್ಲಿ ಗಣ್ಯ ಪೌರರನ್ನು ಪಾಲ್ಗೊಳ್ಳಿಸಿ  ನಡೆಸಿದ  ಚರ್ಚೆಯ ರೀತಿಯಲ್ಲೇ ಜನಪರ ಚರ್ಚಾ ಸಭೆ ನಡೆಸಲಾಗಿದೆ.  ಎಂಡೋಸಲ್ಫಾನ್ ಸಂತ್ರಸ್ತರು, ಅಡಿಕೆ ಕೃಷಿಕರು, ವನ್ಯ ಜೀವಿ ಉಪಟಳ ಎದುರಿಸುವವರು, ಸಾಮಾಜಿಕ ಸುರಕ್ಷಾ ಪಿಂಚಣಿ  ಲಭಿಸದೆ ಸಂಕಷ್ಟ ಎದುರಿಸುವವರ ಸಹಿತ ಹಲವು ಮಂದಿ ಪಾಲ್ಗೊಂ ಡರು. ಇವರ ದೂರುಗಳನ್ನು ನೇತಾರರು ಆಲಿಸಿ ಪರಿಹರಿಸಲಿರುವ ಕ್ರಮ ಕೈಗೊಳ್ಳಲಿದ್ದಾರೆ.

You cannot copy contents of this page