ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಸೇವಾ ಸಮಿತಿ ಮತ್ತು ಮಾತೃ ಸಮಿತಿಯ ಸಹಯೋಗದೊಂದಿಗೆ ಶ್ರೀ ವರಮಹಾಲಕ್ಷ್ಮಿ ವೃತಾಚರಣೆ ವೇದಮೂರ್ತಿ ಶಿವರಾಮ್ ಭಟ್ರ ಪೌರೋಹಿತ್ಯದಲ್ಲಿ ನೆರವೇರಿತು.
ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣ ಭಟ್ ಚಂಬಲ್ತಿಮಾರು, ಮೊಕ್ತೇಸರ ಜಗನ್ನಾಥ ರೈ ಪೆರಡಾಲ ಗುತ್ತು, ಸೇವಾ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ಚಂದ್ರಹಾಸ ರೈ ಪೆರಡಾಲ ಗುತ್ತು, ಸೇವಾ ಸಮಿತಿ ಕೋಶಾಧಿಕಾರಿ ವೆಂಕಟಗಿರೀಶ್ ಪಟ್ಟಾಜೆ, ಸೂರ್ಯನಾರಾಯಣ ಬಿ, ಜಯಪ್ರಕಾಶ ಶೆಟ್ಟಿ ಕಡಾರು ಬೀಡು, ಗಣೇಶ ಪ್ರಸಾದ್ ಕಡಪ್ಪು, ಭಾಸ್ಕರ ಪಂಜಿತಡ್ಕ, ಮಾತೃ ಸಮಿತಿ ಅಧ್ಯಕ್ಷೆ ವಿನಯ ಜೆ. ರೈ, ಸೌಮ್ಯ ರವಿ ಪಟ್ಟಾಜೆ, ಹೇಮಾ ಸದಾಶಿವ ಬಂಗೇರ, ಮಮತಾ ಪಟ್ಟಾಜೆ ನೇತೃತ್ವ ನೀಡಿದರು. ಸೇವಾ ಸಮಿತಿ ಸದಸ್ಯರು, ಮಾತೃ ಸಮಿತಿ ಸದಸ್ಯರು ಸಹಕರಿಸಿದರು.







